ಚಿಂಚೋಳಿ: ಕಲಬುರ್ಗಿಯಲ್ಲಿ ನಾಳೆ ವಿಶ್ವ ರೈತರ ದಿನಾಚರಣೆ ಹಮ್ಮಿಕೊಳ್ಳಲಾಗಿದ್ದು ಹೆಚ್ಚಿನ ರೈತರು ಭಾಗವಹಿಸುವಂತೆ ರೈತ ಮುಖಂಡ ವೀರಣ್ಣ ಗಂಗಾಣಿ ಸುದ್ದಿಗೋಷ್ಠಿ ಮಾಡಿ ಮನವಿ ಮಾಡಿದರು. ನಾಳೆ ಕಲಬುರಗಿ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ವಿಶ್ವ ರೈತದಿನಾಚರಣೆಯನ್ನು ಕರ್ನಾಟಕ ರೈತ ಸಂಘ ಹಾಗೂ ತಾಲೂಕು ರೈತ ಸಂಘ ಅಧ್ಯಕ್ಷರಾದ ವೀರಣ್ಣ ಗಂಗಾಣಿ ಹಾಗೂ ಶಿವರಾಜ ಪಾಟೀಲ್ ಗೋಣಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಡಾ. ಎಸ್. ಎಂ. ಪಂಡಿತ್ ರಂಗ ಮಂದಿರ ಸ್ಥಳದಲ್ಲಿ ಇರುತ್ತದೆ ಹಾಗಾಗಿ ಕಲಬುರಗಿ ಜಿಲ್ಲೆ ರೈತರು ಭಾಗವಸಬೇಕು ಮತ್ತು ನಮ್ಮ ಭಾಗದಲ್ಲಿ ಅತಿ ವೃಷ್ಟಿಯಿಂದ ರೈತರ ಜೀವನಕ್ಕೆ ಆಸರೆಯಾದ ಬೆಳೆಗಳು ಹೆಸರು, ಉದ್ದು, ತೊಗರಿ, ಇನ್ನಿತರ ಬೆಳೆ ಸಂಪೂರ್ಣ ಹಾಳಾಗಿದ್ದು ಆದರೆ ಪರಿಹಾರದಲ್ಲಿ ಅನ್ಯಾಯ ಆಗಿದೆ ಅಲ್ಪ ಸ್ವಲ್ಪ ಪರಿಹಾರ ಬಂದಿದೆ ವಿಶೇಷವಾಗಿ ದೀರ್ಘಾವಧಿಯ ಬೆಳೆ ಕಬ್ಬು ಅದು ಕೂಡಾ ಮಳೆಯಿಂದ ಸಮೃದ್ಧಿ ಹಾಗೂ ಅಭಿವೃದ್ಧಿ ಹೊಂದಿಲ್ಲ ಕಬ್ಬಿಗೆ ಸೂಕ್ತವಾದ ಬೆಲೆ ಸಿಗುತ್ತಿಲ್ಲ ಹಾಗಾಗಿ ಇವೆಲ್ಲರ ಮೇಲೆ ಚರ್ಚೆ ಮಾಡಲು ಎಲ್ಲಾ ರೈತರಿಗೆ ಅವಕಾಶ ಸಿಗುತ್ತದೆ.
ನಾಳೆ ತಪ್ಪದೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದ್ದಾರೆ.
- ಕರುನಾಡ ಕಂದ ಪತ್ರಿಕೆ.



















