ಶಿವಮೊಗ್ಗ ನಗರ ತುಂಬಾ ಬೆಳೆದಿದೆ ಜನಸಂಖ್ಯೆ ಹೆಚ್ಚಾಗಿದೆ ನಗರಕ್ಕೆ ದಿನನಿತ್ಯ ಬೇರೆ ಊರುಗಳಿಂದ ಆಸ್ಪತ್ರೆಗೆ, ವ್ಯಾಪಾರಕ್ಕೆ ಅಥವಾ ಇನ್ನಿತರ ಬೇರೆ ಬೇರೆ ಕೆಲಸಗಳಿಗೆ ತುಂಬಾ ಜನ ಬರುತ್ತಾರೆ. ವ್ಯಾಪಾರಸ್ಥರು ತುಂಬಾ ಚೆನ್ನಾಗ ದುಡಿಮೆ ಮಾಡಿಕೊಳ್ಳುತ್ತಿದ್ದಾರೆ.
ಇಲ್ಲೊಂದು ವಿಷಯ ಏನಂದರೆ ಮಹಾನಗರ ಪಾಲಿಕೆ ಸೂಚನೆ ಕೊಟ್ಟಿದೆ ಅದನ್ನು ಎಸ್ ಪಿ ಅವರು ಕಾರ್ಯಗತಗೊಳಿಸುವ ಸಮಯದಲ್ಲಿ ಇಲ್ಲಿಂದ ಇತ್ತೀಚೆಗೆ ಬೇರೆ ಕಡೆ ವರ್ಗಾವಣೆಯಾಗಿದ್ದಾರೆ ಅದರರ್ಥ ಫುಟ್ಪಾತ್ ಮೇಲೆ ಯಾವುದೇ ಹೆಸರಿನ ಬೋರ್ಡ್ ಗಳು ಇರಬಾರದು. ಇದು ಸಾರ್ವಜನಿಕರಿಗೆ ತೊಂದರೆ ಆಗುತ್ತೆ ಅಂತ ತಿಳಿಸಿದ್ದಾರೆ .ಬಹಳಷ್ಟು ಘಟನೆಗಳನ್ನು ಇಲ್ಲಿವರೆಗೆ ನಡೆದಿದ್ದಾವೆ ಆದರೆ ಇಲ್ಲಿ ತೋರಿಸಿರುವ ಜಾಗದಲ್ಲಿ ಮೂರು ಜನಕ್ಕೆ ತಗುಲಿ ಗಾಯಗಳಾಗಿವೆ ಎಂದು ವರದಿಯಾಗಿದ್ದು ಈ ಘಟನೆ ದುರ್ಗಿಗುಡಿ ಮುಖ್ಯ ರಸ್ತೆ ಪುಟ್ ಪಾತ್ ಮೇಲೆ ನಡೆದಿದೆ. ಈ ಸಂಬಂಧ ಸಾರ್ವಜನಿಕರು ಸಿಟ್ಟು ಮಾಡಿಕೊಂಡಿದ್ದು ಇದು ಎಷ್ಟರ ಮಟ್ಟಿಗೆ ಸರಿ, ಆದ್ದರಿಂದ ಇಡೀ ನಗರದಲ್ಲಿ ಫುಟ್ಪಾತಗಳಲ್ಲಿ ಯಾವುದೇ ಹೆಸರಿನ ಅವರವರ ಅಂಗಡಿ ಮುಂದೆ ಬೋರ್ಡ್ ಇರಬಾರದು ಅಕಸ್ಮಾತ್ ಪುಟ್ ಪಾತ್ ಜಾಹೀರಾತು ಬೋರ್ಡ್ ಕಂಡು ಬಂದು ಅದರಿಂದ ಯಾವುದೇ ಅನಾಹುತ ಆಗಿದ್ದರೆ ಅದಕ್ಕೆ ಸಂಬಂದಿಸಿದ ಅಂಗಡಿ ಮಾಲಕರು ಜವಾಬ್ದಾರರಾಗಬೇಕಾಗಿದೆ.
- ಕರುನಾಡ ಕಂದ



















