
ತಾಲೂಕು ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭ
ಯಾದಗಿರಿ ಜಿಲ್ಲೆ:ಇಂದು ಶಹಾಪುರ ನಗರದಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಲೋಕೇಶ್ ತಾಳಿಕಟ್ಟೆ ಬೆಂಗಳೂರು ರಾಜ್ಯ ಅಧ್ಯಕ್ಷರು ರೂಪ್ಸಾ ಸಂಘಟನೆಯ ಕರ್ನಾಟಕ ಹಾಗೂ ತಾಲ್ಲೂಕಿನ ಖಾಸಗಿ ಶಿಕ್ಷಣ ಸಂಸ್ಥೆಯ ಹಾಗೂ ಶಾಲಾ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಯಾದಗಿರಿ ಜಿಲ್ಲೆ:ಇಂದು ಶಹಾಪುರ ನಗರದಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಲೋಕೇಶ್ ತಾಳಿಕಟ್ಟೆ ಬೆಂಗಳೂರು ರಾಜ್ಯ ಅಧ್ಯಕ್ಷರು ರೂಪ್ಸಾ ಸಂಘಟನೆಯ ಕರ್ನಾಟಕ ಹಾಗೂ ತಾಲ್ಲೂಕಿನ ಖಾಸಗಿ ಶಿಕ್ಷಣ ಸಂಸ್ಥೆಯ ಹಾಗೂ ಶಾಲಾ

ಹುಮನಾಬಾದ್:ಜನಪ್ರಿಯ ನಾಯಕರೆಂದೇ ಪ್ರಸಿದ್ಧ ಪಡೆದ ಬಡವರ ಬಂಧು, ಹಿಂದುಳಿದವರ ನಾಯಕ, ಯುವಕರ ಕಣ್ಮಣಿ,ಸದಾ ಕ್ರಿಯಾಶೀಲ ಚಟುವಟಿಕೆಗಳ ಉತ್ಸಾಹಿ ನೇತಾ,ಸಾಮಾಜಿಕ ಸೇವಕರು, ಕಷ್ಟದಲ್ಲಿ ಇದ್ದವರನ್ನು ಕಂಡರೆ ಸಾಕು ಅವರ ಸಹಾಯಕ್ಕೆ ಧಾವಿಸುವ ಸರದಾರ ಎಂದೇ ಖ್ಯಾತರಾದ

ಚಾಮರಾಜನಗರ:ಜಿಲ್ಲೆಯ ಭಾರತೀಯ ಜನತಾ ಪಕ್ಷ ಓಬಿಸಿ ಮೋರ್ಚಾ ಹಾಗೂ ಶಂಕರ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಋಣ ಸಂದಾಯ ಕಣ್ಣು ಶಸ್ತ್ರ ಚಿಕಿತ್ಸೆ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ.ದಿನಾಂಕ : 6-11-2022 ನೆ ಭಾನುವಾರಸಮಯ:9.00am – 1.00pmಸ್ಥಳ:ಪ್ರಾಥಮಿಕ ಆರೋಗ್ಯ

ಚಾಮರಾಜನಗರ:ಗೇರಟ್ಟಿ ಗ್ರಾಮದ ಸದಾಶಿವಪ್ಪ ಎಂಬುವವರ ಹಸುವಿನ ಕಾಲು ಊದಿಕೊಂಡು ಚರ್ಮ ಗಂಟು ಬಂದಿರುವುದು ಗ್ರಾಮಸ್ಥರಿಗೆ ಆತಂಕ ಉಂಟು ಮಾಡಿದೆ ಮೊದಲು ಪಕ್ಕದ ಗ್ರಾಮ ಕಕ್ಕೇಹೊಲದ ತಂಗವೇಲು ಎಂಬವವರ ಹಸುಗಳಿಗೆ ಬಂದ ಈ ರೋಗ ಒಂದು

ಹನೂರು : ಹನೂರು ಪಟ್ಟಣದ ಮೈರಾಡ ಕಚೇರಿಯಲ್ಲಿ ಶನಿವಾರದಂದು ಸಮಾನ ಮನಸ್ಕ ಪತ್ರಕರ್ತರು ಸಭೆ ಸೇರಿದ್ದರು.ಆ ಸಭೆಯಲ್ಲಿ ಮೊದಲು ಕರ್ನಾಟಕ ಪತ್ರಕರ್ತರ ಸಂಘಕ್ಕೆ ಸದಸ್ಯತ್ವವನ್ನು ಪಡೆದು ನಂತರ ಸಂಘದ ದ್ಯೆಯೋದ್ದೇಶ ಹಾಗೂ ಸಂಘದ ಚಟುವಟಿಕೆಗಳ

ಯಾದಗಿರಿ:ಸುರಪುರ ತಾಲೂಕಿನ ಕೆಂಭಾವಿ ಪಟ್ಟಣ ಯಾಳಗಿ ಗ್ರಾಮದ ಸಿಸಿ ಲೈನ್ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ . ಸರ್ಕಾರದಿಂದ ಮಂಜೂರಾದ ಹಣ ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡದೇ ಗುತ್ತಿಗೆದಾರರ ಮತ್ತು ಅಧಿಕಾರಿಗಳು ಸಿಸಿ

ಬೆಳಗಾವಿ:Rcu University BELAGAVI ಅಧ್ಯಾಪಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿಯವರೆಗೆ ಮುಷ್ಕರ ಮುಂದುವರಿಯಲಿದೆ ಮೌಲ್ಯಮಾಪನ ಕಾರ್ಯ ವಿಳಂಬದಿಂದಾಗಿ ಅಂತಿಮ ವರ್ಷದ ಪದವಿ ವಿಧ್ಯರ್ಥಿಗಳ ಮುಂದಿನ ಶೈಕ್ಷಣಿಕ ವರ್ಷಕ್ಕೆ ಅಡಚಣೆ ಉಂಟಾಗುವ ಲಕ್ಷಣಗಳು ಕಂಡುಬರುತ್ತಿವೆ

ಹುಮನಾಬಾದ:ಸಮಾನತೆ ಸಾರಿದ ಭಾವೈಕ್ಯತೆಯ ಪವಿತ್ರ ಭೂಮಿ ಬಸವಕಲ್ಯಾಣದ ವಿಶ್ವ ಬಸವ ಧರ್ಮ ಟ್ರಸ್ಟ್ ಮತ್ತು ಅನುಭವ ಮಂಟಪದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ೪೩ ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ ಆಚರಣೆ ಸಮಾರಂಭದಲ್ಲಿ

ಕಾರಟಗಿ: ಎಫ್ಪಿಒಗಳ ಮೂಲಕ ರೈತರು ಆರ್ಥಿಕವಾಗಿ ಸದೃಢರಾಗಲು ಸಾಧ್ಯವಿದ್ದು, ರೈತ ಉತ್ಪಾದಕ ಕಂಪನಿಗಳು ಸರ್ಕಾರದ ನೆರವು ಪಡೆದುಕೊಂಡು ಆರ್ಥಿಕವಾಗಿ ಬಲಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಸಿಇಒ ಫೌಜಿಯಾ ತರುನಂ ಸಲಹೆ ನೀಡಿದರು. ಕಾರಟಗಿ ತಾಲೂಕು ಬೂದಗುಂಪ ಗ್ರಾಮದಲ್ಲಿನ ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘದ ಪದಾಧಿಕಾರಿಗಳ ನೇತೃತ್ವದ ರೈತ ಜೀವ ಫಾರ್ಮರ್ ಪ್ರೋಡ್ಯೂಸರ್ ಕಂಪನಿಯ ಕಚೇರಿಗೆ ಶುಕ್ರವಾರ ಭೇಟಿ ನೀಡಿ, ರೈತರೊಂದಿಗೆ ಸಂವಾದ ನಡೆಸಿದರು. ಈ ಭಾಗದ ರೈತರು ಕೇವಲ ಭತ್ತ ಬೆಳೆಯುವದನ್ನು ಬಿಟ್ಟು, ತೋಟಗಾರಿಗೆ ಬೆಳೆಗಳ ಕಡೆಯೂ ಹೆಚ್ಚು ಗಮನ ನೀಡಬೇಕಿದೆ. ಇತ್ತೀಚೆಗೆ ಭತ್ತ ಬೆಳೆಯಲು ಉತ್ಪಾದನಾ ವೆಚ್ಚ ಹೆಚ್ಚಾಗಿ, ಲಾಭದ ಪ್ರಮಾಣ ತೀರಾ ಕಡಿಮೆ ಆಗಿದೆ. ಈ ಕಾರಣಕ್ಕೆ ಭತ್ತ ಬೆಳೆಯುವ ಜೊತೆ ಜೊತೆಗೆ ಆರಂಭದಲ್ಲಿ ಅಲ್ಪ ಪ್ರಮಾಣದಲ್ಲಾದರೂ ತೋಟಗಾರಿಕೆ ಬೆಳೆ ಕಡೆಗೆ ಗಮನ ನೀಡಬೇಕು ಎಂದು ಸಲಹೆ ನೀಡಿದರು. ಈ ಬಗ್ಗೆ ರೈತರಿಗೆ ಸೂಕ್ತ ಸಲಹೆ ಮತ್ತು ತರಬೇತಿ ಕೊಡಿಸುವ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲಾಡಳಿತ ಸಿದ್ದವಿದೆ. ಕೊಪ್ಪಳ ಜಿಲ್ಲೆಯಲ್ಲಿನ ಎಲ್ಲ ಎಫ್ಪಿಒಗಳ ರೈತರು ಮತ್ತು ಇತರೇ ರೈತರನ್ನು ಒಳಗೊಂಡು ಪ್ರತಿ ತಿಂಗಳಿಗೆ ಕನಿಷ್ಠ ಒಂದು ತರಬೇತಿ ಕಾರ್ಯಾಗಾರ ಆಯೋಜನೆ ಮಾಡುವ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ತೋಟಗಾರಿಕೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಕೆಲಸ ಮಾಡಬೇಕಿದೆ. ಇನ್ನು ರೈತ ಜೀವ ಎಫ್ಪಿಒ ನಿರ್ದೇಶಕರು ಮತ್ತು ರೈತರ ವಿವಿಧ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗುವಂತೆ ಅಧಿಕಾರಿಗಳಿಗೆ ಸೂಚಿಸಿದರು. ರೈತ ಜೀವ ಎಫ್ಪಿಒ ನಿರ್ದೇಶಕ ಶರಣಗೌಡ ಕೇಸರಹಟ್ಟಿ ಮಾತನಾಡಿ, ನಮ್ಮ ಕಂಪನಿಯಲ್ಲಿ ಕೃಷಿ, ತೋಟಗಾರಿಕೆ ಬೆಳೆ ಬೆಳೆಯುವ ರೈತರ ಜೊತೆಗೆ ಮೀನುಗಾರಿಕೆ ಮಾಡುವ ಕಾರ್ಮಿಕರೂ ಇದ್ದು, ಕೆಲ ಕೆರೆಗಳನ್ನ ನಮಗೆ ಬಿಟ್ಟು ಕೊಡಬೇಕು. ಸುಮಾರು ೧೮ ಜಿಲ್ಲೆಯಲ್ಲಿ ನಮ್ಮ ರೈತ ಸಂಘಟನೆ ಇದ್ದು, ಸಂಘಟನೆ ಸದಸ್ಯರೆಲ್ಲರೂ ಸೇರಿ ಎಫ್ಪಿಒ ರಚಿಸಿಕೊಡು ಆರ್ಥಿಕವಾಗಿ ಸಬಗೊಳ್ಳುವಂತೆ ತರಬೇತಿ ನೀಡುತ್ತಿದ್ದೇವೆ. ಎಲ್ಲ ಕಡೆಯೂ ನಮ್ಮ ಎಫ್ಪಿಒಗಳಿಗೆ ಸರ್ಕಾರಿ ಅಧಿಕಾರಿಗಳ ಸಲಹೆ ಸಹಕಾರ ಅಗತ್ಯ ಎಂದು ಮನವಿ ಮಾಡಿದರು. ನಿರ್ದೇಶಕ ಶರಣಪ್ಪ ಕೆಂಡದ ಮಾತನಾಡಿ, ರೈತ ಜೀವ ಎಫ್ಪಿಒ ತನ್ನದೇ ಬ್ರಾö್ಯಂಡ್ ನಡಿ ಅಕ್ಕಿ ಮಾರಾಟಕ್ಕೆ ಯೋಜನೆ ರೂಪಿಸಿದ್ದು, ಕೊಪ್ಪಳ ಜಿಲ್ಲಾಡಳಿತದಿಂದ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಮೂಲಕ ರೈತರಿಗೆ ಅನುಕೂಲ ಮಾಡಬೇಕು ಎಂದು ಮನವಿ ಮಾಡಿದರು. ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕೃಷ್ಣ ಉಕ್ಕುಂದ, ಕೃಷಿ ಇಲಾಖೆ ಸಹಾಯ ನಿರ್ದೇಶಕ ಸಂತೋಷ ಬೆಟ್ಟದಕಲ್ಲು, ಕಾರಟಗಿ ತಾಪಂ ಎಡಿ ವನಜಾ, ತೋಟಗಾರಿಕೆ ಇಲಾಖೆ ಎಸ್ಎಡಿಎಚ್ ರತ್ನ ಪ್ರೀಯಾ, ಎಎಚ್ಒ ಜಗದ್ದೀಶ, ರೈತ ಜೀವ ಎಫ್ಪಿಒ ನಿರ್ದೇಶಕ ಯಂಕಣ್ಣ, ಸಿಫಿನ್ ಎಂಡಿ ಶಿವಕುಮಾರ ಎನ್. ಸೇರಿ ಇತರರು ಇದ್ದರು. ಕಂಪನಿ ಸಿಇಒ ಶರಣಬಸವ ಹುಲಿಹೈದರ ನಿರ್ವಹಿಸಿದರು.

ಆರೋಗ್ಯ ಕೇಂದ್ರದಲ್ಲಿ ಸ್ವಚ್ಛತೆ ಕಾಪಾಡಿ:ಗುರುಪ್ರಸಾದ್.ಎಸ್. ಕಾರಟಗಿ (ಕೊಪ್ಪಳ ಜಿಲ್ಲೆ) ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಸ್ವಚ್ಛತೆ ಕಾಪಾಡಿ ಎಂದು ತಾಲೂಕು ಪಂಚಾಯತಿ ಯೋಜನಾಧಿಕಾರಿ ಗುರು ಪ್ರಸಾದ್ ಎಸ್ ಅವರು ಹೇಳಿದರು. ತಾಲೂಕಿನ ಹೋಸಕೇರಾ ಡಗ್ಗಿಯಲ್ಲಿ
Website Design and Development By ❤ Serverhug Web Solutions