ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬೆಳಗುರ್ಕಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಯುವಕ ಸಂಘ ಉದ್ಘಾಟನೆ

ರಾಯಚೂರ:ಜ22.ಸಿಂಧನೂರು ತಾಲೂಕಿನ ಬೆಳಗುರ್ಕಿ ಗ್ರಾಮದಲ್ಲಿ ಇಂದು ವಾಲ್ಮೀಕಿ ಯುವಕ ಸಂಘ ಉದ್ಘಾಟನೆಯ ಮಾಡಲಾಯಿತು.ಈ ಸಂಘದಲ್ಲಿ ಗ್ರಾಮ ಘಟಕ ಅಧ್ಯಕ್ಷರನ್ನಾಗಿ ಬಸವರಾಜ ನಾಯಕ, ಗೌರವಾಧ್ಯಕ್ಷರಾಗಿ ಜಿ.ಹನುಮಂತಪ್ಪ ನಾಯಕ,ಉಪಾಧ್ಯಕ್ಷರಾಗಿ ಗಂಗಣ್ಣ ನಾಯಕ, ಕಾರ್ಯದರ್ಶಿಯಾಗಿ ರವಿನಾಯಕ, ಸಹಕಾರದರ್ಶಿಯಾಗಿ ಆದಪ್ಪ ನಾಯಕ ಮತ್ತು ಖಜಾಂಚಿಯಾಗಿ ಕೃಷ್ಣ ನಾಯಕ ಇವರನ್ನು ನೇಮಕ ಮಾಡಲಾಗಿದೆ ಹಾಗೂ ಸಂಘದ ವತಿಯಿಂದ ವಾಲ್ಮೀಕಿ ಸಮುದಾಯದ ಹಿರಿಯ ಮುಖಂಡರಿಗೆ ಸನ್ಮಾನ ಮಾಡಲಾಯಿತು ಈ ಸಂದರ್ಭದಲ್ಲಿ ಮಾತನಾಡಿದ ಅಭಿಷೇಕ್ ನಾಡಗೌಡ ಅವರು ಯಾವುದೇ ಸಂಘವು ಒಂದು ನಿರ್ದಿಷ್ಟ ಗುರಿ ಹೊಂದಿರಬೇಕು ಮತ್ತು ಸರ್ಕಾರದ ಸೌಲಭ್ಯಗಳನ್ನು ಪಡೆದು ಗ್ರಾಮವನ್ನು ಅಭಿವೃದ್ಧಿ ಪಡಿಸಬೇಕು ಮತ್ತು ಯುವಕರು ಶಿಕ್ಷಣದ ಆಸಕ್ತಿ ಕಳೆದುಕೊಳ್ಳಬಾರದು ಗ್ರಾಮದಲ್ಲಿ ಗ್ರಂಥಾಲಯವನ್ನು ತೆರೆದು ದಿನಪತ್ರಿಕೆಗಳು ಓದುವುದು ಮತ್ತು ಕ್ರೀಡಾಕೂಟಗಳನ್ನು ಏರ್ಪಡಿಸುವುದು ಸಾಧನೆ ಮಾಡಿದಂತಹ ಗ್ರಾಮ ಪ್ರತಿಭೆಗಳಿಗೆ ಸನ್ಮಾನ ಮಾಡುವುದು ಹೀಗೆ ಅನೇಕ ಕಾರ್ಯಕ್ರಮಗಳನ್ನು ಈ ಸಂಘಗಳು ನಡೆಸಿಕೊಂಡು ಹೋಗಬೇಕೆಂದು ಹೇಳಿದರು ಮತ್ತು ಶಿವನಗೌಡ ಗೊರೆಬಾಳ ಮಾಜಿ ಝೆಡ್ ಪಿ,ತಾಲೂಕಿನ ಅಧ್ಯಕ್ಷರು ವೆಂಕೋಬ ನಾಯಕ,ಹನುಮಂತಪ್ಪ ಪುಲ್ಲದಿನ್ನಿ, ಓಬಳೇಶ ನಾಯಕ ಗೊರೆಬಾಳ,ವೆಂಕಟೇಶ್ ನಾಯಕ ಪತ್ರಕರ್ತರು, ಡಿಜೆ ನಾಯಕ ಗೋನವಾರ ಗ್ರಾಮದ ಹಿರಿಯ ಮುಖಂಡರು ಮತ್ತು ಸಂಘದ ಯುವಕರು ಉಪಸ್ಥಿತಿಯಲ್ಲಿದ್ದರು.
ವರದಿ:ವೆಂಕಟೇಶ ನಾಯಕ ಬೂತಲದಿನ್ನಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ