ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅನ್ನದಾತರ ಸಂಕಷ್ಟಕ್ಕಾಗಿ ಬಾರುಕೋಲಿನ ಏಟು ತಿಂದು ಸಹಿಸಿದ ಶಾಸಕ ಶರಣಬಸಪ್ಪ ಸಲಗರ

ಬೀದರ್/ಬಸವಕಲ್ಯಾಣ : ಅತಿವೃಷ್ಟಿಯ ಕಾರಣದಿಂದಾಗಿ ಹಸಿ ಬರಗಾಲಿಗೆ ಪೀಡಿತರಾದ ಅನ್ನದಾತರ ಕೂಗಿಗೆ ಧ್ವನಿಯಾಗಿ ಬಸವಕಲ್ಯಾಣ ನಗರದಲ್ಲಿ ಗಾಂಧಿವೃತ್ತದವರೆಗೆ ಭಾರತೀಯ ಜನತಾ ಪಕ್ಷದ ರೈತಮೋರ್ಚಾ ವತಿಯಿಂದ ಶಾಸಕ ಶರಣಬಸಪ್ಪ ಸಲಗರ ನೇತೃತ್ವದ ಬೃಹತ್‌ ಪ್ರತಿಭಟನೆ ಅಚ್ಚರಿ ಮೂಡಿಸಿತು. ಬಸವಕಲ್ಯಾಣ ತಾಲೂಕಿನಲ್ಲಿ ಈ ವರ್ಷ ಆದಂತಹ ಅತಿ ವೃಷ್ಟಿಯಿಂದಾಗಿ ರೈತರ ಹೊಲ ಗದ್ದೆಗಳಲ್ಲಿ ಮೊಳಕಾಲಿನವರೆಗೆ ನೀರು ನಿಂತು ಕಟ್ಟೆ ಒಡೆದು ಮಣ್ಣು ಕೊಚ್ಚಿಕೊಂಡು ಹೋಗಿ ಮುಂಗಾರಿನ ಬೆಳೆಗಳಾದ ಸೋಯಾಬೀನ, ಹೆಸರು, ಉದ್ದು, ಎಳ್ಳು , ತೊಗರಿ ಎಲ್ಲವೂ ಹಾಳಾಗಿ ರೈತರು ಸಾಲ ಮಾಡಿ ಬೆಳೆದಂತಹ ಬೆಳೆ ಅಪಾರ ನಷ್ಟವಾಗಿ ರೈತರು ಸಂಕಷ್ಟಕ್ಕೆ ಈಡಾಗಿರುವದನ್ನು ಅರಿತು ಶಾಸಕರು ಸ್ವತಃ ತಾಲೂಕಿನಾದ್ಯಂತ ಹೊಲ ಗದ್ದೆಗಳಿಗೆ ತೆರಳಿ ಸ್ವಯಂ ವೀಕ್ಷಿಸಿ ರೈತರ ಬೆನ್ನಿಗೆ ನಿಂತು ಆಡಳಿತ ಕಾಂಗ್ರೇಸ್ ಸರಕಾರದ ಮಾನ್ಯ ಮುಖ್ಯಮಂತ್ರಿಗಳಿಗೆ ತಹಸೀಲ್ದಾರರ ಮೂಲಕ ರೈತರ ನಿಮ್ಮ ಕೂಗು ಕೇಳದೇ ಹೋಯಿತೆ ಎಂದು ಪ್ರಶ್ನೆ ಮಾಡಿ ರೈತರ ಈ ಸಂಕಷ್ಟಕ್ಕೆ ತತ್ ಕ್ಷಣವೇ ಪರಿಹಾರ ಒದಗಿಸಿ ಎಕರೆಗೆ ಕನಿಷ್ಠ 25 ರಿಂದ 30 ಸಾವಿರ ರೂಪಾಯಿ ಮಹಾರಾಷ್ಟ್ರ ಮಾದರಿಯಲ್ಲಿ ಪರಿಹಾರ ಒದಗಿಸಬೇಕೆಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡು ರೈತರ ಜೊತೆಗೆ ನಾನೂ ಸಹ ಇದ್ದೇನೆ ನನಗೂ ನೋವಿದೆ ಎಂದು ಅಲ್ಲೇ ಇರುವ ಬಾರುಕೊಲಿನಿಂದ ಏಟು ತಿಂದು ನೋವು ನುಂಗಿದ್ದನ್ನು ಕಂಡು ಅಲ್ಲಿದ್ದ ರೈತರು ಭಾವುಕರಾಗಿ ಕಣ್ಣಿರು ಹಾಕುವ ಪ್ರಸಂಗ ನಡೆಯಿತು. ಇನ್ನಾದರೂ ರೈತರ ಸಂಕಷ್ಟಕ್ಕೆ ಜೊತೆಗೂಡಿ ಬೆಳೆ ಪರಿಹಾರ, ಬೆಳೆವಿಮೆ, ಕೃಷ್ಣಾದಂಡೆ ಮೇಲ್ದಂಡೆ ಯೋಜನೆ ತತಕ್ಷಣವೇ ಜಾರಿಗೊಳಿಸಬೇಕೆಂದು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

ವರದಿ: ಶ್ರೀನಿವಾಸ ಬಿರಾದಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!