
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ 134 ವಿಶೇಷ ಚೇತನರಿಗೆ ಅಗತ್ಯ ಸಾಧನ ಸಲಕರಣೆ ವಿತರಣೆ ಮಾಡಿದ ಮಧುಗಿರಿ ಹಾಲಿ ಶಾಸಕ ಹಾಗೂ ಮಾಜಿ ಸಚಿವ ಕೆ. ಎನ್. ರಾಜಣ್ಣರವರು.
ಅಂಗವಿಕಲರಿಗೆ ಲೈಸನ್ಸ್ ಸಹಿತ ಮೂರು ದ್ವಿಚಕ್ರ ವಾಹನ ವಿತರಣೆ ಮಾಡಿದ ಬಡವರ ಕಣ್ಮಣಿ ಕೆ.ಎನ್.ಆರ್.
ಎಂಟು ಜನರಿಗೆ ದ್ವಿಚಕ್ರ ಸೈಕಲ್ ವೀಲ್ ಚೇರ್ ಮತ್ತು ಬ್ಯಾಟರಿ ಚಾಲಿತ ವೀಲ್ ಚೇರ್ 53 ಜನರಿಗೆ ಕಿವಿ ಇಯರಿಂಗ್ 36 ಎಂ ಆರ್ ಕಿಟ್ ನೀಡಿದರು.
ನಮ್ಮ ತಾಲೂಕಿನಲ್ಲಿ ಹತ್ತನೇ ತರಗತಿ ಪಿಯುಸಿ ಮುಗಿಸಿ ಮುಂದಿನ ವಿದ್ಯಾಭ್ಯಾಸಕ್ಕೆ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುತ್ತೇನೆ ಎಂದು ಭರವಸೆ ನೀಡಿದ
ಕೆ ಎನ್ ರಾಜಣ್ಣನವರು.
ತಾಲ್ಲೂಕು ಪಂಚಾಯಿತಿಯ 5% ಅನುದಾನದಲ್ಲಿ ವಿಶೇಷ ಚೇತನರಿಗೆ ಅಗತ್ಯ ಸಾಧನ ಸಲಕರಣೆಗಳ ವಿತರಣೆ.
ಮಧುಗಿರಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಅವರಣದಲ್ಲಿ ಆಯೋಜಿಸಲಾದ ವಿಶೇಷ ಚೇತನರಿಗೆ ಅಗತ್ಯ ಸಾಧನ ಸಲಕರಣೆಗಳ ವಿತರಣೆ (ಲ್ಯಾಪ್ಟಾಪ್, ತ್ರಿ ಚಕ್ರ ವಾಹನ, ಬ್ಯಾಟರಿ ಚಾಲಿತ ವೀಲ್ ಚೇರ್, ತ್ರೀ ಚಕ್ರ ಸೈಕಲ್, ಕಿವಿ ಮಿಷನ್) ಹಾಗೂ ವಿಶೇಷ ಚೇತನರ ಆರೈಕೆದಾರರಿಗೆ ಮಾಸಿಕ ಪ್ರೋತ್ಸಾಹ ಧನ ಮಂಜೂರಾತಿ ಅದೇಶ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಲಕರಣೆಗಳ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಯಾದ ಈಶ್ವರಯ್ಯನವರು, ಉಪವಿಭಾಗ ಅಧಿಕಾರಿಗಳಾದ ಗೋಟೂರು ಶಿವಪ್ಪನವರು, ಇ. ಓ ಲಕ್ಷಣ್ ಅವರು, ಯೋಜನಾಧಿಕಾರಿಯಾದ ಧನಂಜಯ್ ಅವರು, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಚೌಡಪ್ಪನವರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗೋಪಾಲಯ್ಯನವರು ಸೇರಿದಂತೆ ಚುನಾಯಿತ ಪ್ರತಿನಿಧಿಗಳು, ಮುಖಂಡರುಗಳು, ಫಲಾನುಭವಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ: ಪ್ರಸನ್ನಕುಮಾರ್. ಎಸ್., ಕೊರಟಗೆರೆ



















