ವಿಶ್ವ ವಿಖ್ಯಾತ ಹಂಪಿ ಉತ್ಸವದಲ್ಲಿ ಕವಿಗೋಷ್ಠಿಗೆ ದೋಟಿಹಾಳ ಗ್ರಾಮದ ಹೆಮ್ಮೆಯ ಕವಯಿತ್ರಿ ರೇಷ್ಮಾ ಕಂದಕೂರ ಶಿಕ್ಷಕಿ ಆಯ್ಕೆಯಾಗಿರುವುದು ಸಂತಸ ಮತ್ತು ಹೆಮ್ಮೆಯ ವಿಷಯ ತಮ್ಮದೇ ಆದಂತಹ ವಿಶಿಷ್ಟ ಬರಹ ಕವನ ಲೇಖನಗಳನ್ನು ಬರೆಯುತ್ತಾ ಜನರ ಮನಸ್ಸು ಗೆದ್ದಿದ್ದಾರೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿದ್ದಾರೆ ಇವರ ಲೇಖನಗಳು ಕವನಗಳನ್ನು ಹಲವಾರು ಪತ್ರಿಕೆಗಳು ಪ್ರಕಟ ಮಾಡಿವೆ ಸಾಮಾಜಿಕ ಅನಿಷ್ಟಗಳ ವಿರುದ್ಧ ದನಿಯೆತ್ತುತ್ತಾ ಹಲವಾರು ವಿಷಯಗಳನ್ನು ಕುರಿತು ಅರಿವು ಮೂಡಿಸುತ್ತವೆ. ಸಹೃದಯಿ ಕವಯಿತ್ರಿ ರೇಷ್ಮಾ ಕಂದಕೂರ ಸದ್ಯ ಸಿಂಧೂರಿನ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿ ಯಾಗಿದ್ದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ರಾಯಚೂರು ಜಿಲ್ಲಾ ಅಧ್ಯಕ್ಷರು ಮತ್ತು ಅಧ್ಯಕ್ಷರು ಮಕ್ಕಳ ಸಾಹಿತ್ಯ ಪರಿಷತ್ ತಾಲೂಕು ಘಟಕ ಸಿಂಧನೂರು.
ಕವಯಿತ್ರಿ ರೇಷ್ಮಾ ಕಂದಕೂರ ಉತ್ತಮ ಶಿಕ್ಷಕಿಯಾಗಿ ಉತ್ತಮ ಬರಹಗಳನ್ನು ಬರೆಯುತ್ತಾ ಮಕ್ಕಳ ಕಥೆಗಳು,ವಚನಗಳು, ಹಾಯ್ಕುಗಳು. ಕವಿತೆಗಳು ಬರೆಯುತ್ತಾ ಪ್ರಕಟ ಮಾಡುತ್ತಾ ಇದ್ದಾರೆ. ಇವರಿಗೆ ಹಲವಾರು ರಾಜ್ಯ ಮಟ್ಟದ ಪ್ರಶಸ್ತಿಗಳು ಲಭಿಸಿವೆ ವಿಶ್ವ ವಿಖ್ಯಾತ ಹಂಪಿ ಉತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶ ದೊರೆತಿದ್ದು ಸಂತಸದ ವಿಷಯವಾಗಿದೆ.
- ಕರುನಾಡ ಕಂದ ಪತ್ರಿಕೆ



















