ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅಮ್ಮ ಎಂದು ಹೆಸರು..

ನಾವು ನಕ್ಕೆವು ಅವಳು ನಕ್ಕಳು
ನಾವು ಅತ್ತೆವು ಅವಳು ಅತ್ತಳು
ಹಸಿವಾದಾಗ ಹಾಲುಣಿಸುತ್ತಿದ್ದಳು
ತನ್ನ ಕೈಯ ತುತ್ತ ತಿನಿಸುತ್ತಿದ್ದಳು..!

ಅವಳೇನು ಯಕ್ಷಿಣಿಯಲ್ಲ
ಅವಳೇನು ಸಂಗೀತ ಕಲಿತಿಲ್ಲ
ಸ್ವರ ಸಂಗತಿಗಳಂತೂ ಗೊತ್ತಿಲ್ಲ
ಆದರೂ ಹಾಡುತ್ತಿದ್ದಳು..!
ನಮಗಾಗಿ ಹಾಡುತ್ತಿದ್ದಳು, ಲಾಲಿಸಿ
ಚಂದಮಾಮನ ತೋರಿಸಿದಳು..!
ಹಾಗೇ ತಲೆಯ ನೆವರಿಸಿ ಹುಚ್ಚಿಯಂತೆ
ತಾರೆಗಳೊಂದಿಗೆ ಮಾತಾಡುತ್ತಿದ್ದಳು..!
ನಮಗಾಗಿ ಕೇವಲ ನಮಗಾಗಿ..!

ಅವಳು ಅಂಬಾನಿಯ ಮಗಳಲ್ಲ
ಟಾಟಾರ ಸಂಬಂಧಿಯೂ ಅಲ್ಲ
ಬಡತನದಲ್ಲೇ ಮಿಂದೆದ್ದವಳು
ಆದರೂ.. ನಾವು ಕೇಳಿದ್ದು
ಎಂದಿಗೂ ಇಲ್ಲ ಎನ್ನುತ್ತಿದ್ದಿಲ್ಲ
ಕಾಸಿಗೆ ಕಾಸು ಕೂಡಿಡುತ್ತಿದ್ದಳು
ತನಗಾಗಿ ಅಲ್ಲ ನಮ್ಮೇಳಿಗೆಗಾಗಿ
ನಮಗಾಗಿ ಕೇವಲ ನಮಗಾಗಿ..!

ಅವಳು ಯಾವ ವಿದ್ಯಾಲಯದಲ್ಲೂ
ಓದಿಲ್ಲ ಹಾಗೇ ಪದವಿಯೂ ಪಡೆದಿಲ್ಲ
ಆದರೆ ಅಕ್ಷರಭ್ಯಾಸ ಮಾಡಿಸುತ್ತಿದ್ದಳು
ನಮಗೆ ಬೇಕು ಬೇಡ ಹೇಳುತ್ತಿದ್ದಳು
ಪ್ರೀತಿಯ ಮೌಲ್ಯವನು ಹೇಳುತ್ತಿದ್ದಳು
ಮೊದಲ ಗುರುವಾಗಿ ನಿಂತಿದ್ದಳು
ನಮಗಾಗಿ ಕೇವಲ ನಮಗಾಗಿ..!

ಅವಳೇ ಇಡೀ ಜಗದ ಉಸಿರು
ಅವಳಿಗೆ ಅಮ್ಮ ಎಂದು ಹೆಸರು..!

~ ಸಿದ್ದು ಗುಂಡ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!