ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ವಾರಕ್ಕೆ ನಾಲ್ಕು ದಿನ ಪೌಷ್ಟಿಕ ಆಹಾರ ವಿತರಣೆ.

ಚಿಕ್ಕಮಗಳೂರು:ನಗು ಫೌಂಡೇಶನ್ ಮತ್ತು ಡಚ್ ವಿವ್ಯೂ ಕಂಪನಿಯ ಸಹಯೋಗದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಆರು ಶಾಲೆಗಳ ನೂರೈವತ್ತು ಮಕ್ಕಳಿಗೆ ಆರು ವಾರಗಳ ಕಾಲ ಅತ್ಯುತ್ತಮ ಗುಣಮಟ್ಟದ ಪೌಷ್ಟಿಕ ಆಹಾರವನ್ನು ನೀಡಲಾಯಿತು. ಈ ಯೋಜನೆಯ ಅನುಷ್ಠಾನಕ್ಕಾಗಿ ಫೌಂಡೇಶನ್ ರವರು ಇಲ್ಲಿಯವರೆಗೆ 18,000 ರೂಪಾಯಿ ಖರ್ಚು ಮಾಡಿದ್ದಾರೆ.
ವಾರಕ್ಕೆ ನಾಲ್ಕು ದಿನಗಳಂತೆ ಪ್ರತಿ ದಿನವೂ ಕೂಡ ವಿಶೇಷ ಪೌಷ್ಟಿಕ ಆಹಾರವಾದ ತೆಂಗಿನ ಕಾಯಿ ಲಾಡು, ಶೇಂಗಾ ಲಾಡು, ಸಿರಿ ಧಾನ್ಯಗಳ ಲಾಡು, ಗೋಡಂಬಿ ಬಿಸ್ಕೆಟ್ , ಹೆಸರು ಕಾಳು,ಕಡ್ಲೆ ಕಾಳು,ಹಸಿರು ಬಟಾಣಿ ಕಾಳು ಮತ್ತು ಬಾಳೆಹಣ್ಣು ನೀಡಿದ್ದಾರೆ .ಇದರ ಲಾಭವನ್ನು ಹೇರೂರು ಶಾಲೆಯ 50 ಮಕ್ಕಳು, ಹೆದ್ಸೆ ಶಾಲೆಯ 29 ಮಕ್ಕಳು, ಎಲೆಮಡಲು ಶಾಲೆಯ 21 ಮಕ್ಕಳು,ಮೇದಕ್ಕಿ ಶಾಲೆಯ 8 ಮಕ್ಕಳು, ತಲಮಕ್ಕಿ ಶಾಲೆಯ 21ಮಕ್ಕಳು (ನರ್ಸರಿ ) ಮತ್ತು ಸುಂಕದಗದ್ದೆ ಶಾಲೆಯ 21 ಮಕ್ಕಳು ಪಡೆದಿದ್ದಾರೆ ಎಂದು ಶಿಕ್ಷಕರಾದ ಚೌಡ್ಲಾಪುರ ಸೂರಿಯವರು ತಿಳಿಸಿದ್ದಾರೆ.
ಬಡ ಮಕ್ಕಳ ಅಪೌಷ್ಟಿಕತೆಯನ್ನು ನಿವಾರಿಸಲು ಶ್ರಮಿಸಿದ ನಗು ಫೌಂಡೇಶನ್ ಪ್ರವರ್ತಕರಾದ ಶ್ರೀಮತಿ ದೀಪ್ತಿ ಮೇಡಂರವರಿಗೆ ಹಾಗೂ ಡಚ್ ವಿವ್ಯೂ ಕಂಪನಿಗೆ ಎಲ್ಲಾ ಶಾಲೆಗಳ ಪರವಾಗಿ ಮುಖ್ಯಗುರುಗಳು ಅಭಿನಂದನೆಗಳನ್ನು ಸಲ್ಲಿಸಿದರು. ತಲಮಕ್ಕಿ ಶಾಲೆಯ ಶಿಕ್ಷಕರಾದ ರಂಗನಾಥ್ ರವರು ಮಾತನಾಡಿ ಫೌಂಡೇಶನ್ ಕಾರ್ಯ ನಿಜಕ್ಕೂ ಮೆಚ್ಚುವಂತಹದ್ದು ಬಡ ಮಕ್ಕಳ ಅವರ ಕಾಳಜಿಗೆ ನಾವು ಎಷ್ಟೇ ಧನ್ಯವಾದಗಳನ್ನು ಹೇಳಿದರು ಸಾಲದು, ಮತ್ತಷ್ಟು ಸಮಾಜಮುಖಿ ಕಾರ್ಯ ಅವರಿಂದ ಸಾಗಲಿ ಎಂದು ಶುಭಹಾರೈಸುತ್ತೇವೆ ಎಂದು ಹೇಳಿದರು.ಈ ಸಂದರ್ಭದಲ್ಲಿ ವಿವಿಧ ಶಾಲೆಗಳ ಮುಖ್ಯಗುರುಗಳಾದ ಸುರೇಂದ್ರ, ನವೀನ್, ಅಶ್ವಿನಿ, ರಾಜೇಶ್ ಮತ್ತು ಮಮತರವರು ಫೌಂಡೇಶನ್ ಗೆ ಅಭಿನಂದನೆಗಳನ್ನು ಕೋರಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ