ಆಂಧ್ರ ಪ್ರದೇಶದ ಕುಪ್ಪಮ್, ದ್ರಾವಿಡಿಯನ ವಿಶ್ವವಿದ್ಯಾನಿಲಯವು ಉಪನ್ಯಾಸಕಿ ಬಸ್ಸಮ್ಮ ಅವರಿಗೆ ಡಾಕ್ಟರೇಟ್ (ಪಿ. ಎಚ್. ಡಿ ) ಪದವಿ ನೀಡಿದೆ. ಬಸಮ್ಮ ಅವರು ಗಂಗಾವತಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗ ಪ್ರಾಧ್ಯಾಪಕ ಡಾ. ಅಬ್ದುಲ್ ರೆಹಮಾನ್ ಅವರ ಮಾರ್ಗದರ್ಶನದಲ್ಲಿ ಎಕನಾಮಿಕ್ ಎಂಪವರ್ ಮೆಂಟ್ ಆಫ್ ವಿಮೆನ್ ಥ್ರೋ ಮೈಕ್ರೋ – ಫೈನಾನ್ಸ್ : ಎ ಕೇಸ್ ಸ್ಟಡಿ ವಿಥ್ ರಿಫ್ರೆರೆನ್ಸ್ ಟು ಕೊಪ್ಪಳ ಡಿಸ್ಟ್ರಿಕ್ಟ್ ಎಂಬ ಮಹಾ ಪ್ರಬಂಧವನ್ನು ವಿಶ್ವ ವಿದ್ಯಾನಿಲಯಕ್ಕೆ ಸಲ್ಲಿಸಿದ್ದರು.
ಪ್ರಸ್ತುತ ಡಾ. ಬಸಮ್ಮ ಅವರು ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಾಹಿಳಾ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿ ಕಳೆದ ಹತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಡಾ. ಬಸಮ್ಮ ಅವರಿಗೆ ಅವರ ಕುಟುಂಬದವರು, ಸ್ನೇಹಿತರು, ಕಾಲೇಜಿನ ಸಹದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
- ಕರುನಾಡ ಕಂದ ಪತ್ರಿಕೆ




















