
ಗದಗ ಜಿಲ್ಲೆಯ ಗದಗ ತಾಲ್ಲೂಕಿನ ಕದಡಿ ಗ್ರಾಮದಲ್ಲಿ
ಎಸ್.ಕೆ.ಡಿ.ಆರ್.ಪಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಹಕಾರದೊಂದಿಗೆ, ಕದಡಿಯ ಹೊರವಲಯದಲ್ಲಿ ಬೃಹತ್ ಪ್ರಮಾಣದ ಕುಡಿಯುವ ನೀರಿನ ಕೆರೆಯನ್ನು ಪ್ರಾರಂಭಿಸಿದ್ದು ಈ ಕಾರ್ಯಕ್ರಮದಲ್ಲಿ ನರಗುಂದ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ, ಸನ್ಮಾನ್ಯ ಬಿ ಆರ್ ಯಾವಗಲ್ ಮಾತನಾಡಿದರು. ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿಂದ ಸಮಾಜಕ್ಕೆ ಉತ್ತಮ ಕೊಡೆಗೆಗಳು ಒದಗಿದ್ದು, ಬಹಳ ವರ್ಷಗಳಿಂದ ಉತ್ತಮ ಸಮಾಜ ಕಟ್ಟುವಲ್ಲಿ ಬಹಳಷ್ಟು ಸಹಕಾರಿಯಾಗಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಕರ್ತವ್ಯವನ್ನು ಮಾಡುತ್ತಾ ಬಂದಿದೆ, ಈಗ ಕದಡಿ ಗ್ರಾಮದ ಈ ಬೃಹತ್ ಕೆರೆಯ ಕಾಮಗಾರಿಯಿಂದ, ಊರಿನ ಜನಕ್ಕೆ ಸಮೃದ್ಧಿಯಾಗಿ ನೀರು ಸಿಗುತ್ತದೆ ಎಂದು ಈ ಕಾರ್ಯಕ್ರಮ ಉದ್ದೇಶಿಸಿ ಶ್ರೀ ಬಿ ಆರ್ ಯಾವಗಲ್ ಅವರು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ಅಭಿನಂದನೆಯನ್ನು ಸಲ್ಲಿಸಿದರು.
ಜೊತೆಗೆ ಈ ಕಾರ್ಯಕ್ರಮದಲ್ಲಿ ಕದಡಿ ಗ್ರಾಮ ಪಂಚಾಯತಿಯ ಗ್ರಾಮೀಣ ಅಭಿವೃದ್ಧಿ ಅಧಿಕಾರಿಗಳು, ಹಾಗೂ ಮಾಜಿ ಗ್ರಾಮ ಪಂಚಾಯತಿ ಸದಸ್ಯರು, ಶ್ರೀ ರುದ್ರಪ್ಪ ಅಡಿಗಿಮನಿ, ಶ್ರೀ ವಿ ಆರ್ ಗೋಜನೂರ್, ಮತ್ತು ಕದಡಿ ಗ್ರಾಮದ ಪ್ರಮುಖರಾದ, ಶ್ರೀ ಬಸವರಾಜ್ ಶಿರೂರು, ಶ್ರೀ ಕಳಕಪ್ಪ ಇಟಗಿ, ಶ್ರೀ ಮಹೇಶಗೌಡ ಚಿಕ್ಕನಗೌಡ್ರ ಹಾಗೂ ಕದಡಿ ಗ್ರಾಮದ ಯುವಕರು ಮತ್ತು ಮಹಿಳೆಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವರದಿ ವಿನೋದರಾಜ್ ಹೂಗಾರ



















