ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶ್ರೀ ಏಳು ಕೋಟಿ ಮಲ್ಲಯ್ಯ ದೇವಸ್ಥಾನಕ್ಕೆ ಭಕ್ತರಿಂದ ೨೧ ನೇ ವರ್ಷದ ಪಾದಯಾತ್ರೆ

ಕೊಪ್ಪಳ/ ಯಲಬುರ್ಗಾ: ಪಟ್ಟಣದ ೪ ಮತ್ತು ೫ ನೇ ವಾರ್ಡಗಳ ಮದ್ಯ ಭಾಗದಲ್ಲಿ ಬರುವ ಶ್ರೀ ಏಳು ಕೋಟಿ ಮಲ್ಲಯ್ಯ ಸ್ವಾಮಿಗೆ ಜ.೬ ರಂದು ಸಂಜೆ ೭ ಗಂಟಗೆ ಸಹಸ್ರ ಬಿಲ್ವಾರ್ಚನೆ ,ಪೂಜಾ ವಿಧಿ, ವಿಧಾನಗಳಿಂದ ಸಮಿತಿ ಹಾಗೂ ಭಕ್ತರಿಂದ ವಿಶೇಷ ಪೂಜಾ ಕಾರ್ಯಕ್ರಮ ಜರುಗಿತು.
ಸಮಿತಿಯವರಾದ ಶಿವಕುಮಾರ ಭೂತೆ, ಶರಣಬಸಪ್ಪ ದಾನಕೈ, ಫಕೀರಪ್ಪ ಗಾಣಗೇರ, ಮಹೇಶ ಭೂತೆ, ಮಲ್ಲಿಕಾರ್ಜುನಗೌಡ ಪೋಲಿಸ್ ಪಾಟಿಲ್, ರಾಮಣ್ಣ ನೆರೇಗಲ್ಲ, ತಿಪ್ಪಣ್ಣ ಉಪ್ಪಾರ, ಮಲ್ಲಿಕಾರ್ಜುನ ಸಾದರಖಾನ, ವಿಜಯ ಉಪ್ಪಾರ, ಮಲ್ಲಪ್ಪ ಭೂತೆ, ಬಸವರಾಜ ಕೊಪ್ಪಳ, ಶರಣಪ್ಪ ಎನ್. ಭಾವಿಕಟ್ಟಿ, ನಾಗರಾಜ ದಿವಟರ, ಈಶಪ್ಪ ಬನ್ನಿಕೊಪ್ಪ, ಅರ್ಚಕರಾದ ರುದ್ರಮ್ಮ ಸೇರಿದಂತೆ ಅಪಾರ ಭಕ್ತರು ಭಾಗವಹಿಸಿದ್ದರು. ಈ ವೇಳೆ ಗೊರವಯ್ಯ ನಾಗಪ್ಪ ಇಟಗಿ, ಶರಣ ಸಾಹಿತ್ಯ ಪರಿಷತ್ತು ಯಲಬುರ್ಗಾ ತಾಲೂಕ ಅದ್ಯಕ್ಷ ಸಂಗಪ್ಪ ಕೊಪ್ಪಳ, ಕಿಸಾನ್ ಸಮಿತಿ ಯ. ತಾಲೂಕು ಅದ್ಯಕ್ಷ ದಾನನಗೌಡ ತೊಂಡಿಹಾಳ, ಕರ್ನಾಟಕ ರಾಜ್ಯ ರೈತ ಸಂಘದ ಯ. ತಾಲ್ಲೂಕು ಅದ್ಯಕ್ಷ ಶರಣಬಸಪ್ಪ ದಾನಕೈ ಹಾಗೂ ಸಮಾಜ ಸೆವಕರಾದ ಸುರೇಶಗೌಡ ಶಿವನಗೌಡ್ರ, ಶಿವಪ್ಪ ಕೊಪ್ಪಳ ಇವರನ್ನು ಶ್ರೀ ಏಳು ಕೋಟಿ ಮಲ್ಲಯ್ಯ ಸಮಿತಿಯವರು ಸನ್ಮಾನಿಸಿದರು. ಬಳಿಕ ಭಕ್ತರು ಶ್ರೀ ಏಳು ಕೋಟಿ ಮಲ್ಲಯ್ಯ ದೇವಸ್ಥಾನದಿಂದ ಪ್ರಮುಖ ಬೀದಿಗಳ ಮೂಲಕ ಸಕಲ ವಾದ್ಯಗಳೊಂದಿಗೆ ಭಕ್ತರೆಲ್ಲರು ಪ್ರಾರ್ಥಿಸಿಕೊಂಡು ,ರೈತರಿಗೆ, ಸರ್ವಜನತೆಗೆ ಮಳೆ ಬೆಳೆ ಚೆನ್ನಾಗಿ ಲಭಿಸಲಿ ಎಂದು ಮಕರ ಸಂಕ್ರಾಂತಿ ಹಬ್ಬದಂಗವಾಗಿ ಯಾದಗಿರಿ ಜಿಲ್ಲೆಯಲ್ಲಿ ಬರುವ ಶ್ರೀ ಏಳು ಕೋಟಿ ಮಲ್ಲಯ್ಯ ದೇವಸ್ಥಾನಕ್ಕೆ ಯಲಬುರ್ಗಾ, ಮುಧೋಳ,ಮಾರನಾಳ, ಜಿ.ವೀರಾಪೂರ ,ಹನುಮಾಪೂರ ಹಾಗೂ ಸುತ್ತಮುತ್ತಲಿನ ನೂರಾರು ಭಕ್ತರು ಪಾದಯಾತ್ರೆ ಕೈಗೊಂಡರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!