ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಸ್ವಾತಂತ್ರ್ಯ ಹೋರಾಟಗಾರರ ನಾಡು ಕೋಗನೂರಿನ ಆಶ್ರಯ ಕಾಲೋನಿಯಲ್ಲಿ 5 ವರ್ಷದಿಂದ ಬೀದಿ ದೀಪ ವ್ಯವಸ್ಥೆ ಇಲ್ಲದಿರುವುದು ಜನರ ಆಕ್ರೋಶಕ್ಕೆ ಕಾರಣವಾಯಿತು, ಜೊತೆಗೆ ಊರಿನ ಮುಖ್ಯ ರಸ್ತೆಯಲ್ಲಿ ಕರೆಂಟ್ ಕೇಬಲ್ ಕೆಳಕ್ಕೆ ನೇತಾಡುತ್ತಿರುವುದು ಅಪಾಯಕಾರಿಯಾಗಿದ್ದು ಜನರು ಭಯಬೀತರಾಗಿದ್ದಾರೆ ದೊಡ್ಡ ದೊಡ್ಡ ವಾಹನ ಚಲಾಯಿಸುವುದು ಕಷ್ಟವಾಗಿರುತ್ತದೆ ಎಂದು ಗ್ರಾಮಸ್ತರು ತಮ್ಮ ಅಳಲನ್ನು ತೋಡಿಕೊಂಡರು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಪಿಡಿಒ ಅಧಿಕಾರಿ ಶರಣಪ್ಪ ಮುದ್ದಿ ಊರಿನ ಮುಖ್ಯ ರಸ್ತೆಯಲ್ಲಿ ಕೆಳಗೆ ನೇತಾಡುತ್ತಿರುವ ಕರೆಂಟ್ ಕೇಬಲ್ ಅನ್ನು ವೀಕ್ಷಿಸಿ ತಕ್ಷಣ ಸಮಸ್ಯೆ ಬಗೆಹರಿಸುವುದರ ಜೊತೆಗೆ ಬೀದಿ ದೀಪ ಅಳವಡಿಸುವ ಮನವಿಯನ್ನು ಸ್ವೀಕರಿಸಿ ಕಾರ್ಯ ಪ್ರಕ್ರಿಯೆಯ ಭರವಸೆ ನೀಡಿದರು, ಈ ಸಂದರ್ಭದಲ್ಲಿ ಪಕೀರ ಸಾಬ್ ಕಲಾಯಿಗರ್, ಹೈದರಲಿ ಪಿಂಜಾರ್, ಜುಬೇಧಾ ಪಿಂಜಾರ್, ದಾವಲ್ ಬಿ ಕಲೆಗಾರ್ , ಸತ್ಯಮ್ಮ ಅಗಸರ, ಲಾಲ್ ಬಿ ದೇಸಳ್ಳಿ ಮತ್ತು ಸಾಮಾಜಿಕ ಹೋರಾಟಗಾರರದ ರಾಜು ಎಚ್. ರವರು ಉಪಸ್ಥಿತರಿದ್ದರು. ಒಂದು ವೇಳೆ ಕೆಲಸ ಆಗದಿದ್ದರೆ ಹೋರಾಟದ ಎಚ್ಚರಿಕೆಯ ಧ್ವನಿ ಗೂಡಿಸಿದರು.
ವರದಿಗಾರರು :ರಾಖೇಶ ಬೂದಿಹಾಳ




















