ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ನಮ್ ನಮ್ ನಡುವೆ ಗೆಳೆಯ- ವಿ.ಶ್ರೀನಿವಾಸ ಅವರ ಸ್ನೇಹದ ಕವಿತೆ

ನಮ್ಮ ನಮ್ಮ ನಡುವೆ ಇರಲಿ
ನಂಬಿಕೆಯ ಅಡಿಪಾಯ
ಕೇಳಬೇಡ ಇಲ್ಲಿ ಯಾರ ಅಭಿಪ್ರಾಯ
ಕಳೆದುಹೋದ ಮೇಲೆ ಮತ್ತೆ ಬಾರದು ಸಮಯ
ಎಲ್ಲರೊಳಗೆ ಒಬ್ಬನಾದರೆ ಬದುಕು ರಸಮಯ

ನಮ್ಮ ನಿಮ್ಮ ನಡುವೆ ಇರಲಿ ಪ್ರೀತಿ
ಯಾರಿಗೂ ಪಡಬೇಡ ಬದುಕಿನಲ್ಲಿ ಬೀತಿ
ಬೆಳೆಯುವರ ಕಂಡರೆ ಕಾಲೆಳೆಯುವುದು
ಅವರು ಕಲಿತಿರುವ ದೊಡ್ಡ ನೀತಿ
ಅವರು ತುಳಿದಷ್ಟು ನಾವು ಬೆಳೆಯಬೇಕು
ಅವರು ಉರಿದುಕೊಳ್ಳುವ ರೀತಿ

ನಮ್ಮ ನಮ್ಮ ನಡುವೆ ಇರಲಿ
ಪ್ರೀತಿಯ ಬಂಧನ
ಬದುಕಾಗಿರುತ್ತದೆ ನಂದನವನ
ಬೆಳೆಯುವಾಗ ಇದ್ದದ್ದೆ ಅನುಮಾನ
ಗೆಳಯ ಒಂದಲ್ಲ ಒಂದು ದಿನ ಅವರೆ
ಪ್ರೀತಿಯಿಂದ ಮಾಡಬೇಕು ನಮಗೆ ಸನ್ಮಾನ

ನಮ್ಮ ನಡುವೆ ಇರುತ್ತಾರೆ ಹಿತ ಶತ್ರುಗಳು
ನಮಗೆ ಅರಿವಿಲ್ಲದಂತೆ ಪ್ರಚಾರ ಮಾಡುತ್ತಾರೆ ನಮ್ಮೆಲ್ಲ ಗುಟ್ಟುಗಳು
ಇದು ಸ್ವಾರ್ಥಿಗಳ ಪ್ರಪಂಚ
ನಮ್ಮ ನಿಮ್ಮೊಳಗಿರುವ ನಾನು
ಎನ್ನುವುದೇ ಇಲ್ಲಿ ದೊಡ್ಡ ಶತ್ರು
ನಮ್ ನಮ್ ನಡುವೆ ಇರಲಿ ಪ್ರೀತಿ
ನಂಬಿಕೆಯೆ ಸ್ನೇಹಕ್ಕೆ ಸೇತುವೆ ಗೆಳೆಯ
-ವಿ.ಶ್ರೀನಿವಾಸ,ವಾಣಿಗರಹಳ್ಳಿ, ದೊಡ್ಡಬಳ್ಳಾಪುರ (ತಾ)

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ