
ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣ ಹನೂರು ತಾಲೂಕು ಘಟಕದ ಸಭೆ ಹಾಗೂ ಹನೂರು ಟೌನ್ ಘಟಕ ಮತ್ತು ಹೋಬಳಿ ಘಟಕ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಆಯ್ಕೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಆರ್ ಎಂ ಸಿ ಆವರಣದಲ್ಲಿ ಇಂದು ಕರ್ನಾಟಕ ರಕ್ಷಣ ವೇದಿಕೆ ಪ್ರವೀಣ್ ಶೆಟ್ಟಿ ಬಣ ಹನೂರು ತಾಲೂಕು ಘಟಕದ ಸಭೆ ನಡೆಸಿ ಹನೂರು ಟೌನ್ ಘಟಕ ಮತ್ತು ಹೋಬಳಿ ಘಟಕ ಉದ್ಘಾಟನೆ ಮಾಡಲಾಯಿತು ನಂತರ ಇದೇ ಸಂದರ್ಭದಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು. ಶ್ರೀಯುತ ರಾಹಿಲ್ ಬೇಗ್ ಅವರಿಗೆ ಜಿಲ್ಲಾ ಉಪಾಧ್ಯಕ್ಷ ಹಾಗೂ ಹನೂರು ತಾಲೂಕಿನ ಉಸ್ತುವಾರಿಯಾಗಿ ನೇಮಕ ಮಾಡಲಾಯಿತು.
ನೂತನ ಉಪಾಧ್ಯಕ್ಷ ಹಾಗೂ ಹನೂರು ಉಸ್ತುವಾರಿ ಆಗಿ ನೇಮಕ ಆದ ರಾಹಿಲ್ ಬೇಗ್ ಅವರು ಮಾತನಾಡಿ ನಾನು ಕರ್ನಾಟಕ ರಕ್ಷಣ ವೇದಿಕೆ ಪ್ರವೀಣ್ ಶೆಟ್ಟಿ ಬಣ ಇದರಲ್ಲಿ ಸುಮಾರು ವರ್ಷಗಳಿಂದ ನಿಸ್ವಾರ್ಥ ಹಾಗೂ ಸಾಮಾಜಿಕ ಕಳಕಳಿಯಿಂದ ನ್ಯಾಯಯುತವಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ ಮುಂದೆಯೂ ಸಹ ಇದೇ ರೀತಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಕೆಲಸ ಮಾಡುತ್ತೇನೆ ಎಂದರು ನಂತರ ನನಗೆ ಈ ಜಿಲ್ಲಾ ಉಪಾಧ್ಯಕ್ಷ ಹಾಗೂ ಹನೂರು ಉಸ್ತುವಾರಿಯಾಗಿ ಮಾಡಿದ್ದು ಇನ್ನೂ ಹೆಚ್ಚು ಸೇವೆ ಮಾಡಲು ನನ್ನ ಜವಾಬ್ದಾರಿ ಹೆಚ್ಚು ಆಗಿದೆ ಅದನ್ನು ನಾನು ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತೇನೆ ಎಂದರು. ಹಾಗೆಯೇ ಹನೂರು ಟೌನ್ ಘಟಕದ ಅಧ್ಯಕ್ಷರಾಗಿ ತೌಸಿಫ್ ಅಹಮದ್ ಅವರನ್ನು ನೇಮಕ ಮಾಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಆರ್ ಮೋಹನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಿಯಾಜ್ ಪಾಶ ಜಿಲ್ಲಾ ಸಲಹೆಗಾರರಾದ ಬಸವರಾಜ್ ಹಣಗಳ್ಳಿ ತಾಲೂಕ ಅಧ್ಯಕ್ಷರಾದ ನೇಮತ್ ಪಾಶ ರವರು ಹಾಗೂ ತಾಲೂಕಿನ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.
ವರದಿ: ಉಸ್ಮಾನ್ ಖಾನ್




















