
ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಶ್ರೀ ಮಾರ್ಕಂಡೇಶ್ವರ ಸ್ವಾಮಿಯ ಪ್ರತಿಷ್ಠಾಪನೆಯ ಶತಮಾನೋತ್ಸವ ಪ್ರಯುಕ್ತ 16 ಫೆಬ್ರವರಿ 2026ರಂದು ಶ್ರೀ ಶಿವಭಕ್ತ ಮಾರ್ಕಂಡೇಶ್ವರ ಸ್ವಾಮಿಯು ಪ್ರತಿಷ್ಠಾಪನೆಗೊಂಡು 100 ವರ್ಷ ಕಳೆದ ಸಂಭ್ರಮಾಚರಣೆಯ ಕಾರ್ಯಕ್ರಮವನ್ನು ಕುಂಭಮೇಳದೊಂದಿಗೆ ಶ್ರೀ ಮಾರ್ಕಂಡೇಶ್ವರ ಸ್ವಾಮಿಯ ಭಾವಚಿತ್ರ ಮೆರವಣಿಗೆ ಮೂಲಕ ಹಾಗೂ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳ ಅಡ್ಡ ಪಲ್ಲಕ್ಕಿ ಉತ್ಸವವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಆಚರಿಸಲಾಯಿತು. 17 ಫೆಬ್ರವರಿ 2026 ರಂದು ಶ್ರೀ ಮಾರ್ಕಂಡೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ರುದ್ರಹೋಮ ಪೂಜೆ ಕಾರ್ಯಕ್ರಮ ನಡೆಯುತ್ತದೆ ಹಾಗೂ 18 ಫೆಬ್ರವರಿ 2026ರಂದು ಧರ್ಮಸಭೆ ಮುಂತಾದ ಕಾರ್ಯಕ್ರಮಗಳು ನಡೆಯುತ್ತವೆ.
ಸನ್ಮಾನ್ಯ ಶ್ರೀ ಕೆ ನೇಮಿರಾಜ್ ನಾಯ್ಕ್ ಶಾಸಕರು ಹಗರಿಬೊಮ್ಮನಹಳ್ಳಿ ಕ್ಷೇತ್ರ, ಹಾಗೂ ಶ್ರೀ ಎಂಎಂಜೆ ಹರ್ಷವರ್ಧನ್ ಕಾರ್ಯದರ್ಶಿಗಳು ಜ್ಞಾನ ಗುರು ವಿದ್ಯಾಪೀಠ ಉಜ್ಜಿನಿ ರವರು ಉದ್ಘಾಟನೆ ಮಾಡಿದರು.
ಶ್ರೀ ಪ್ರಭುಲಿಂಗ ಮಹಾಸ್ವಾಮಿಗಳು ಪದ್ಮಶಾಲಿ ಗುರುಪೀಠ ತುಮ್ಮಿನಕಟ್ಟೆ, ಶ್ರೀ ಶ್ರೀ ಶಿವಪ್ರಕಾಶ್ ಮಹಾಸ್ವಾಮಿಗಳು ಶ್ರೀ ಗುರುಕೊಟ್ಟೂರೇಶ್ವರ ಹಿರೇಮಠದ ಕ್ರಿಯಾಮೂರ್ತಿಗಳು, ಶ್ರೀ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಚಾನು ಕೋಟೆ ಮಠ, ಅಧ್ಯಕ್ಷರು ಶ್ರೀ ಗೋರಂಟಿ ಕೊಟ್ರೇಶ್, ಶ್ರೀ ದೇವರೆಡ್ಡಿ ಪರಮೇಶ್ವರಪ್ಪ ಕಾರ್ಯದರ್ಶಿರವರು ಉಪಸ್ಥಿತರಿದ್ದರು.
ವರದಿ: R H ಕೊಟ್ರೇಶ, ಕರುನಾಡ ಕಂದ ಪತ್ರಿಕೆ ಕೊಟ್ಟೂರು ತಾಲೂಕು.



















