ಕಲಬುರಗಿ ಜಿಲ್ಲೆಯ ಯಡ್ರಾಮಿ ಬಸ್ ನಿಲ್ದಾಣದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ತಾಲೂಕು ದಂಡಾಧಿಕಾರಿಗಳಿಗೂ ಹಾಗೂ ಸಾರಿಗೆ ಇಲಾಖೆಯ ಘಟಕ ವ್ಯವಸ್ಥಾಪಕರಿಗೂ ಮನವಿ ಸಲ್ಲಿಸಿ ಸಿಸಿ ಕ್ಯಾಮೆರಾದ ಅವಶ್ಯಕತೆ ಕುರಿತು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಗಮನಕ್ಕೆ ತರಲಾಯಿತು.
ಒಂದು ವಾರದಲ್ಲಿ ಯಡ್ರಾಮಿ ಪಟ್ಟಣದ ಬಸ್ ನಿಲ್ದಾಣದ ಎರಡು ಮುಖ್ಯ ದ್ವಾರಕ್ಕೆ ಹಾಗೂ ಪ್ರಯಾಣಿಕರು ಕುಳಿತುಕೊಳ್ಳುವ ಸ್ಥಳದಲ್ಲಿ ಸಿ ಸಿ ಕ್ಯಾಮೆರಾ ಅಳವಡಿಸಬೇಕೆಂದು ವಿನಂತಿಸಲಾಯಿತು.
ಸಂಬಂಧಪಟ್ಟ ಅಧಿಕಾರಿಗಳು ಸಕರಾತ್ಮಕವಾಗಿ ಸ್ಪಂದಿಸಿ ಕ್ರಮ ಕೈಗೊಳ್ಳುತ್ತೇವೆಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಯಡ್ರಾಮಿ ತಾಲೂಕು ಗೌರವ ಅಧ್ಯಕ್ಷರು ಹಾಗೂ ಜೇವರ್ಗಿ ತಾಲೂಕಿನ ಪಿ ಎಲ್ ಡಿ ಬ್ಯಾಂಕ್ ಉಪಾಧ್ಯಕ್ಷರಾದ ಸಾಂಭಶಿವ ಎಂ. ಹಿರೇಮಠ, ರಾಜಕೀಯ ಮುಖಂಡರಾದ ಗುರಣ್ಣ ದೊಡ್ಡಮನಿ, ಕಾಚಾಪುರ ಕರವೇ ಉತ್ತರ ಕರ್ನಾಟಕ ಅಧ್ಯಕ್ಷರ ಕಾರ್ಯದರ್ಶಿಯಾದ ಸಾಹೇಬಗೌಡ ಬಿ. ದೇಸಾಯಿ, ಕರವೇ ಯಡ್ರಾಮಿ ತಾಲೂಕು ಉಸ್ತುವಾರಿ ಅಧ್ಯಕ್ಷರಾದ ದೇವೇಂದ್ರ ನಾಯ್ಕೋಡಿ ಮಾಣಶುಣಗಿ, ರಾಜಕೀಯ ಮುಖಂಡರಾದ ಮಲ್ಲಿಕಾರ್ಜುನ ಬಿರಾದಾರ , ಕರವೇ ತಾಲೂಕು ಮುಖಂಡರಾದ ಹನುಮಂತ ಕೂಡ್ಗಿ, ಕಾಚಾಪುರ ಕರವೇ ಹೋರಾಟಗಾರರಾದ ರಾಚೋಟಯ್ಯ ಹಿರೇಮಠ, ಕಾಚಾಪುರ ರೈತ ಹೋರಾಟಗಾರರಾದ ಯಲ್ಲಾಲಿಂಗ ಡಿ. ಹರನಾಳ, ನವ ಕರ್ನಾಟಕ ನಿರ್ಮಾಣ ಸೇನೆ ತಾಲೂಕು ಅಧ್ಯಕ್ಷರಾದ ರೇವಣಸಿದ್ದ ಮಕಾಶಿ, ಬಸಯ್ಯ ಹಿರೇಮಠ ಮಾಣಶುಣಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ ಆರ್. ಎಸ್. ಹಿರೇಮಠ




















