ಬೀದರ್ ಜಿಲ್ಲೆಯ ಬಸವಕಲ್ಯಾಣ ಸಮಸ್ತ ನಾಗರೀಕರ ಪರವಾಗಿ ವಿಶ್ವ ಹಿಂದೂ ಪರಿಷತ್ತು, ಭಜರಂಗದಳದ ವತಿಯಿಂದ ಕಳೆದ 2022 ರಿಂದ ಇಲ್ಲಿಯವರೆಗೆ ನಗರದ ಪವಿತ್ರ ಹಾಗೂ ಪುಣ್ಯಸ್ಥಳ, ಜೊತೆಗೆ ಸಾಮಾಜಿಕ ನ್ಯಾಯ ನೀಡುವ, ಐತಿಹಾಸಿಕ ಪರಷುಕಟ್ಟೆಯ ಕಟ್ಟೆಯ ಪಕ್ಕದಲ್ಲಿ ಈ ಮೊದಲು ಗಣೇಶ ಮಂದಿರ ಮತ್ತು ಮಹಾದೇವ ಮಂದಿರ ಇದ್ದದ್ದನ್ನು, ಅಭಿವೃದ್ಧಿಯ ನೆಪದಲ್ಲಿ ತೆರವುಗೊಳಿಸಿ, ಅಲ್ಲಿರುವ ಮೂರ್ತಿಗಳನ್ನು ಸ್ಥಳಾಂತರಿಸುವುದಕ್ಕೆ ಖಂಡಿಸಿ, ನಗರದ ಯಾವದಾದರೂ ಪ್ರದೇಶದಲ್ಲಿ ಸರ್ಕಾರವೇ ಸ್ಥಳಾವಕಾಶ ಮಾಡಿ ಗಣೇಶ ಮಂದಿರ ಮತ್ತು ಮಹಾದೇವ ಮಂದಿರಕ್ಕೆ ಅನುದಾನ ನೀಡಿ, ಪುನರ್ ನಿರ್ಮಾಣ ಮಾಡಿ ,ಅಭಿವೃದ್ಧಿ ಪಡಿಸಬೇಕಾಗಿ ಹಲವು ಸಲ ಬೇಡಿಕೆ ಇಟ್ಟು ಮಾನ್ಯ ಮುಖ್ಯ ಅಧಿಕಾರಿಗಳು ಧಾರ್ಮಿಕ ದತ್ತಿ ಇಲಾಖೆ, ಬೆಂಗಳೂರು ರವರಿಗೂ ಹಾಗೂ ಬಿಕೆಡಿಬಿ ಆಯುಕ್ತರಿಗೂ ಮನವಿ ಸಲ್ಲಿಸಿಲಾಗಿದೆ, ಇದರ ಪ್ರತ್ಯುತ್ತರವಾಗಿ ಈ ಮನವಿಗೆ ಧಾರ್ಮಿಕ ದತ್ತಿ ಇಲಾಖೆ ಬೆಂಗಳೂರವರು ಮಾನ್ಯ ಅಪರ ಜಿಲ್ಲಾಧಿಕಾರಿಗಳ ಮೂಲಕ ಆದೇಶಿಸಿ, ಮನವಿ ಪತ್ರದ ಮೂಲಕ ವಿನಂತಿಸಿದರೂ ಇದರ ಬಗ್ಗೆ ಯಾವ ಕ್ರಮ ಜರುಗಿಸಿರುವುದಿಲ್ಲ. ಹಾಗೂ ಸದರಿ ಪತ್ರದಲ್ಲಿನ ಅಂಶಗಳು ನಿಯಮಾನುಸಾರವಾಗಿ ಪರಿಶೀಲಿಸಿ ಅಗತ್ಯ ಕ್ರಮ ಅಥವಾ ನಿರ್ಣಯ ಸಹ ಕೈಗೊಂಡಿಲ್ಲ. ಇದು ಯಾವ ನ್ಯಾಯ ಈ ವಿಷಯದ ಕುರಿತು ಗಂಭೀರತೆಯನ್ನು ತೆಗೆದುಕೊಳ್ಳದೆ ಇರುವುದೇ ವಿಪರ್ಯಾಸ ಅದ್ದರಿಂದ ದಯಾಮಾಡಿ ಈ ವಿಷಯದ ಕುರಿತು ಸೂಕ್ತ ಕ್ರಮ ಕೈಗೊಂಡು ಬಸವಕಲ್ಯಾಣ ನಗರದ ನಿವಾಸಿಗಳು ಹಾಗೂ ವಿಶ್ವ ಹಿಂದೂ ಪರಿಷತ್ತು, ಭಜರಂಗದಳದ ವಿನಂತಿಗೆ ಸ್ಪಂದಿಸಿ ಈ ಕೂಡಲೇ ನ್ಯಾಯ ದೊರಕಿಸಿಕೊಡಬೇಕೆಂದು ತಮ್ಮಲ್ಲಿ ಮತ್ತೊಮೆ ವಿನಂತಿಸಲಾಗಿದೆ. ಇಲ್ಲವಾದಲ್ಲಿ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ಮುಂದೆ ಒಂದು ದಿನ ಸಾಂಕೇತಿಕ ಧರಣಿ ಕೂಡಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ತು, ಭಜರಂಗದಳದ ಮೂಲಕ ಎಚ್ಚರಿಕೆ ನೀಡಲಾಯಿತು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಶ್ರೀ ಶ್ರೀಶೈಲ ವಾತಡೆ ,ಭಜರಂಗದಳ ಸಂಯೋಜಕರಾದ ರವಿ ನಾವದ್ಗೇಕರ, ಸುರೇಶ ಜಮ್ಮು, ಶ್ರೀನಿವಾಸ ಬಿರಾದರ, ವಿನೋದ ಬಡಿಗೇಕರ, ಸಚಿನ ಗರುಡಕರ ಇತರರು ಇದ್ದರು.
ವರದಿ : ಶ್ರೀನಿವಾಸ ಬಿರಾದಾರ



















