ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಂಭ್ರಮದ ಯೇಸುಕ್ರಿಸ್ತನ ಪೂಜಿಸಿದ ಕ್ರೈಸ್ತ ಧರ್ಮೀಯರು

ಬಳ್ಳಾರಿ / ಕಂಪ್ಲಿ : ಗಣೇಶೋತ್ಸವ, ದಸರಾ, ಹೋಳಿ ಹಬ್ಬವನ್ನು, ರಂಜಾನ್ ಹಬ್ಬಗಳನ್ನು ಸರ್ವಧರ್ಮೀಯರು ಕೂಡಿ ಆಚರಿಸುವಂತೆ ಕ್ರಿಸ್‌ಮಸ್‌ ಹಬ್ಬದ ಜತೆಗೂ ಸರ್ವಧರ್ಮದ ನಂಟು ಬೆಸೆದುಕೊಂಡಿದೆ. ದೇಶ, ಭಾಷೆ, ಗಡಿಗಳನ್ನೂ ಮೀರಿ ಈ ಹಬ್ಬ ಎಲ್ಲಾ ಧರ್ಮಗಳ ಜನರನ್ನು ಒಂದಾಗಿಸುತ್ತದೆ.

ಪಟ್ಟಣದ ಶುಗರ್ ಫ್ಯಾಕ್ಟರಿಯ ಸಹಾಯಮಾತೆ ದೇವಾಲಯದಲ್ಲಿ ಬಾಲಯೇಸುವಿನ ಜನನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಎಲ್ಲಾ ಕ್ರೈಸ್ತ ಭಕ್ತಾದಿಗಳು ಒಟ್ಟಾಗಿ ಸೇರಿ ಪ್ರಾರ್ಥಿಸಿ ಬಾಲ ಯೇಸುವನ್ನು ಗೋದಲಿಯಲ್ಲಿ ನಮಿಸಿದರು. ದೇವರ ಶಾಂತಿ ಪ್ರೀತಿಯನ್ನು ಎಲ್ಲರೊಡನೆ ಹಂಚಿಕೊಂಡರು.

ಕ್ರಿಸ್ಮಸ್ ದೇವರ ಪ್ರೀತಿಯ ಸ್ಮರಣೆ ಮನುಜರೆಲ್ಲರೂ ದ್ವೇಷ, ಸ್ವಾರ್ಥ ತ್ಯಜಿಸಿ ಶಾಂತಿ ಸೌಹಾರ್ದತೆಯಲ್ಲಿ ಬಾಳುವುದೇ ಕ್ರಿಸ್ಮಸ್ ಆಚರಣೆಯ ನಿಜ ಅರ್ಥವಾಗಿದೆ.
ಈ ಭಕ್ತಿಯುತ ಆಚರಣೆಯನ್ನು ಧರ್ಮ ಕೇಂದ್ರದ ಗುರುಗಳಾದ ಫಾದರ್ ಸುನಿಲ್ ಧರ್ಮ ಭಗೀನರು ಹಾಗೂ ಎಲ್ಲಾ ಕ್ರೈಸ್ತ ಭಕ್ತಾದಿಗಳು ಸಂತೋಷದಿಂದ ಸೇರಿ ಒಂದೇ ಕುಟುಂಬವಾಗಿ ಆಚರಿಸಿದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!