ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ದಿವ್ಯಾಂಗರು ಸಮಾಜಕ್ಕೆ ಮಾದರಿಯಾಗಬೇಕು : ಶಾಸಕ ಶರಣಗೌಡ ಕಂದಕೂರು ಅಭಯ

ಗುರುಮಠಕಲ್ : ಡಿ.23 ಪಟ್ಟಣದ ಶಾಸಕರ ಜನ ಸಂಪರ್ಕ ಕಚೇರಿಯಲ್ಲಿ ಹಿರಿಯ ನಾಗರೀಕ ಹಾಗೂ ಅಂಗವಿಕಲ ಸಬಲೀಕರಣ ಇಲಾಖೆ ಮತ್ತು ಭಾರತೀಯ ಕೃತಕ ಅಂಗಗಳ ಉತ್ಪಾದನಾ ನಿಗಮದ (ALIMCO) ಕಂಪನಿ ವತಿಯಿಂದ ತಾಲೂಕಿನ ವಿಕಲಚೇತನರಿಗೆ ಅವರ ಅಗತ್ಯತೆ ಅನುಗುಣವಾಗಿ ಅವರು ಬಳಸುವ ವಿವಿಧ ಸಾಧನ ಸಲಕರಣೆಗಳಾದ ಬ್ಯಾಟರಿ ಚಾಲಿತ ವಾಹನ ವಾಕಿಂಗ್ ಸ್ಟಿಕ್, ವೀಲ್ ಚೇರ್, ಸಿಪಿ ಚೇರ್, ಕೇನ್, ಟ್ರೇ ಸೈಕಲ್ ಸೇರಿದಂತೆ ಒಟ್ಟುವ 46 ವಿವಿಧ ರೀತಿಯ ಸಾಧನ ಸಲಕರಣೆಗಳನ್ನು ಮಂಗಳವಾರ ವಿತರಿಸಲಾಯಿತು.

ವಿತರಣೆ ನಂತರ ಮಾತನಾಡಿದ ಶಾಸಕ ಶರಣಗೌಡ ಕಂದಕೂರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಕಲಚೇತನರಿಗೆ ವಿವಿಧ ಸೌಲಭ್ಯಗಳನ್ನು ನೀಡುತ್ತಿದೆ ಇವುಗಳನ್ನು ಪಡೆದು ತಾವುಗಳು ಸ್ವಾವಲಂಬಿ ಜೀವನ ನಡೆದು ಸಮಾಜಕ್ಕೆ ಮಾದರಿಗಳಾಗಬೇಕೆಂದು ತಿಳಿಸಿದರು.

ವಿಕಲಚೇತನರಿಗೆ ಮೀಸಲಿಟ್ಟ 5% ಅನುದಾನವೂ ಸಮರ್ಪಕ ಬಳಕೆಯಾಗಬೇಕು, ಈ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳಿಗೆ ಸೂಚಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಅಲಿಂಕೋ ಸಂಸ್ಥೆಯ ಬಿಶ್ವತ್ ಮಿಶ್ರ, ಎಪಿಡಿ ಸಂಸ್ಥೆಯ ವಿರುಪಾಕ್ಷಪ್ಪ ಮಾಲಿ ಪಾಟೀಲ್, MRW ಭೀಮರಾಯ, ಅರ್.ಪಿ.ಡಿ ಆಧ್ಯಕ್ಷರಾದ ಸಿದ್ದನಗೌಡ, ವಿವಿಧ ಗ್ರಾಮ ಪಂಚಾಯತಿಗಳಿಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿ. ಆರ್. ಡಬ್ಲ್ಯೂ ಗಳು, ಜೆಡಿಎಸ್ ಪಕ್ಷದ ಕಾರ್ಯಕರ್ತರು, ಅಹವಾಲು ನೀಡಲು ಬಂದ ಸಾರ್ವಜನಿಕರು ಸೇರಿದಂತೆ ಇನ್ನಿತರ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

ವರದಿ: ಜಗದೀಶ್ ಕುಮಾರ್ ಭೂಮಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!