ಕಲಬುರಗಿ/ ಚಿಂಚೋಳಿ :ಚಿಂಚೋಳಿ ಪಟ್ಟಣದ ಬಸ್ ನಿಲ್ದಾಣದ ಹತ್ತಿರ, ಡಾ. ಪುನೀತ್ ರಾಜಕುಮಾರ್ ಅವರ ನಾಲ್ಕನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಾಲ್ಕನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ನೂರಾರು ಜನ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿ ಪುಷ್ಪ ನಮನ ಸಲ್ಲಿಸಿ. ಜಯ ಅಪ್ಪು, ಜೈ ಅಪ್ಪು ಬಾಸ್, ಜೈಕಾರ ಹಾಕಿದರು. ಒಂದು ನಿಮಿಷಗಳ ಕಾಲ ಮೌನಚರಣೆ ಮಾಡಿದರು. ಆಯೋಜಕರು ಡಾ. ಪುನೀತ್ ಅಭಿಮಾನಿ ಬಳಗದ ಅಧ್ಯಕ್ಷರಾದ ಸಾಗ್ಯ ಆಟೋ, ಈ ಸಂದರ್ಭದಲ್ಲಿ ಮಾತನಾಡಿದ ಮಾದಿಗ ಸಮಾಜದ ಹಿರಿಯ ಮುಖಂಡರಾದ ಗೋಪಾಲ್ ರಾವ್ ಕಟ್ಟಿಮನಿ, ಅವರು ಪುನೀತ್ ರಾಜಕುಮಾರ್ ರವರು ಒಬ್ಬ ಆದರ್ಶ ವ್ಯಕ್ತಿ ಕರ್ನಾಟಕ ಕಂಡ ಅಪರೂಪದ ನಟ ಬಲಗೈಯಿಂದ ಕೊಟ್ಟದ್ದು ಎಡಗೈಗೆ ಗೊತ್ತಾ ಬಾರದಂತೆ ನಡೆದುಕೊಂಡು ಬಂದವರು ಯಾರಾದರೂ ಇದ್ದರೆ ಅವರೇ ಡಾ. ಪುನೀತ್ ರಾಜಕುಮಾರ್ ರವರು ನಮ್ಮನ್ನು ಅಗಲಿ ಇಂದಿಗೆ ನಾಲ್ಕು ವರ್ಷ ನಡೆಯಿತು. ಅವರು ಇಲ್ಲ ಎಂದು ನಾವು ಎಂದು ಭಾವಿಸಲಿಲ್ಲ ಎಂದರು. ಮತ್ತು ಅವರ ಮಾಡಿರುವ ಸೇವೆ ನಾವೇ ಎಂದಿಗೂ ಮರೆಯಬಾರದು. ಮತ್ತು ನಾವು ಸಹ ಅಳಿಲು ಸೇವೆ ಸಮಾಜದಲ್ಲಿ ಮಾಡುವೆ ಎನ್ನುವ ಮಾತುಗಳನ್ನು ಹೇಳಿದರು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸುರೇಶ್ ದೇಶಪಾಂಡೆ, ವಿಠ್ಠಲ್ ಕುನಾಳೆ, ಕೆ ಎಮ್ ಬಾರಿ, ಗೋಪಾಲ್ ಇಡುಗೊಪ, ಶರಣಯ್ಯ ಸ್ವಾಮಿ, ಎಸ್ ಕೆ ಹಸನ್, ಕೆ ಎಸ್ ಆರ್ ಟಿ ಸಿ ವ್ಯವಸ್ಥಾಪಕರಾದ ಸುರೇಶ್ ತೆಗಲತಿಪ್ಪಿ, ಆನಂದ್ ಹಿತ್ತಲ, ನರಸಪ್ಪ, ಅನಿಲ್ ಮುಟ್ಟಿ, ಮತ್ತು ನಗರದ ವ್ಯಾಪಾರಸ್ಥರು ಅಪ್ಪು ಅಭಿಮಾನಿ ಬಳಗ ಇದ್ದರು .
ವರದಿ ಎಸ್ ವಿ ಗಂಗಾಣಿ.



















