ಚಿಂಚೋಳಿ ತಾಲೂಕಿನ ರೈತರ ಜೀವನಾಡಿ ಸಿದ್ದಸಿರಿ ಎಥಿನಾಲ್ ಮತ್ತು ಪವರ್ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರು ಚಿಂಚೋಳಿ ಇವರಿಗೆ ರಾಜ್ಯ ಕಬ್ಬು ಬೆಳಗಾರರ ಸಂಘ, ಚಿಂಚೋಳಿ ಮತ್ತು ಕಾಳಗಿ ವತಿಯಿಂದ ಮನವಿ ಸಲ್ಲಿಸಲಾಯಿತು.
ಕಲಬುರಗಿ ಜಿಲ್ಲೆಯಲ್ಲಿ ಅತಿ ದೊಡ್ಡ ಕಾರ್ಖಾನೆಯಾಗಿ ಹೊರಹೊಮ್ಮಿದ ಸಿದ್ದ ಸಿರಿ ಕಾರ್ಖಾನೆ ಎರಡು ಮೂರು ವರ್ಷದಲ್ಲಿ ರೈತರ ಮತ್ತು ತಾಲೂಕಿನ ಚಿತ್ರಣ ಬದಲಿಸಿದ ಮಾನ್ಯ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ರವರಿಂದ ಕಲ್ಯಾಣ ಕರ್ನಾಟಕದ ಅತಿ ಹಿಂದುಳಿದ ತಾಲೂಕು ಚಿಂಚೋಳಿಯಲ್ಲಿ ಕಾರ್ಖಾನೆ ಈಗಾಗಲೇ ಪ್ರಾರಂಭವಾಗಿದ್ದು ತಾಲೂಕಿನ ರೈತರಿಗೆ ಎಲ್ಲಿಲ್ಲದ ಹಬ್ಬದ ಸಂಭ್ರಮ. ಈ ಸಿದ್ದ ಸಿರಿ ಕಾರ್ಖಾನೆಯ ಮಾಲಿಕರಿಗೆ ಇಡೀ ನಾಲ್ಕಾರು ತಾಲೂಕ ರೈತರ ವಿಶೇಷವಾಗಿ ಚಿಂಚೋಳಿ ತಾಲೂಕಿನ ರೈತರ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು.
ಈಗಾಗಲೇ ರೈತನ ಫಸಲು ಕಟಾವಿಗೆ ಬಂದಿದ್ದು ರೈತ ಕಬ್ಬು ಕಳಿಸುವ ಆತುರದಲ್ಲಿದ್ದಾನೆ. ಕಬ್ಬು ಕಟಾವು ಮಾಡಲು ಬಂದ ಟೋಳಿ ಮತ್ತು ಕಟಾವ್ ಮಾಡುವ ಮಷೀನ್ ದವರು ಎಕರೆಗೆ ನಾಲ್ಕು ಸಾವಿರದಿಂದ ಹತ್ತು ಸಾವಿರ ತೆಗೆದುಕೊಂಡ ಉದಾಹರಣೆ ಬಹಳಷ್ಟು ಇವೆ. ಆದ ಕಾರಣ ತಾವುಗಳು ರೈತರನ್ನು ಕರೆಸಿ ರೈತರ ಸಮ್ಮುಖದಲ್ಲಿ ಮಷಿನ್ ಮಾಲಕರಿಗೆ ಮತ್ತು ಲೇಬರ್ ಗಳಿಗೆ ಈ ತರಹ ಯಾವುದೇ ಹಣ ಪಡೆಯಬಾರದೆಂದು ತಿಳಿಸಬೇಕು ಮತ್ತು ಕೋಳಿ ಕುರಿ ಕೂಡಾ ಕೇಳುತ್ತಾರೆ ದಯಮಾಡಿ ಇದಕ್ಕೆ ಕಡಿವಾಣ ಹಾಕಬೇಕು ಮತ್ತು ಈಗಾಗಲೇ ಅತಿವೃಷ್ಟಿಯಿಂದ ರೈತ ಕಷ್ಟದಲ್ಲಿದ್ದಾನೆ. ಈಗಾಗಲೇ ತಮ್ಮ ಫೀಲ್ಡ್ ಮ್ಯಾನ್ಗಳಿಗೆ ರೈತನ ಕಬ್ಬು ಕಟಾವ್ ಮಾಡಲು ದಿನ ನಿಗದಿಪಡಿಸಿ ಸರಿಯಾದ ಸಮಯಕ್ಕೆ ಕಟಾವ್ ಮಾಡಿಕೊಂಡು ಹೋಗಲು ತಿಳಿಸಬೇಕಾಗಿ ವಿನಂತಿ. ಹಿಂದೆ ತಾವು ಮೆಕ್ಕೆಜೋಳ ಬಿತ್ತನೆ ಬಗ್ಗೆ ರೈತರಿಗೆ ಅರಿವು ಮೂಡಿಸಿದ್ದೀರಿ ಈಗಾಗಲೇ ರೈತರ ಹೊಲಗಳು ಎರಡು ತಿಂಗಳಲ್ಲಿ ಖಾಲಿಯಾಗುತ್ತೆ ದಯಮಾಡಿ ಮೆಕ್ಕೆಜೋಳದ ಬಗ್ಗೆ ಮತ್ತೊಮ್ಮೆ ಅರಿವು ಮೂಡಿಸಬೇಕೆಂದು ತಮ್ಮಲ್ಲಿ ಮತ್ತೊಮ್ಮೆ ವಿನಂತಿ ಮಾಡಿಕೊಳ್ಳುತ್ತೇವೆ. ರೈತರು ಆತಂಕ ಪಡುವುದು ಬೇಡ ಎಂದು ಕಾರ್ಖಾನೆ ಮುಖಾಂತರ ರೈತರಿಗೆ ತಾವು ಮನವರಿಕೆ ಮಾಡಬೇಕು, ಕಳೆದೆರಡು ವರ್ಷ ಕಬ್ಬಿನ ಬೆಳೆ ಬೆಳೆದ ರೈತರು ಬಹಳ ನೊಂದಿದ್ದಾರೆ. ಮತ್ತು ಬೇರೆ ಕಾರ್ಖಾನೆ ಕಳಿಸಿದ ಕಬ್ಬಿಗೆ ಇನ್ನೂವರೆಗೂ ಕಬ್ಬಿನ ಹಣ ಬಂದಿಲ್ಲ. ನಾಲ್ಕು ತಿಂಗಳಾದರೂ ನಾವು ಕಬ್ಬು ಖರೀದಿಸುತ್ತೇವೆ ತಾವು ಯಾವ ಆತಂಕ ಪಡುವುದು ಬೇಡ ಎಂದು ಕಾರ್ಖಾನೆ ಮುಖಾಂತರ ರೈತರಿಗೆ ತಿಳಿಸಬೇಕು. ಈಗಾಗಲೇ ತಾಲೂಕಿನಲ್ಲಿ ಬೇರೆ ಕಾರ್ಖಾನೆಯವರು ಓಡಾಡುತ್ತಿದ್ದು ಆ ಕಾರ್ಖಾನೆಗೆ ರೈತರು ಕೊಡುವುದಿಲ್ಲ ಎಂದು ತಿಳಿಸಿರುತ್ತಾರೆ. ಚಿಂಚೋಳಿಯಲ್ಲಿ ಸಿದ್ದ ಸಿರಿ ಕಾರ್ಖಾನೆ ಪ್ರಾರಂಭವಾದ ಮೇಲೆ ಈ ದರ ನಾವು ಕಾಣುತ್ತಿದ್ದೇವೆ ಬೇರೆ ಕಂಪನಿಯವರು ಸಿದ್ದಸಿರಿ ಬಂದ ಮೇಲೆ ಮಾತ್ರ ಹೆಚ್ಚಿನ ದರ ಮಾಡಿದ್ದಾರೆ ಸಿದ್ಧಸಿರಿ ಕಾರ್ಖಾನೆಯ ಮಾಲೀಕರಿಗೆ ನಾವು ಕಬ್ಬು ಕೊಟ್ಟು ಅವರು ಹಾಕಿದ ಕಾರ್ಖಾನೆಯ ಋಣ ತೀರಿಸಬೇಕೆಂಬುದು ತಾಲೂಕಿನ ರೈತರ ಮಾತು. ತಾಲೂಕಿನಲ್ಲಿ ಕಬ್ಬು ಕಟಾವು ಮಷಿನ್ ಮತ್ತು ಲೇಬರ್ ತಾಲೂಕಿನಲ್ಲಿಯೂ ತೆಗೆದುಕೊಳ್ಳಬೇಕು, ಕಾರ್ಖಾನೆ ವತಿಯಿಂದ ತಾಲೂಕಿನ ರೈತರಿಗೆ ಕಬ್ಬು ಕಟಾವು ಮಷಿನಗಳು ಖರೀದಿ ಮಾಡಲು ಅನುವು ಮಾಡಿ ಕೊಡಬೇಕಾಗಿ ವಿನಂತಿ. ಪ್ರಸ್ತುತ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಕಬ್ಬಿನ FRP ಮೊತ್ತವು ಉತ್ಪಾದನಾ ವೆಚ್ಚಕ್ಕೆ ತಕ್ಕಂತೆ ರೈತರಿಗೆ ನ್ಯಾಯಸಮ್ಮತ ಬೆಲೆ ನೀಡುವುದಲ್ಲದೆ ಇತ್ತೀಚಿನ ವರ್ಷದಲ್ಲಿ ಉತ್ಪಾದನಾ ವೆಚ್ಚವು ಹೆಚ್ಚಾಗಿರುವುದರಿಂದ ರೈತರಿಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ. ಅತಿವೃಷ್ಟಿಯಿಂದ ಬೆಳೆ ಹಾನಿ ಸೇರಿದಂತೆ ಹಲವಾರು ತೊಂದರೆಗಳಿಂದ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ರೈತನ ಗಾಡಿಗಳು ಓಡಾಡಲು ಕೂಡಲೆ ರಸ್ತೆ ದುರಸ್ತಿ ಕಾರ್ಯ ಮಾಡಬೇಕು, ರಾಜ್ಯಸರ್ಕಾರವು FRP ಮೊತ್ತದ ಹೊರತಾಗಿ ಹೆಚ್ಚುವರಿ ಕಬ್ಬಿನ ಬೆಲೆ ನಿಗದಿಪಡಿಸಬೇಕು, ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳು ಮತ್ತು ರೈತ ಸಂಘಟನೆಗಳ ಸಭೆಯಲ್ಲಿ ಈಗಾಗಲೇ ಪ್ರಸ್ತಾವಿಸಲಾಗಿದೆ. ರೈತರಿಗೆ ತಕ್ಷಣ ಸಭೆ ಕರೆಯಬೇಕು. ಸಭೆಯಲ್ಲಿ ಪರಸ್ಪರ ಸಮನ್ವಯ ಮೂಲಕ ನ್ಯಾಯಸಮ್ಮತವಾದ ಬೆಲೆ ನಿಗದಿಪಡಿಸಿ, ಸಕ್ಕರೆ ಕಾರ್ಖಾನೆ ಪ್ರಾರಂಭಿಸುವಂತೆ ವಿನಂತಿಸಿ, ನಿಮ್ಮ ಸಹಕಾರ ನಿರೀಕ್ಷಿಸುತ್ತೇವೆ ರೈತರ ನಿಯೋಗದ ಮನವಿ ಸ್ವೀಕರಿಸಿದ ಶಿವಕುಮಾರ ಪಾಟೀಲ್ ಜಿ.ಎಂ, ಸಿದ್ದಸಿರಿ ಕಾರ್ಖಾನೆ ಮತ್ತು ಶರಣು ಪಾಟೀಲ್ ಮನವಿ ಸ್ವೀಕರಿಸಿ ಕೂಡಲೇ ತಾವು ಹೇಳಿರುವುದನ್ನು ಕಾರ್ಯರೂಪಕ್ಕೆ ತಂದು ಸರಿಪಡಿಸುತ್ತೇನೆ ಮತ್ತು ಕಾರ್ಖಾನೆ ಅಧ್ಯಕ್ಷರಾದ ಬಸನಗೌಡ ಪಾಟೀಲ್ ಯತ್ನಾಳ ರವರಿಗೆ ತಿಳಿಸುತ್ತೇವೆ ಎಂದರು.
ಇದೇ ತಿಂಗಳು 24 ನೇ ತಾರೀಖಿನಂದು ಕಾರ್ಖಾನೆ ಪೂಜೆ ಇರುತ್ತದೆ ದಯಮಾಡಿ ಎಲ್ಲಾ ರೈತ ಬಾಂಧವರು ಆಗಮಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಿಯೋಗದ ಮುಖಂಡರುಗಳಾದ
ವೀರಣ್ಣ ಗಂಗಾಣಿ ಅಧ್ಯಕ್ಷರು ತಾಲೂಕು ಘಟಕ ಚಿಂಚೋಳಿ, ಶಿವರಾಜ ಪಾಟೀಲ್ ಗೊಣಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ಮಲ್ಲಿಕಾರ್ಜುನ ರದನೂರು, ರಾಜಕುಮಾರ ತಳವಾರ, ಸಿದ್ದರಾಮ ಪಾಟೀಲ್ ಚೇತನ ಸುಲೇಪೇಟ, ಸೂರ್ಯಕಾಂತ ಪಾಟೀಲ್, ವಿಶ್ವನಾಥ, ಬಸವರಾಜ, ಆಕಾಶ ಸಿಗಿ, ಶ್ರೀಹರಿ, ಬೈನೂರ ಸಿದ್ದರಾಮ ಸಿದ್ದಪ್ಪ ವಿಠಲ, ಪ್ರಜ್ವಲ್, ಅರುಣಕುಮಾರ, ಮರೆಗಪ್ಪ, ನೀಲಕಂಠ ಕಲ್ಬುರ್ಗಿ, ರಮೇಶ ಪಾಟೀಲ್, ಜಾಕಿರ ಪಟೇಲ್, ಮನೋಹರ ವಿಶ್ವಕರ್ಮ, ಭದ್ರಯ್ಯ, ಶ್ರೀಶೈಲ ರೆಡ್ಡಿ ವಿಶ್ವನಾಥ್ ಐನೊಳಿ ಸೇರಿದಂತೆ ಆನೇಕರು ಉಪಸ್ಥಿತರಿದ್ದರು.
ವರದಿ ವಿ. ಎಸ್. ಗಂಗಾಣಿ



















