ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಯಾದಗಿರಿ ಮತಕ್ಷೇತ್ರದ ಗುತ್ತಿಗೆದಾರರಿಗೆ ವಲಸೆ ಹೋಗುವ ಪಜೀತಿ!!

ಶಾಸಕರ ದುರಾಡಳಿತಕ್ಕೆ ಬೇಸತ್ತು ಬೇರೆ ಜಿಲ್ಲೆಗಳತ್ತ ವಲಸೆ ಹೋಗುತ್ತಿರುವ ಯಾದಗಿರಿಯ ಗುತ್ತಿಗೆದಾರರು

ದಕ್ಷ ಪೊಲೀಸ್ ಅಧಿಕಾರಿ ಪರಶುರಾಮ್ ಅವರ ಸಾವಿನ ಪ್ರಕರಣದಲ್ಲಿ ಲಂಚ ಬೇಡಿಕೆ ಹಾಗೂ ಅಧಿಕಾರಿಗೆ ಮಾನಸಿಕ ಕಿರುಕುಳದ ಆರೋಪಿಗಳಾಗಿರುವ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರವರು ಶೀಘ್ರವೇ ರಾಜೀನಾಮೆ ನೀಡಬೇಕು,ಮೊದಲೇ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಹೊತ್ತಿರುವ ಯಾದಗಿರಿಯಲ್ಲಿ ಇಂತಹ ಭ್ರಷ್ಟ ಶಾಸಕರು ಅಧಿಕಾರ ನಡೆಸುವ ಯಾವ ನೈತಿಕತೆಯನ್ನು ಹೊಂದಿಲ್ಲ. ಕೇವಲ ಸರ್ಕಾರದ ಅಧಿಕಾರಿಗಳು ಮಾತ್ರವಲ್ಲದೇ ಗುತ್ತಿಗೆದಾರರ ಹತ್ತಿರವು ಶೇಕಡ 15% ಕಮಿಷನ್ ಕೇಳಿರುವ ಆರೋಪವು ಶಾಸಕರ ಮೇಲಿದೆ, ಅದೇ ರೀತಿಯಲ್ಲಿ ಸರ್ಕಾರಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ಇಂಜಿನಿಯರ್, ಎಫ್ ಡಿ ಸಿ, ಎಸ್ ಡಿ ಸಿ, ಸೇರಿದಂತ ಅನೇಕ ಅಧಿಕಾರಿಗಳಿಗೂ ಶೇಕಡ 18% ಕಮಿಷನ್ ನೀಡಿ, ನಂತರ ಸರ್ಕಾರಕ್ಕೂ ಶೇಕಡ 18 % GST ನೀಡಿದಾಗ ಗುತ್ತಿಗೆದಾದರು ಕೆಲಸ ನಿರ್ವಹಿಸಲು ಸಾಧ್ಯವೇ?
ಈ ಕಾರಣದಿಂದಾಗಿ ಯಾದಗಿರಿ ಮತಕ್ಷೇತ್ರದ ಗುತ್ತಿಗೆದಾರರು ತುಮಕೂರು, ಬೆಂಗಳೂರು, ಮೈಸೂರು, ಕೋಲಾರ ಜಿಲ್ಲೆಗಳತ್ತ ತೆರಳಿ ಕಾಮಗಾರಿಗಳನ್ನು ಮಾಡುವ ಪಜೀತಿಗೆ ಸಿಲುಕಿದ್ದಾರೆ ಈ ಕಾರಣದಿಂದಾಗಿ ಯಾದಗಿರಿ ಮತಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗಿವೆ. ಅಷ್ಟೇ ಅಲ್ಲದೇ,ತಂದೆಯ ಅಧಿಕಾರವನ್ನು ಮಗನು ದುರುಪಯೋಗ ಪಡಿಸಿಕೊಳ್ಳುವ ಮೂಲಕ ಕಾನೂನನ್ನ ಉಲ್ಲಂಘನೆ ಮಾಡಿದ್ದಾರೆ. ತಮ್ಮದೇ ಸರ್ಕಾರ ಎಂಬ ಅಮಲಿನಲ್ಲಿ ತಮ್ಮ ಅಧಿಕಾರವನ್ನ ಯದ್ವಾ-ತದ್ವ ದುರುಪಯೋಗ ಮಾಡಿಕೊಳ್ಳುತ್ತಿರುವ ಶಾಸಕರಿಗೆ ನಮ್ಮದೊಂದು ಧಿಕ್ಕಾರವಿದೆ. ಕೂಲಂಕುಶವಾಗಿ ಪಿಎಸ್ಐ ರವರ ಸಾವಿನ ಪ್ರಕರಣದ ತನಿಖೆಯಾಗಬೇಕು. ಭ್ರಷ್ಟಶಾಸಕರು ಎಂಬ ಅಪಕೀರ್ತಿಗೆ ಸಾಕ್ಷಿಯಾದ ಶಾಸಕರು ಶೀಘ್ರವೇ ರಾಜೀನಾಮೆ ನೀಡಬೇಕೆಂದು ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷರಾದ ಶ್ರೀ ಬಿ. ಎನ್. ವಿಶ್ವನಾಥ್ ನಾಯಕರವರು ಒತ್ತಾಯಿಸಿದ್ದಾರೆ.

ವರದಿ: ಶಿವರಾಜ ಸಾಹುಕಾರ್ ವಡಗೇರಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ