ಬಾಗಲಕೋಟೆ/ ಮುಧೋಳ ತಾಲೂಕಿನ ಸುಕ್ಷೇತ್ರ ಮುಗಳಖೋಡದಲ್ಲಿ ಶ್ರೀ ಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನ [ರಿ.] ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ವಾರಾಚರಣೆ ನಿಮಿತ್ಯ ಗ್ರಾಮದೇವತಾ ಆರಾಧನೆ, ಶ್ರೀದೇವಿ ಪಾರಾಯಣ -ಪುರಾಣ ಕಾರ್ಯಕ್ರಮವು ಇದೇ ಜನವರಿ ದಿ .30 ಶುಕ್ರವಾರ ಬೆಳಿಗ್ಗೆ 8.30 ಕ್ಕೆ ಪ್ರಾರಂಭಗೊಳ್ಳಲಿದೆ ಎಂದು ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಕುಮಾರ ಗುರುಪ್ರಸಾದ್ ಸ್ವಾಮೀಜಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೆಬ್ರವರಿ ದಿ .6 ಶುಕ್ರವಾರದ ವರೆಗೆ ನಡೆಯುವ ಗ್ರಾಮದೇವತಾ ಆರಾಧನೆ – ಶ್ರೀದೇವಿ ಪುರಾಣ-ಪ್ರವಚನವು ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳಿಂದ ಪ್ರತಿದಿನ ಬೆಳಗ್ಗೆ 6 ರಿಂದ 7 ರ ವರೆಗೆ ಹಾಗೂ ಸಂಜೆ 8 ರಿಂದ 9 ರ ವರೆಗೆ ನಡೆಯಲಿದೆ.
ಫೆಬ್ರುವರಿ 6 ಶುಕ್ರವಾರ ಬೆಳಗ್ಗೆ 8.30 ಕ್ಕೆ ನವದುಗಿ೯ಯರಿಗೆ ಉಡಿ ತುಂಬುವುದು, ಸೇವಾ ಧುರೀಣರಿಗೆ ಸತ್ಕಾರ ನಂತರ ವಿವಿಧ ಗ್ರಾಮಗಳ ವಿವಿಧ ಕಲಾತಂಡಗಳಿಂದ ಜನಪದ ಸಂಸ್ಕೃತಿ ಸಂಭ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವವು, ಭಾಗವಹಿಸಿದ ಕಲಾ ತಂಡಗಳನ್ನು ಗೌರವಿಸಿ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು.
ಹೆಚ್ಚಿನ ಮಾಹಿತಿಗೆ 9972682938/9742915714
ಈ ಸಂಖ್ಯೆಗೆ ಸಂಪರ್ಕಿಸಲು ತಿಳಿಸಿದ್ದಾರೆ.
- ಕರುನಾಡ ಕಂದ ಪತ್ರಿಕೆ.




















