
ಕೊಟ್ಟೂರು : ಕೊಟ್ಟೂರು ತಾಲೂಕು ಹ್ಯಾಳ್ಯ ಗ್ರಾಮ ಪಂಚಾಯಿತಿಯ ಬಸ್ ನಿಲ್ದಾಣದಲ್ಲಿ ಆರಂಭಿಸಿರುವ ಪುಸ್ತಕಗೂಡಿನ ಸ್ಥಳಕ್ಕೆ ಜಿಲ್ಲಾ ಪಂಚಾಯಿತಿಯ ಮಾನ್ಯ ಉಪ ಕಾರ್ಯದರ್ಶಿಗಳು ಕೆ.ತಿಮ್ಮಪ್ಪ ಅವರು ಬುಧವಾರ ಭೇಟಿ ನೀಡಿ ವೀಕ್ಷಣೆ ಮಾಡಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಯ ರಾಜೀವ್ ಗಾಂಧಿ ಫೆಲೋಶಿಪ್, ಗ್ರಾಮ ಪಂಚಾಯಿತಿಯ ನಿಧಿಯಡಿ ಗ್ರಾಮದ ಬಸ್ ನಿಲ್ದಾಣದಲ್ಲಿ ಪುಸ್ತಕ ಗೂಡನ್ನು ಕಳೆದ 2024 ರಲ್ಲಿ ಆರಂಭಿಸಲಾಗಿದೆ. ಅಲ್ಲಿಂದ ಇಲ್ಲಿಯವರೆಗೆ ಗ್ರಾಮಸ್ಥರು, ವಿದ್ಯಾರ್ಥಿಗಳು, ಹಿರಿಯರು, ಪ್ರಯಾಣಿಕರು ಪುಸ್ತಕ ಗೂಡಿನ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ.
ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಡಾ.ಬಾಳಪ್ಪನವರ ಆನಂದಕುಮಾರ ಅವರ ನಿರ್ದೇಶನದಂತೆ ಪುಸ್ತಕ ಗೂಡಿನ ಸಂರಕ್ಷಣೆಗಾಗಿ ತಾಲೂಕು ಪಂಚಾಯಿತಿಯ ಅನುದಾನದಡಿ ಸಿಸಿಟಿವಿ ಅಳವಡಿಸಲಾಗಿದೆ.
ನಿನ್ನೆ ಜಿಲ್ಲಾ ಪಂಚಾಯಿತಿಯ ಉಪಕಾರ್ಯದರ್ಶಿಗಳು ಮಾನ್ಯ ಶ್ರೀ ಕೆ.ತಿಮ್ಮಪ್ಪ ಅವರು ವೀಕ್ಷಿಸಿದರು. ಬಳಿಕ ಅರಿವು ಕೇಂದ್ರಕ್ಕೆ ಭೇಟಿ ನೀಡಿ ಮೂಲಸೌಕರ್ಯಗಳ ಬಗ್ಗೆ ಚರ್ಚಿಸಿದರು. ವೈಫೈ ಬ್ರಾಡ್ ಬ್ಯಾಂಡ್ ವ್ಯವಸ್ಥೆ ಕಲ್ಪಿಸುವಂತೆ ಪಿಡಿಒರವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿ.ಪಂನ ಅಧಿಕಾರಿಗಳಾದ ಶ್ರೀ ಲೋಕೇಶ್ ಬಾಬು, ಎಡಿಪಿಸಿ ಶ್ರೀ ಬಸವರಾಜ್, ಗ್ರಾಪಂ ಅಭಿವೃದ್ಧಿ ಅಧಿಕಾರಿ ಶ್ರೀ ಸಿಎಚ್ ಎಂ ಗಂಗಾಧರ್, ಗ್ರಂಥಪಾಲಕರಾದ ಶ್ರೀ ಬಿ.ಲೋಕೇಶ್, ಗ್ರಾ.ಪಂ ಸಿಬ್ಬಂದಿ ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















