ಕೊಟ್ಟೂರು : ತಾಲೂಕಿನದ್ಯಾಂತ ಮುಂಗಾರು ಮಳೆ ಬರುವುದೆಂದು ಅಲ್ಲಲ್ಲಿ ಕೆಲವು ರೈತರು ಧೈರ್ಯ ಮಾಡಿ ತಮ್ಮ ಹದ ಮಾಡಿದ ಹೊಲಗಳಲ್ಲಿ ಅಲ್ಪ ಸ್ವಲ್ಪ ಬಂದ ಮಳೆಯನ್ನು ನೆಚ್ಚಿಕೊಂಡು ಬೀಜ ಬಿತ್ತಿರುವ ಹೊಲಗಳಲ್ಲಿ ಅಲ್ಲೊಂದು ಇಲ್ಲೊಂದು ಬೆಳೆ ಬೆಳೆದು ನಿಂತಿವೆ ಆದರೆ ಸಂಪೂರ್ಣ ಮಳೆ ಬಾರದ ಕಾರಣ ಅಲ್ಲೊಂದು ಇಲ್ಲೊಂದು ಬೆಳೆದು ನಿಂತ ಬೆಳೆಗಳು ಸಂಪೂರ್ಣವಾಗಿ ಬಾಡಿಹೋಗಿವೆ.
ಈ ಬಾಡಿಹೋದ ಬೆಳೆಗಳನ್ನು ವಿಜಯನಗರ ಜಿಲ್ಲಾಧಿಕಾರಿಗಳಾದ ಶ್ರೀಮತಿ ಕವಿತಾ ಎಸ್. ಮನ್ನಿಕೇರೆ ರವರು ಕೊಟ್ಟೂರು ತಾಲೂಕಿನ ಗಜಾಪುರ ಕಂದಾಯ ಗ್ರಾಮದಲ್ಲಿ ಸ ನಂ. 541 A , 541 B ಹಾಗೂ 564 C ಜಮೀನುಗಳಲ್ಲಿ ಬೆಳೆದ ಬೆಳೆಗಳನ್ನು ವೀಕ್ಷಣೆ ಮಾಡಿದರು, ಸ್ಥಳದಲ್ಲಿದ್ದ ಸದ್ರಿ ಗ್ರಾಮದ ರೈತರ ಸಂಗಡ ಮಳೆಯಿಲ್ಲದೆ ಬಾಡಿಹೋದ ಬೆಳೆಗಳ ಬಗ್ಗೆ ಚರ್ಚಿಸಿ ರೈತರಿಂದ ಮಾಹಿತಿಯನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಸಿ. ಇ. ಒ. ಮತ್ತು ಕೃಷಿ ಅಧಿಕಾರಿಗಳು, ತಾಲೂಕು ತೋಟಗಾರಿಕಾ ಅಧಿಕಾರಿಗಳು ಹಾಗೂ ಇನ್ನಿತರೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಸಹಾಯಕ ಆಯುಕ್ತರು, ಹರಪನಹಳ್ಳಿ ತಾಲೂಕು ದಂಡಾಧಿಕಾರಿಗಳು, ತಾಲೂಕು ಪಂಚಾಯ್ತಿಯ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು, ಕಂದಾಯ ನಿರೀಕ್ಷಕರು , ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಇನ್ನಿತರೆ ತಾಲೂಕು ಅಧಿಕಾರಿ ವರ್ಗದವರು ಹಾಜರಿದ್ದರು.
ವರದಿ: ಕೆ. ಗೋಣೆಪ್ಪ




















