ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬಿಂಜವಾಡಗಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿದ ತಿಮ್ಮಾಪುರ ಶಾಲೆಯ ಮಕ್ಕಳು

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ತಿಮ್ಮಾಪೂರ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಅಮರಾವತಿಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಕ್ರೀಡಾಕೂಟಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆಂದು ಶಾಲೆಯ ಮುಖ್ಯ ಗುರುಮಾತೆ ಕೆ.ಎಚ್.ಬೆಲ್ಲದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಧನೆ ಮಾಡಿದ ವಿದ್ಯಾರ್ಥಿ ವಿದ್ಯಾರ್ಥಿನಿಯರ ವಿವರ ಈ ಕೆಳಗಿನಂತಿದೆ

ಬಾಲಕಿಯರ ವಿಭಾಗದಲ್ಲಿ

ರಿಲೇ-ಪ್ರಥಮ ಸ್ಥಾನ
100-ಮೀ ರನ್ನಿಂಗ್ ಪ್ರಥಮ(ಲಕ್ಷ್ಮೀ ರಾಮಪ್ಪ ಮಾದರ)
200- ಮೀಟರ್ ರನ್ನಿಂಗ್ ಪ್ರಥಮ (ಪ್ರಿಯಾಂಕ ಮಾದರ)
400-ಮೀಟರ್ ರನ್ನಿಂಗ್ ದ್ವಿತೀಯ (ಸ್ನೇಹಾ ಮಡಿವಾಳರ)
600- ಮೀಟರ್ ರನ್ನಿಂಗ್ ಪ್ರಥಮ, ದ್ವಿತೀಯ (ಲಕ್ಷ್ಮೀ ಮಾದರ& ಸ್ನೇಹಾ ಮಡಿವಾಳರ)
ಉದ್ದ ಜಿಗಿತ- ದ್ವಿತೀಯ (ಲಕ್ಷ್ಮೀ ಮಾದರ) ಇವರುಗಳು ಸಾಧನೆ ಮಾಡಿದ್ದಾರೆ.

ಬಾಲಕರ ವಿಭಾಗದಲ್ಲಿ

4×100 ರಿಲೇ ದ್ವಿತೀಯ
200 -ರನ್ನಿಂಗ್ ದ್ವಿತೀಯ (ಸಾಗರ ತಳವಾರ)
400- ಮೀಟರ್ ರನ್ನಿಂಗ್ ದ್ವಿತೀಯ (ಸಾಗರ ತಳವಾರ)
ಉದ್ದ ಜಿಗಿತ- ದ್ವಿತೀಯ(ಅಜಯ ಮಾದರ)
ಎತ್ತರ ಜಿಗಿತ-ದ್ವಿತೀಯ(ಅಜಯ ಮಾದರ)
ಹೀಗೆ ವಿವಿಧ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ ಎಂದು ತಿಳಿಸಿದ್ದಾರೆ. ಕ್ರೀಡಾಕೂಟದಲ್ಲಿ ಉತ್ತಮ ಸಾಧನೆಗೈದ ಬಾಲಕ ಹಾಗೂ ಬಾಲಕಿಯರನ್ನು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಹನುಮಂತ ಚಲವಾದಿ ಉಪಾಧ್ಯಕ್ಷೆ ಶ್ರೀಮತಿ ರೂಪಾ ಮಡಿವಾಳರ ಹಾಗೂ ಸದಸ್ಯರು,ಮುಖ್ಯ ಗುರುಮಾತೆಯರಾದ ಕೆ ಹೆಚ್ ಬೆಲ್ಲದ ಹಾಗೂ ಸಹ ಶಿಕ್ಷಕರಾದ ಶ್ರೀಮಂಜುನಾಥ್ ಟಕ್ಕಳಕಿ,ಬಿ.ಎಸ್. ತೋಟಗೇರ,ಶ್ರೀಮತಿ ಕೆ.ಕೆ.ಮಿಚನಾಳ,ಶ್ರೀಮತಿ ಶಾರದಾ ಹೂಲಗೇರಿ, ಶ್ರೀಮತಿ ಎಂ.ಬಿ.ಮನಿಯಾರ,ಶ್ರೀಮತಿ ಗೀತಾ ತಾರಿವಾಳ ಹಾಗೂ ಹಳೆ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು ಸೇರಿದಂತೆ ತಿಮ್ಮಾಪುರದ ಗ್ರಾಮಸ್ಥರು ಅಭಿನಂದಿಸಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ