ಕಾಳಗಿ : ಸೂಗೂರು ಗುರು ರುದ್ರಮುನೀಶ್ವರ ಹಿರೇಮಠ ಸುಂಠಾಣ ಶಾಖಾ ಮಠ, ನೂತನ ಗುರುಭವನ ಲೋಕಾರ್ಪಣೆ ಮಾಡಿ ದಿವ್ಯಸಾನಿಧ್ಯ ವಹಿಸಿ ಚಂದನಕೇರಾ ಶ್ರೀಗಳು ಮಾತನಾಡಿ ಜೀವನದಲ್ಲಿ ಗುರು ಏಕೆ ಅವಶ್ಯಕ ಗುರುವಿನ ಮಹತ್ವ ಚಿಕ್ಕ ಇರುವೆ ಹರಿದ್ವಾರದಿಂದ ಋಷಿಕೇಶಕ್ಕೆ ಪಯಣಿಸಬೇಕಾದರೆ ಸುಮಾರು 3-4 ಜನ್ಮಗಳನ್ನಾದರೂ ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಹರಿದ್ವಾರಕ್ಕೆ ಹೋಗುವವರ ವಸ್ತ್ರದ ಮೇಲೆ ಈ ಇರುವೆ ಹತ್ತಿದರೆ3-4ಗಂಟೆಗಳಲ್ಲಿ ಸುಲಭವಾಗಿ ಋಷಿ ಕೇಶಕ್ಕೆ ತಲುಪುತ್ತದೆ ಹಾಗೆಯೇ ನಿಮ್ಮ ಸ್ವಂತ ಪ್ರಯತ್ನದಿಂದ ಈ ಭವಸಾಗರನ್ನು ದಾಟುವದು ಎಷ್ಟು ಕಷ್ಟ ಇದು ಅನೇಕ ಜನ್ಮ ತೆಗೆದುಕೊಳ್ಳಬಹುದು. ಇದರ ಬದಲು ಗುರುವಿನ ಕೈ ಹಿಡಿದು ಭಕ್ತಿಯಿಂದ ಅವರು ತೋರಿದ ಮಾರ್ಗದಲ್ಲಿ ಸಾಗಿದರೆ ಅವರು ನಿಮ್ಮನ್ನು ಸುಲಭವಾಗಿ ಈ ಭವಸಾಗರವನ್ನು ದಾಟಿಸಬಹುದು ಎಂದು ನುಡಿದರು.
ಪ್ರತಿದಿನ ಸಾಯಂಕಾಲ 7:00 ಗಂಟೆಗೆ ಪುರಾಣ ಮತ್ತು ಅನ್ನದಾಸೋಹ ಇರುತ್ತದೆ. ಮಹಾ ದಾಸೋಹಿ ಶ್ರೀ ಶರಣಬಸವೇಶ್ವರ ಪುರಾಣ ಉದ್ಘಾಟನೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ಶ್ರೀ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಕಟ್ಟಿಮಠ ಚಂದನಕೇರಾ, ಶ್ರೀಗಳು ವಹಿಸಿ ಆಶೀರ್ವದಿಸಿದರು.
ಡಾ. ಶಾಂತವೀರ ಶಿವಾಚಾರ್ಯರು ಗಡಿಗೌಡಗಾಂವ
ಪುರಾಣನುಡಿಗಳನ್ನಾಡಿದರು.
ಸಾನಿಧ್ಯ, ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯರು ಗುಂಡೆಪಲ್ಲಿ,
ನೇತೃತ್ವ ಪೂಜ್ಯಶ್ರೀ ಡಾ. ಚನ್ನರುದ್ರಮನಿ ಶಿವಾಚಾರ್ಯರು ಸೂಗೂರು ಶಾಖಾ ಮಠ ಸುಂಠಾಣ, ಮತ್ತು ಪೂಜ್ಯಶ್ರೀ ನೀಲಕಂಠ ದೇವರು ವಿರಕ್ತ ಮಠ ರಟಕಲ್ ಜ್ಯೋತಿ ಬೆಳಗಿಸಿ ಮಾತನಾಡಿದರು.
ಮಲ್ಲಿನಾಥ ಕೋಲ್ಕುಂದಿ ಉದ್ಯಮಿಗಳು, ಮಲ್ಲಿಕಾರ್ಜುನ ಮರ್ತೂರ ಉದ್ಯಮಿದಾರರು, ಸಂತೋಷ ಪಾಟೀಲ್ ಉದ್ಯಮಿದಾರರು,
ವೀರಣ್ಣ ಗಂಗಾಣಿ ರೈತ ಮುಖಂಡರು,
ಶ್ರೀಮತಿ ಗೀತಾ ಸುಂಠಾಣ ಅಧ್ಯಕ್ಷರು ಗ್ರಾಮ, ಪಂಚಾಯತಿ.
ಕಾರ್ಯಕ್ರಮದ ಪೂರ್ವದಲ್ಲಿ ರಟಕಲ್ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಜ್ಯೋತಿ ತೆಗೆದುಕೊಂಡು, ಕಾರ್ ಮತ್ತು ಬೈಕ್ ರ್ರ್ಯಾಲಿ ಚಾಲನೆ ನೀಡಲಾಯಿತು.
ರಾಜೇಶ ಗುತ್ತೇದಾರ ಮಾಜಿ ಜಿ, ಪಂ, ಸದಸ್ಯರು, ರೇವಣಸಿದ್ದಪ್ಪ ಮಾಸ್ತರ ಚಿಂಚೋಳಿ, ಬಸವರಾಜ ಪಾಟೀಲ್ ಹೇರೂರ.
ನಂತರ ಸಂಠಾಣ ಗ್ರಾಮದ ಪ್ರಮುಖ ಬೀದಿಯಲ್ಲಿ ಬಾಜಾ ಭಜಂತ್ರಿ ಕಳಸ ಆರತಿ ಮತ್ತು ಭಜನೆಯೊಂದಿಗೆ ಶ್ರೀ ಮಠಕ್ಕೆ “ಜ್ಯೋತಿಯೊಂದಿಗೆ ಪೂಜ್ಯರನ್ನು ಬರಮಾಡಿಕೊಂಡ ಗ್ರಾಮದ ಮಹಿಳೆಯರು ಭಕ್ತಾದಿಗಳು.
ಪೂಜ್ಯರ ತುಲಾಭಾರ ಸೇವೆಗೈದ ಕುಟುಂಬಸ್ಥರು
ಮಯೂರ ಶ್ರೀ ಹುಂಡೇಕರಿ ಮು, ಸೋಲಾಪುರ,
ಶ್ರೀ ಶಿವಕುಮಾರ ಪೂಚಾಲಿ ಚಿಂಚೋಳಿ,
ಶ್ರೀಮತಿ ಭಾಗ್ಯ ಜ್ಯೋತಿ ಶಿವಕುಮಾರ ಲಾಡ ಚಿಂಚೋಳಿ.
ಜಗನ್ನಾಥ ಸೇರಿಕಾರ ಪತ್ರಕರ್ತರು ನಿರೂಪಿಸಿದರು, ರಾಜು ಪಾಟೀಲ್ ಸ್ವಾಗತಿಸಿ ವಂದಿಸಿದರು.
ವರದಿ ಎಸ್ ವಿ ಗಂಗಾಣಿ.




















