
ಬಳ್ಳಾರಿ / ಕಂಪ್ಲಿ: ವರಲಕ್ಷ್ಮೀ ಕ್ರೆಡಿಟ್ ಸಹಕಾರ ಸಂಘವು ಕಳೆದ 23 ವರ್ಷಗಳಿಂದ ಸಂಘದ ಸದಸ್ಯರ ಸ್ವಾವಲಂಬಿ ಬದುಕಿಗೆ ಪ್ರೇರಣೆಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಸಂಘದ ಅಧ್ಯಕ್ಷ ಹೆಚ್.ಜಗದೀಶ ಹೇಳಿದರು.
ಪಟ್ಟಣದ ವೀರಶೈವ ಸಂಘದ ಪೇಟೆ ಬಸವೇಶ್ವರ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವರಲಕ್ಷ್ಮೀ ಕ್ರೆಡಿಟ್ ಸಹಕಾರ ಸಂಘದ 23ನೇ ವಾರ್ಷಿಕ ಮಹಾಜನ ಸಭೆ ಉದ್ಘಾಟಿಸಿ ಮಾತನಾಡಿ, ಕಂಪ್ಲಿ ಸೇರಿದಂತೆ ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಒಳಗೊಳ್ಳುವ ಜೊತೆಗೆ ತಾಲೂಕು ಕೇಂದ್ರಗಳಲ್ಲಿ ಬ್ಯಾಂಕ್ ಶಾಖೆಗಳನ್ನು ಸ್ಥಾಪಿಸಲಾಗಿದೆ.
ಸಂಘವು 13439ಸದಸ್ಯರೊಂದಿಗೆ ಸುಮಾರು 9ಕೋಟಿ 68 ಲಕ್ಷ ಶೇರು ಬಂಡವಾಳ ಹೊಂದಿದೆ. ಸುಮಾರು 18 ಕೋಟಿ 48 ಲಕ್ಷ ಠೇವಣಿ ಸಂಗ್ರಹವಾಗಿದೆ. ವಾಹನ, ಬಂಗಾರ, ಜಾಮೀನು ಸೇರಿದಂತೆ ವಿವಿಧ ಸಾಲದಂತೆ ಸುಮಾರು 107 ಕೋಟಿ 5ಲಕ್ಷ 99 ಸಾವಿರ ಸಾಲ ವಿತರಿಸಲಾಗಿದ್ದು, ಶೇ. 90ರಷ್ಟು ವಸೂಲಾತಿ ಸಾಧನೆ ಮಾಡಿದೆ. ಸಂಘವು 2024-25ನೇ ಸಾಲಿನಲ್ಲಿ ಸುಮಾರು 5 ಕೋಟಿ 6 ಲಕ್ಷ 53 ಸಾವಿರ 595 ರೂ.ಗಳ ನಿವ್ವಳ ಲಾಭ ಹೊಂದಿದೆ. ಪ್ರತಿಯೊಬ್ಬರ ಸಹಕಾರದೊಂದಿಗೆ ಸಂಘವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದರು.
ನಂತರ ಮುಖ್ಯ ಕಾರ್ಯ ನಿರ್ವಾಹಕ ಎಂ.ಲೋಕೇಶ್ವರ ರೆಡ್ಡಿ ಇವರು ವಾರ್ಷಿಕ ವರದಿಯನ್ನು ಮಂಡಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಟಿ.ಕೊಟ್ರೇಶ, ನಿರ್ದೇಶಕರಾದ ಹೆಚ್.ಮಂಜುನಾಥ, ಡಿ.ವೀರಪ್ಪ, ವಾಲಿ ಕೊಟ್ರಪ್ಪ, ಕೆ.ಸಣ್ಣ ಗವಿಸಿದ್ದಪ್ಪ, ಚಂದ್ರಶೇಖರ ಬಣಗಾರ, ಜಿ.ವೀರನಗೌಡ, ಕವಿತಾಳ ಚನ್ನಪ್ಪ, ಡಾ.ವೀನಗೌಡ ಎಸ್.ಪಾಟೀಲ್, ಕೆ.ಉಷಾರಾಣಿ, ಪಕ್ಕೀರಪ್ಪ, ಎನ್.ಯಂಕಪ್ಪ, ಎನ್.ಅಯ್ಯಪ್ಪ, ಹಾಗೂ ಸಿಬ್ಬಂದಿಗಳಾದ ವಿಜಯ, ಮಂಜು, ಡಿ.ಜಿ.ಪಾಟೀಲ್, ವಿರೇಶ, ಬೀರಪ್ಪ, ಶಿವಪ್ಪ ಸೇರಿದಂತೆ ಅನೇಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















