ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದ ಚಂದಾಪುರದ ಹಳೆ ತಹಶೀಲ್ದಾರ ಕಾರ್ಯಾಲಯ ಆವರಣದಲ್ಲಿರುವ ದೇವರಾಜ್ ಅರಸು ಭವನದಲ್ಲಿ ತಾಲೂಕ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ , ಅವರ ಜಯಂತೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವಕ್ಕೆ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರು ಸಸಿಗೆ ನೀರು ಹಾಕು ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ಅವರು ಮಾತನಾಡಿ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಮೂರನೇ ವರ್ಷದ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಬಹಳಷ್ಟು ಸಂತೋಷವಾಗಿದ್ದು ಯಾಕಂದ್ರೆ ಭಾರತದ ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಕೂಡಾ ಬ್ರಿಟಿಷರ ವಿರುದ್ಧ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಅವರು ಹೋರಾಡಿ ಭಾರತ ದೇಶ ಸ್ವತಂತ್ರ ತರಲು ಶ್ರಮಿಸಿದ್ದಾರೆ ಮತ್ತು ಭಾರತ ದೇಶದಲ್ಲಿ ಮೊಟ್ಟಮೊದಲ ಸ್ವತಂತ್ರ ಸೇನೆಯಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಏಕೈಕ ಮಹಿಳೆ ಯಾರಂದರೆ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ, ಅವರು ಅವರ ಕುಟುಂಬವನ್ನೇ ಭಾರತ ದೇಶಕ್ಕಾಗಿ ಪಣಕ್ಕಿಟ್ಟು ಭಾರತ ದೇಶಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿ ತಮ್ಮ ಪ್ರಾಣವನ್ನು ಲೆಕ್ಕಿಸದ ಒಬ್ಬ ಮಹಿಳೆ ಭಾರತ ದೇಶದ ಸ್ವತಂತ್ರಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿ ಭಾರತ ಸ್ವಾತಂತ್ರ್ಯಕ್ಕಾಗಿ ಅವರ ಪ್ರಾಣವನ್ನು ಒತ್ತೆ ಇಟ್ಟು ಹೋರಾಟ ಮಾಡಿದ್ದಾರೆ ನಾವೆಲ್ಲರೂ ವೀರ ರಾಣಿ ಕಿತ್ತೂರಾಣಿ ಚೆನ್ನಮ್ಮನವರ ತತ್ವ ಸಿದ್ಧಾಂತಗಳು ನಾವು ಎಲ್ಲರೂ ಅಳವಡಿಸಿಕೊಂಡು ಇಂದು ತಾಲೂಕ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಜಯಂತಿ ಮಾಡಿದ್ದು ಬಹಳಷ್ಟು ಸಂತೋಷ ಆಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಶ್ರೀ ಕರುಣೇಶ್ವರ ಶಿವಾಚಾರ್ಯರು ಕಂಚಲಕುಂಟಿ ನಂದೀಶ್ವರ ಮಠದ ನಿಡಗುಂದ, ಭಗಿನಿ ಬಿ.ಕೆ. ವಿಜಯಲಕ್ಷ್ಮಿ ಪ್ರಜಾಪಿತ ಬ್ರಹ್ಮಕುಮಾರಿ ಕೇಂದ್ರ ಚಿಂಚೋಳಿ, ಪುರಸಭೆ ಅಧಿಕಾರಿಗಳಾದ ನಿಂಗಮ್ಮ ಬಿರಾದರ್, ತಾಲೂಕ ಆರೋಗ್ಯ ಇಲಾಖೆ ಅಧಿಕಾರಿಗಳಾದ ಡಾಕ್ಟರ್ ಮಹಮದ್ ಗಫರ, ಪಿಡಬ್ಲ್ಯೂಡಿ ಇಲಾಖೆಯ ಅಧಿಕಾರಿಗಳಾದ ಅಂಬರಾಯ ಪಾಟೀಲ್, ಗಿರಿರಾಜ್ ಸರ್ಜನ್,
ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ರಮೇಶ್ ಪಡೆಶೆಟ್ಟಿ, ಶರಣು ಪಾಟೀಲ್ ಮೋತಕಪಳಿ, ರವೀಂದ್ರ ಎಸ್ ಪಾಟೀಲ್, ಪ್ರದೀಪ್ ದೇಶಮುಖ್, ಜಗದೀಶ ಸಜ್ಜನ್, ಸಂಜೀವ ಕುಮಾರ್ ಪಾಟೀಲ್, ಕಾಶಿನಾಥ್ ಮಡಿವಾಳ, ಮಲ್ಲಿನಾಥ್ ಮಲ್ಲಿನಾಥ ಮೇಲಗಿರಿ, ವೀರೇಶ ದೇಸಾಯಿ, ಶಿವಶರಣಪ್ಪ ಡೆಂಗಿ, ಮತ್ತು ಅನೇಕ ವೀರಶೈವ ಲಿಂಗಾಯತ್ ಸಮಾಜದ ಬಾಂಧವರು ಹಾಗೂ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮನ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ ಎಸ್ ವಿ ಗಂಗಾಣಿ




















