ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಹಾ ಶಿವಶರಣೆ ಶ್ರೀ ಭೀಮಾಂಬಿಕಾದೇವಿ ಮಠದಲ್ಲಿ ೩೮೧ ನೇ ಶಿವಾನುಭವ ಗೋಷ್ಠಿ

ಮಾತೆ ಮುತ್ತು ಮಾತೆ ಮೃತ್ಯು

ಕೊಪ್ಪಳ/ ಯಲಬುರ್ಗಾ : ತಾಲೂಕಿನ ಸುಕ್ಷೇತ್ರ ದಮ್ಮೂರ ಗ್ರಾಮದ ಶ್ರೀ ಭೀಮಾಂಬಿಕಾ ದೇವಿ ಮಠದಲ್ಲಿ ಚತುರ್ದಶಿ ಅಂಗವಾಗಿ ಡಿ. ೧೮ ರಂದು ಜರುಗಿರುವ ೩೮೧ ನೇ ಶಿವಾನುಭವಗೋಷ್ಠಿಯಲ್ಲಿ ಮಠದ ಒಡೆಯರಾದ ಹನುಮಂತಪ್ಪಜ್ಜ ಧರ್ಮರ ಹಾಗು ಶರಣಯ್ಯ ಹಿರೇಮಠ ಸಾನಿದ್ಯವಹಿಸಿದ್ದರು. ಮಾತೆ ಮುತ್ತು ಮಾತೆ ಮೃತ್ಯು ವಿಚಾರ ಚಿಂತನ ಮಂತನ ಗೋಷ್ಠಿಯಲ್ಲಿ ಕರಮುಡಿಯ ವೀರಯ್ಯ ಹಿರೇಮಠ ಅವರು ಮಾತನಾಡಿ ನಾವು ಮಾತನಾಡುವ ಮಾತು ಬೇರೆಯವರ ಮನಸ್ಸಿಗೆ ತೊಂದರೆಯಾಗಬಾರದು ,ನಾವು ಮಾತನಾಡುವ ಮಾತು ನುಡಿದರೆ ಮುತ್ತಿನ ಹಾರದಂತಿರಬೇಕು ಎಂಬ ಶರಣರ ವಚನದಂತೆ ಇರಬೇಕು ಎಂದರು. ೩೨ ವರ್ಷದಿಂದ ಇಲ್ಲಿಯವರೆಗೆ ೩೮೧ ಶಿವಾನುಭವ ಗೋಷ್ಠಿಗಳು ಸಾಗಿ ಬಂದಿರುವುದು ಉತ್ತಮ ಕಾರ್ಯವಾಗಿದೆ ಎಂದು ಸಮಾಜ ಸೇವಕ ಫಕೀರಪ್ಪ ಉಪ್ಪಾರ ಅವರು ಮಾತನಾಡಿದರು. ಉತ್ತಮ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಹಿತವಾಗಿ ಮಿತವಾಗಿ ಮಾತನಾಡಿದಾಗ ನಮ್ಮಲ್ಲಿರುವ ಸಿಟ್ಟು ದೂರವಾಗಿ ನಾವು ಮಾತನಾಡಿದಾಗ ನಮ್ಮ ತೊಕದ ಮಾತಿಗೆ ಬೇಲೆ ಬರಲು ಸಾದ್ಯ ಎಂದು ಸಂಪನ್ಮೂಲ ವ್ಯಕ್ತಿ ಭೀಮಣ್ಣ ಹವಳಿ ಅವರು ಮಾತನಾಡಿದರು. ಶ್ರೀ ಭೀಮಾಂಬಿಕಾ ದೇವಿ ಶಿವಾನುಭವ ಸೇವಾ ಸಮಿತಿ ಅಧ್ಯಕ್ಷ ಶರಣಬಸಪ್ಪ, ದಾನಕೈ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಕೈ ಜಾರಿದರೆ ಕಾಲಿಗೆ ಮೂಲ, ನಾಲಿಗೆ ಜಾರಿದರೆ ದವಡಿಗೆ ಮೂಲ ಆದ್ದರಿಂದ ನಾವು ಮಾತನಾಡುವಾಗ ನಿಧಾನವಾಗಿ ವಿಚಾರಮಾಡಿ ಮಾತನಾಡಬೇಕು ಅಂದಾಗ ವಾದ ವಿವಾದಗಳಿಂದ ದೂರವಿರಲು ಸಾದ್ಯ, ಇತ್ತಿಚಿಗೆ ಸಮಾಜದಲ್ಲಿ ನಿವೇಶನ, ಹೊಲ,ಮನೆ ವಿಚಾರದಲ್ಲಿ ಹಣ ಪಡೆದುಕೊಂಡು ಅವರಿಗೆ ಆಸ್ತಿ ಕೊಡಲಾರದೆ ವಂಚಿಸಿ ,ಕೊಟ್ಟ ಮಾತಿಗೆ ಬೆಲೆ ಇಲ್ಲದಂತೆ ವಚನ ಭ್ರಷ್ಟರಾಗಿರುವ ಪ್ರಸಂಗಗಳು ಇಂದು ನಡೆಯುತ್ತಿವೆ ನಾವು ಜಾಗೃತರಾಗಬೇಕು ಎಂದರು. ಪ್ರಾಸ್ತಾವಿಕವಾಗಿ ಗುರುಮೂರ್ತಿ ಬಡಿಗೇರ, ಪ್ರಕಾಶ ರಾವಣಕಿ ಮಾತನಾಡಿದರು. ಈ ವೇಳೆ ಕಳಕಪ್ಪ ಹಡಪದ , ಯಮನೂರಪ್ಪ ಹಳ್ಳಿಕೇರಿ ಸಹ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಜರುಗಿತು.
ಈ ವೇಳೆ ಹಿರಿಯರಾದ ಮಲ್ಲನಗೌಡ ನಿಡಗುಂದಿ, ವೀರಪ್ಪ ರಾವಣಕಿ, ಯಮನೂರಪ್ಪ ಚಿಕ್ಕಗೌಡ್ರ, ಶೇಖರಗೌಡ ದ್ಯಾಮನಗೌಡ್ರ, ಅಮರೇಶ ಚಿಕ್ಕಗೌಡ್ರ, ಮಂಜಪ್ಪ ಭೂನಕೊಪ್ಪ, ಗಣೇಶ ನಿಡಗುಂದಿ, ಶರಣಪ್ಪ ಜರಕುಂಟಿ, ಬಸವರಾಜ ಮರಗಪ್ಪನವರು ಸೇರಿದಂತೆ ಇತರರು ಇದ್ದರು. ಅನ್ನಸಂತರ್ಪಣೆ ಜರುಗಿತು.

  • ಕರುನಾಡ ಕಂದ ಪತ್ರಿಕೆ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!