
ಇಂದು 77 ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದ ಶ್ರೀ ಸಾಯಿ ಪಬ್ಲಿಕ್ ಶಾಲೆ ವಾಲ್ಮೀಕಿನಗರ ಶಾಲೆಯಲ್ಲಿ ವಿಶೇಷವಾಗಿ ಆಚರಿಸಲಾಯಿತು.
77 ನೇ ಗಣರಾಜ್ಯೋತ್ಸವ ಪ್ರಯುಕ್ತ ಶಾಲೆಯಲ್ಲಿ ಶನಿವಾರ ಸಹಮುಖ್ಯೋಪಾಧ್ಯಾಯರಾದ ಶ್ರೀಮತಿ ಸವಿತಾ ನಾಯ್ಕ ರವರ ಸಲಹೆಯಂತೆ “Fireless Food activity” ಎಂಬ ಹೆಸರಿನ ಸ್ಪರ್ಧೆಯನ್ನು ಮಕ್ಕಳಿಗೆ ಏರ್ಪಡಿಸಲಾಗಿತ್ತು.
ಈ ಸ್ಪರ್ಧೆಯಲ್ಲಿ ವಿಶೇಷವಾಗಿ ಆಹಾರ ತಯಾರಿಸಿದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಹಾಗೂ ಈ ದಿನ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದ ಘನ ಉಪಸ್ಥಿತಿ ಹಾಗೂ ಅಧ್ಯಕ್ಷತೆಯನ್ನು ಹಾಗೂ ಧ್ವಜಾರೋಹಣ ಕಾರ್ಯ ಕ್ರಮವನ್ನು ಸಂಸ್ಥೆಯ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಅಮರೇಶಪ್ಪ ಜೀನೂರ ಕಾರಟಗಿಯವರು ನೆರವೇರಿಸಿದರು.
ಮಕ್ಕಳಿಗೆ ವಿವಿಧ ರೀತಿಯ ಸ್ಪರ್ಧೆಳನ್ನು ಏರ್ಪಡಿಸಿ ಬಹುಮಾನ ವಿತರಣೆ ಮಾಡಲಾಯಿತು.
ಪಟ್ಟಣದ ತಾಲೂಕ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳಿಂದ ಪಥಸಂಚಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಹರೀಶ ನಾಯಕ , ಸಹಶಿಕ್ಷಕಿಯರಾದ ಬೀಬಿ ಫಾತಿಮಾ, ಮಂಜುನಾಥ ಮಿಟ್ಲಕೋಡ, ಮಂಜುನಾಥ ಪಾಟೀಲ್, ಶ್ರೀಮತಿ ತ್ರಿವೇಣಿ ರಾಮ್ ಜಿ, ಪಿ.ಮೇಘಶ್ರೀ , ವೆಂಕಟೇಶ ಕಂಠಿ, ಮರಿಯಮ್ಮ.ಸಿ, ರಿಯಾನಾ ಬೇಗಂ, ಸುನೀತಾ ಹಿರೇಮಠ, ರಾಜೇಶ್ವರಿ.ವಿ , ನೀಲಾ ಚಿತ್ರಗಾರ , ರೋಜಾ.ಡಿ , ಭುವನೇಶ್ವರಿ ಹಾದಿಮನಿ ಹಾಗೂ ಬೋಧಕೇತರ ಸಿಬ್ಬಂದಿಯಾದ ವೆಂಕಟೇಶ ಕಲಿಕೇರಿ, ಜುಬೇದಾಬೇಗಂ, ವಾಹನ ಚಾಲಕರಾದ ಜಡೇಶ್.ವಿ , ಭೀಮೇಶ ಕಲಿಕೇರಿ, ಹನುಮೇಶ ಗಂಗಾಮತ ಹಾಗೂ ಶಾಲೆಯ ಪಾಲಕರು ಹಾಜರಿದ್ದರು.
ವರದಿ ಹನುಮಂತಪ್ಪ ನಾಯಕ




















