ಬಾಗಲಕೋಟೆ/ ಇಲಕಲ್ಲ : ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ನೆಡೆಯುವ ಎಲ್ಲಾ ಘಟನೆಗಳ ಸತ್ಯಾಸತ್ಯತೆ ಅರಿತು ಆ ಘಟನೆಯ ಸಂಪೂರ್ಣ ನಿಜವರಿತು ನಿಶ್ಚಿoತೆಯ ಜೀವನ ನಡೆಸಬೇಕು ಅವಾಗ ನಮ್ಮಲ್ಲಿರುವ ಎಲ್ಲ ಚಿಂತೆಗಳು ದೂರಾಗಿ ನೆಮ್ಮದಿ ಜೀವನ ನೆಡೆಸಲು ಸಾಧ್ಯ ಎಂದು ಕಂದಗಲ್ಲ ಗ್ರಾಮದ ಸುವರ್ಣಗಿರಿ ರುದ್ರಸ್ವಾಮಿ ಮಠದಲ್ಲಿ ನಡೆದ 62 ನೆ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಮುಖ್ಯ ಅಥಿತಿಗಳಾಗಿ ಸಿಂಧನೂರು ತಾ. ದೈ. ಶಿ. ಪರಿವೀಕ್ಷಕರಾದ ಸೋಮಲಿಂಗಪ್ಪ ತಾವರಗೇರಾ ಮಾತನಾಡಿದರು.
ಶ್ರೀಮಠದ ಡಾ ಮ. ನಿ. ಪ್ರ. ಚನ್ನಮಲ್ಲ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮ ಸೇವಾರ್ಥಿಗಳಾದ ಬಸೆಟ್ಟೆಪ್ಪ ಸಜ್ಜನ ಅಥಿತಿಗಳಾಗಿದ್ದರು. ಕಾರ್ಯಕ್ರಮದಲ್ಲಿ ಸೇವೆ ಸಲ್ಲಿಸಿದ ಬಸೆಟ್ಟೆಪ್ಪ ಸಜ್ಜನ, ಸೋಮಲಿಂಗಪ್ಪ ತಾವರಗೇರಾ, ಹಾಗೂ ತಾವರಗೇರಾ ಡಿ ಎಡ್ ಕಾಲೇಜಿನ ರಂಗನಾಥ್ ಅಂಬಿಗೇರ ಅವರನ್ನು ಸತ್ಕರಿಸಲಾಯಿತು.
ವೀರಮ್ಮ ಟೆoಗಿನಕಾಯಿ ಪ್ರಾರ್ಥನೆ ಗೀತೆ ಹಾಡಿದರು,
ಚನ್ನಪ್ಪ ಜಾಲಿಹಾಳ, ಸ್ವಾಗತಿಸಿದರು.
ಶ್ವೇತಾ ಮೂಲಿಮಠ ನುಡಿನಮನ ಸಲ್ಲಿಸಿದರು. ಶಂಕ್ರಮ್ಮ ಗೆಜ್ಜೆಲಗಟ್ಟಿ ವಂದಿಸಿದರು.
ಸಾವಿತ್ರಿ ಹಡಪದ ಕಾರ್ಯಕ್ರಮ ನಿರೂಪಿಸಿದರು. ಮಕ್ಕಳು ಮಹಿಳೆಯರು ಸೇರಿದಂತೆ ಕಂದಗಲ್ಲ ಹಾಗೂ ಸುತ್ತಮುತ್ತಲಿನ ಭಾಗದ ಭಕ್ತರು ಆಗಮಿಸಿದ್ದರು.
- ಕರುನಾಡ ಕಂದ ಪತ್ರಿಕೆ



















