ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಪುನೀತನಾದೆ

ಸಾವಿನ ನೆನಪು ಮರುಕಳಿಸುತಿದೆ
ವರುಷವೂ ಮಾಸಿ ಹೋಗುತಿದೆ
ಇಲ್ಲವೆನ್ನೋ ಹುಸಿ ಕಾಡುತಿದೆ
ಕನಸುಗಳೇ ಕಾಣದ ಕಂಗಲಾಗಿದೆ
ಪುಣ್ಯಕೋಟಿಯ ಒಲವು ಹಂಚಿದೆ
ಅಮೃತದ ಸವಿ ನೀಡಿದೆ
ಪುನೀತನಾಗಿ ರಾರಾಜಿಸಿದ ಕುವರ
ನೀಲಮೇಘ ಶ್ಯಾಮನಂತೆ ಅಮರ
ತಪಸ್ಸು ಮಾಡ್ಯಾರ ಹೆತ್ತವರು
ರಾಜಗಾಂಭೀರ್ಯತೆಯ ಗುಣ ಹೊಂದವರು
ಜಗದಕಣ್ಣಾಗಿ ಬೆಳೆದ ಅಪ್ಪು
ಕುಗ್ಗದ ಜಗ್ಗದ ಶಾರೀರ್ಯದ ಎಪ್ಪು / ಕಪ್ಪು
ಮಾಗದ ವಯಸ್ಸಲ್ಲೇ ಮರಣ
ರಭಸವೇ ಅನಾಹುತಕ್ಕೆ ಕಾರಣ
ವಾರ್ಷಿಕೋತ್ಸವದ ಸುದಿನ ಬಂದಿಹದು
ಲೋಕ ಬೆಳಗಲು ಸಾಗಿಹದು
ಕಂಬನಿ ಮಿಡಿಯದ ಹೃದಯವಿಲ್ಲ
ಕಂಗಳು ಒದ್ದೆಯಾಗದ ಮನುಜರಿಲ್ಲ
ಬದುಕು ಸಾಗಿಸಲು ಇವರೇ ಇಲ್ಲ
ಅವರ ನೆನಪು ಸದಾ ಕಾಡುತಿದೆಯಲ್ಲ
ಸರಳತೆಯ ಪ್ರತೀಕನಾಗಿ ಮಿನುಗಿದಾತ
ಭುವನಕ್ಕೆಲ್ಲಾ ನಟನೆಯ ಗಂಧವ ಪಸರಿಸಿದಾತ
ಮೆಲುಕು ಹಾಕಿದಷ್ಟು ಮರೆಯಾಗದಾತ
ಜಗಿದಷ್ಟು ರಸ ಉಣಬಡಿಸಿದಾತ.

💖 ಕಾವ್ಯನಾಮ : ಅರಸು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ