ಯಾದಗಿರಿ: ಡಿ.22 ಜಿಲ್ಲೆಯ ವಿವಿಧ ತಾಲ್ಲೂಕುಗಳ ಆಯ್ಕೆಯಾದ ವಿಕಲಚೇತನ ಫಲಾನುಭವಿಗಳಿಗೆ ಅಗತ್ಯವಾದ ಉಪಕರಣಗಳನ್ನು ವಿತರಿಸಿ, ಇದರಿಂದ ಅವರು ಸ್ವಾವಲಂಬಿ ಜೀವನ ನಡೆಸಲು ಹಾಗೂ ಆದಾಯ ಗಳಿಸಲು ಸಹಕಾರಿಯಾಗಲಿದೆ ಎಂದು ಎಪಿಡಿ ಸಂಸ್ಥೆಯ ಮುಖ್ಯಸ್ಥರಾದ ಕು. ಸಂಪ್ರೀತ ದೇವಪುತ್ರ ಹೇಳಿದರು.
ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ ಸಂಸ್ಥೆಯ ವತಿಯಿಂದ ವಿಕಲಚೇತನ ವ್ಯಕ್ತಿಗಳ ಸ್ವಯಂ ಉದ್ಯೋಗ ಉತ್ತೇಜನ ಹಾಗೂ ಜೀವನೋಪಾಯ ಬಲವರ್ಧನೆ ಉದ್ದೇಶದಿಂದ ಜಿಲ್ಲೆಯ 12 ಜನರಿಗೆ 10 ಪ್ರಿಂಟರ್ಗಳು ಮತ್ತು 2 ತಳ್ಳುಗಾಡಿಗಳನ್ನು ವಿತರಿಸಲಾಯಿತು.
ಹುಣಸಗಿ ತಾಲೂಕಿನ ವಿಕಲಚೇತನರಿಗೆ 3 ಪ್ರಿಂಟರ್ ಮತ್ತು 2 ತಳ್ಳು ಗಾಡಿ, ಯಾದಗಿರಿ ತಾಲ್ಲೂಕಿನ 4 ಜನ ವಿಕಲಚೇತನರಿಗೆ ಪ್ರಿಂಟರ್,
ಗುರುಮಠಕಲ್ ತಾಲ್ಲೂಕಿನ 2 ವಿಕಲಚೇತನರಿಗೆ ಪ್ರಿಂಟರ್ಗಳು, ಶೋರಾಪುರ ತಾಲ್ಲೂಕಿನ ಒಬ್ಬರು ವಿಕಲಚೇತನರಿಗೆ ಪ್ರಿಂಟರ್ ವಿತರಿಸಲಾಯಿತು.
ವಿತರಣೆಯಲ್ಲಿ ಜೀವನಪಯೋಗ ತಜ್ಞ ಶಿವಯೋಗಪ್ಪ ಮೇಲಕೇರಿ, ಯಾದಗಿರಿ ತಾಲೂಕ ಸಂಯೋಜಕರು ರಮೇಶ್ ಕಟ್ಟಿಮನಿ ಸಿಬ್ಬಂದಿಗಳಾದ ಹರೀಶ ಜೋಶಿ, ನಾಗರಾಜ, ಹುಲಿಯಪ್ಪ, ಮಲ್ಲಿಕಾರ್ಜುನ ಶಿಲ್ಪಾ ಶರಣಮ್ಮ ಮೋಹನ್ ಇನ್ನಿತರರು ಉಪಸ್ಥಿತರಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ



















