ಗುರುಮಠಕಲ್ : ಡಿ.23 ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ, ಈಗ ಭೀಮ ನದಿಯಿಂದ ಬರುತ್ತೀರುವ ನೀರು ಶುದ್ಧೀಕರಣವಾಗುತ್ತಿಲ್ಲ, ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ದಲಿತ ಸಂಘರ್ಷ ಸಮಿತಿ ಅಧ್ಯಕ್ಷರಾದ ಲಾಲಪ್ಪ ತಲಾರಿ ಪುರಸಭೆ ಮುಖ್ಯಾಧಿಕಾರಿ ಶರಣಪ್ಪ ಮಡಿವಾಳ ಅವರಿಗೆ ಮನವಿ ಮಾಡಿದರು.
ಪಟ್ಟಣದಲ್ಲಿ ಹಲವು ದಿನಗಳಿಂದ ದುರಸ್ತಿಯಾಗದ ಬೋರವೆಲ್ ಗಳನ್ನು ಸರಿಪಡಿಸಿ ಪ್ರತಿ ಎರಡು ದಿನಕ್ಕೊಮ್ಮೆಯಾದರೂ ಶುದ್ಧವಾದ ನೀರನ್ನು ಸರಬರಾಜು ಮಾಡಲು ಮನವಿ ನೀಡಿ ತ್ವರಿತ ಗತಿಯಲ್ಲಿ ಕಾರ್ಯರೂಪಕ್ಕೆ ತರಲು ಕೋರಿದರು.
ವರದಿ : ಜಗದೀಶ್ ಕುಮಾರ್ ಭೂಮಾ




















