ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ವ್ಯವಸ್ಥೆ ಬದಲಾವಣೆಯ ಸಂಕಲ್ಪ ನನ್ನದು,ಸಹಕಾರ ನಿಮ್ಮೆಲ್ಲರದ್ದು:ಮಾನೆ ಶ್ರೀನಿವಾಸ

ಹಾವೇರಿ:ವ್ಯವಸ್ಥೆಯಲ್ಲಿ ಬದಲಾವಣೆ ತರುವ ಸಂಕಲ್ಪ ಮಾಡಿದ್ದೇನೆ.ಇದಕ್ಕೆ ನನಗೆ ಕೆಳಹಂತದಿಂದ ಸಹಕಾರ ಬೇಕಿದೆ,ಆಡಳಿತದಲ್ಲಿ ಹಸ್ತಕ್ಷೇಪ ಮಾಡದೇ ಪರಿಸ್ಥಿತಿ ಅರಿತು,ಜವಾಬ್ದಾರಿಯಿಂದ ನಡೆದುಕೊಂಡರೆ ಸಮಸ್ಯೆಗಳಿಗೆ ಪರಿಹಾರವೂ ಸುಲಭ ಸಾಧ್ಯ ಎಂದು ಶಾಸಕರಾದ ಮಾನೆ ಶ್ರೀನಿವಾಸ ಹೇಳಿದರು.
ಹಾನಗಲ್ ನಗರದ ರೋಶನಿ ಸಂಸ್ಥೆಯಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಆಯೋಜಿಸಿದ್ದ ಮಾನವ ಹಕ್ಕುಗಳ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು. ಶಾಸಕನಾಗಿ‌ ಜನರ ಭಾವನೆ ಅರಿತು ಸಮಸ್ಯೆ, ಸವಾಲುಗಳ ವಿರುದ್ಧ ಗಟ್ಟಿಯಾಗಿ ನಿಲ್ಲುವೆ. ನನ್ನೊಂದಿಗೆ ನೀವೆಲ್ಲ ಕೈ ಜೋಡಿಸಿ,ಸಮಯ ನೀಡಿ,ಸಹಕರಿಸಿದರೆ ಬದಲಾವಣೆ ಸಾಧ್ಯವಿದೆ.ಸುಳ್ಳು ಹೇಳುವುದು,ಸಮಯ ಹರಣ ಮಾಡುವುದು ನನ್ನ ಜಾಯಮಾನವಲ್ಲ ಜನ ಕೊಟ್ಟ ಅಧಿಕಾರವನ್ನು ಜವಾಬ್ದಾರಿಯಿಂದ ಚಲಾಯಿಸಿದಾಗ ಮಾತ್ರ ನನಗೂ ಸಮಾಧಾನ ಆಗುವುದು ಎಂದು ನುಡಿದರು.
ವರದಿ-ರವಿ ಓಲೆಕಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ