ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಆಶ್ರಯದಲ್ಲಿ ಮನೆಗೊಂದು ಗ್ರಂಥಾಲಯ ಅನುಷ್ಠಾನ ಅಭಿಯಾನವು ಚಾಮರಾಜಪೇಟೆಯ ಮಾತಿನ ಮನೆಯಲ್ಲಿ ನಡೆಯಿತು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ ಮಾನಸ ಅವರು ಉದ್ಘಾಟಿಸಿ ಮನೆಗಳಲ್ಲಿ ಗ್ರಂಥಾಲಯಗಳ ಅವಶ್ಯಕತೆ ಕುರಿತು ಮಾತನಾಡಿ, ಮನೆಗೆ ದೇವರ ಮನೆ ಎಷ್ಟು ಮುಖ್ಯವೋ ಗ್ರಂಥಾಲಯಕ್ಕೂ ಅಷ್ಟೇ ಮಹತ್ವ ನೀಡಬೇಕು ಎಂದು ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಟಿ ತಿಮ್ಮೇಶ್ ಮಾತನಾಡಿ ಮಕ್ಕಳಲ್ಲಿ ಪುಸ್ತಕ ಸಂಸ್ಕೃತಿಯ ಅರಿವು ಮೂಡಿಸುವುದು ಅಗತ್ಯ ಎಂದು ಹೇಳಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ರಾ ಸು ವೆಂಕಟೇಶ ಅವರು ಪುಸ್ತಕಗಳು ಮಾಯವಾದಂತೆ ಕಾಣುತ್ತದೆಯಾದರೂ ಯಾವ ತಂತ್ರಜ್ಞಾನವೂ ಅದನ್ನು ಮುಗಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು. ಕನ್ನಡ ಪುಸ್ತಕ ಪ್ರಾಧಿಕಾರದ ಪರವಾಗಿ ಮಾತಿನ ಮನೆ ಗ್ರಂಥಾಲಯದ ರಾ ಸು ವೆಂಕಟೇಶ ದಂಪತಿಗಳನ್ನು ಡಾ. ಮಾನಸ ಅವರು ಗೌರವಿಸಿದರು. ಮಾತಿನ ಮನೆಯ ಪರವಾಗಿ ಡಾ. ಮಾನಸ, ಟಿ ತಿಮ್ಮೇಶ್, ಶ್ರೀನಿವಾಸ್ ಹಾಗೂ ವಿಜಯಲಕ್ಷ್ಮಿ ಸತ್ಯಮೂರ್ತಿಯವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.
ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ರಾಧಾ ಕೇಶವ್ ನಿರ್ವಹಿಸಿದರು.
ವರದಿ: ಕೊಡಕ್ಕಲ್ ಶಿವಪ್ರಸಾದ್



















