ಯಾದಗಿರಿ/ಗುರುಮಠಕಲ್: ಜ. 06 ಪಟ್ಟಣದ 23 ಅಂಗನವಾಡಿ ಕೇಂದ್ರಗಳಲ್ಲಿ ಮೊಟ್ಟೆ ವಿತರಣೆ ಸಮಸ್ಯೆ ಬಗೆಹರಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಶರಣಬಸವ ಅವರಿಗೆ ತಾಲೂಕ ಅಂಬೇಡ್ಕರ್ ಸೇನೆಯ ಅಧ್ಯಕ್ಷ ಶ್ರೀಕಾಂತ್ ತಲಾರಿ ಮನವಿ ಪತ್ರ ನೀಡಿದರು.
ಕಳೆದ ಮೂರು ತಿಂಗಳಿನಲ್ಲಿ ಸಮರ್ಪಕ ಮೊಟ್ಟೆ ವಿತರಿಸದೇ ಫಲಾನುಭವಿಗಳಿಂದ “ಮೊಟ್ಟೆ ಪಡೆದಿರುವಂತೆ” ಸಹಿ ಪಡೆಯಲಾಗುತ್ತಿದೆ ಎಂದು ಸಾರ್ವಜನಿಕರಿಂದ ಕೇಳಿ ಬರುತ್ತಿದ್ದು, ಸರ್ಕಾರದ ಅನುದಾನ ದುರುಪಯೋಗವಾಗುತ್ತಿರುವ ಹಿನ್ನಲೆ ಶೀಘ್ರ ತನಿಖೆ ಮಾಡಲು ತಿಳಿಸಿದರು.
ಮೊಟ್ಟೆ ವಿತರಣೆ ಲೋಪ ಹಾಗೂ ಸುಳ್ಳು ಸಹಿ ಪಡೆದುಕೊಂಡಿರುವ ಅಧಿಕಾರಿ ,ಸಿಬ್ಬಂದಿಗಳ ವಿರುದ್ಧ ನಿಯಮಾನುಸಾರ ಕಾನೂನು ಕ್ರಮ ತೆಗೆದುಕೊಂಡು, ಬಾಕಿ ಇರುವ ಮೊಟ್ಟೆಗಳನ್ನು ತಕ್ಷಣ ಫಲಾನುಭವಿಗಳಿಗೆ ವಿತರಿಸುವಂತೆ ಮನವಿ ನೀಡಿ ಒತ್ತಾಯಿಸಿದರು.
ವರದಿ: ಜಗದೀಶ್ ಕುಮಾರ್ ಭೂಮಾ



















