ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಕೋಮಲಾಪುರ ಗ್ರಾಮದ ನಿಂಗಪ್ಪ ತಂದೆ ದಾಸಪ್ಪ ಕಿನ್ನಾಳ ಇವರಿಗೆ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯವು ಪಿ. ಹೆಚ್ ಡಿ ಪದವಿ ನೀಡಿದೆ.
ನಿಂಗಪ್ಪ ಅವರು ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಚಾಂದ್ ಬಾಷ ಅವರ ಮಾರ್ಗದರ್ಶನದಲ್ಲಿ
ಎಕ್ಸ್ ಪ್ಲೋರಿಂಗ್ ದ ಕಾಂಟೋರ್ಸ್ ಆಫ್ ದ ಗ್ಲೊಬಲೆಕ್ಟಿಕಲ್ ಇಮ್ಯಾಜಿನೇಶನ್ ಇನ್ ದ ಲಿಟರರಿ ಟ್ರಾಜೆಕ್ಟರಿ ಆಫ್ ಗುಗಿ ವಾ ಥಿಯಾಂಗೊ ಎಂಬ ವಿಷಯದ ಮೇಲೆ ಸಂಶೋಧನೆ ಮಾಡಿ ಪಿ ಎಚ್. ಡಿ ಪದವಿಗೆ ವಿಶ್ವವಿದ್ಯಾಲಯಕ್ಕೆ ಮಹಾ ಪ್ರಭಂದ ಸಲ್ಲಿಸಿದ್ದರು.
ಪ್ರಸ್ತುತ ನಿಂಗಪ್ಪ ಅವರು ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಇಂಗ್ಲಿಷ್ ವಿಭಾಗದ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇವರಿಗೆ ಪಿ. ಹೆಚ್ ಡಿ ಪದವಿ ಪ್ರದಾನ ಆಗಿರುವುದಕ್ಕೆ ಅವರ ಕುಟುಂಬದವರು, ಗೆಳೆಯರು, ಕಾಲೇಜಿನ ಸಿಬ್ಬಂದಿಗಳು, ಹಿತೈಷಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
- ಕರುನಾಡ ಕಂದ ಪತ್ರಿಕೆ




















