
ಕೊಪ್ಪಳ ವಿಶ್ವವಿದ್ಯಾನಿಲಯಕ್ಕೆ ಹೊಸದಾಗಿ ಕುಲಸಚಿವರಾಗಿ (ಮೌಲ್ಯಮಾಪನ) ಅಧಿಕಾರವಹಿಸಿಕೊಂಡ ಪ್ರೊ. ರಮೇಶ್ ಕೆ ಇವರನ್ನು ಕೊಪ್ಪಳ ವಿಶ್ವವಿದ್ಯಾನಿಲಯದ ನಿಕಟಪೂರ್ವ ಸಿಂಡಿಕೆಟ್ ಸದಸ್ಯರು ಮತ್ತು ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಗವಿಸಿದ್ದಪ್ಪ ಮುತ್ತಾಳ, ಶ್ರೀ ಗವಿ ಹೂಗಾರ್, ಪ್ರೊ. ತಿಮ್ಮರೆಡ್ಡಿ ಮೇಟಿ, ಪ್ರೊ. ಪ್ರವೀಣ್ ಪೊಲೀಸ್ ಪಾಟೀಲ್ ಹಾಗೂ ಇತರರು ಸನ್ಮಾನ ಮಾಡಿ ಶುಭ ಹಾರೈಸಿದರು.
ಪ್ರೊ. ರಮೇಶ್ ಕೆ ಅವರು ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರದಲ್ಲಿ ಗಣಕ ವಿಜ್ಞಾನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ಶನಿವಾರದಂದು ಕರ್ನಾಟಕ ಸರಕಾರದ ಆದೇಶದ ಮೇರಿಗೆ ಕೊಪ್ಪಳ ವಿಶ್ವವಿದ್ಯಾನಿಲಯದ ಕುಲಸಚಿವರು ( ಮೌಲ್ಯಮಾಪನ ) ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.
- ಕರುನಾಡ ಕಂದ




















