ಬಣ್ಣ ಬಣ್ಣಗಳಲಿ
ಮಿಂದೆದ್ದರು ಇಂದು,
ಸಹೋದರರು ಇವರು
ಕೊಪ್ಪಳದ ಶಾಸಕರು
ಸಂಸದರು,
ಜಿಲ್ಲಾ ಕೇಂದ್ರವೆಂಬ
ಹಣೆಪಟ್ಟಿ, ಕೊಪ್ಪಳದ್ದು,
ಸುರಕ್ಷಿತ ರಸ್ತೆಗಳಿಲ್ಲ,
ಅನಾರೋಗ್ಯಕ್ಕೀಡಾದವರಿಗೆ,
ಲೆಕ್ಕವೇ ಇಲ್ಲ,
ಧೂಳುಮಯವಾಗಿದೆ
ಕೊಪ್ಪಳವೆಲ್ಲಾ..
ಬಲ್ಟೋಟ,
ಕಾರ್ಖಾನೆಯ ಹೊಗೆ,
ಮೇಲೆ ಬಿಸಿಲಿನ ಧಗೆ
ಅಳಿವಿನ ಅಂಚಿನಲ್ಲಿದೆ,
ಕೊಪ್ಪಳದ ಮಾನವ ಸಂಕುಲ..!
ಬಣ್ಣಗಳಲಿ
ಮಿಂದೆದ್ದರು, ನಮ್ಮ ಶಾಸಕರು, ಸಂಸದರು.
ಇವರು ಅಪೂರ್ವ ಸಹೋದರರು….
- ಶಿವಪ್ರಸಾದ್ ಹಾದಿಮನಿ.✍️
ಕೊಪ್ಪಳ.




















