ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಪಾವಂಜೆಯಲ್ಲಿ ವೈವಿಧ್ಯಮಯ ಕಾರ್ಯಕ್ರಮ


ಪಾವಂಜೆ,ಹಳೆಯಂಗಡಿ,ಮಂಗಳೂರು, ಜನವರಿ 24 : ಇಂದು ಬ್ರಹ್ಮಕಲಶದ ಪೂರ್ವ ನಿಗದಿತ ಕಾರ್ಯಕ್ರಮಗಳ ಆರನೆಯ ದಿನ ಪ್ರಾತಃ ಕಾಲ 7:30 ಗಂಟೆಯಿಂದ ಆದ್ಯ ಗಣಪತಿಯಾಗ,ಶಾಂತಿಯಾಗ, ಪ್ರಾಯಶ್ಚಿತ್ತ ಯಾಗ,ಪಂಚ ಬ್ರಹ್ಮ ಯಾಗ, ಮೂರ್ತಿಯಾಗ,ನವಕಪ್ರಧಾನ ಯಾಗ, ಕಲಶಾಭಿಷೇಕ, ಪ್ರಸನ್ನ ಪೂಜೆ, ಮಹಾಪೂಜೆ, ಧ್ವಜಪೂಜೆ, ಮಧ್ಯಾಹ್ನ ಬಲಿ,ಗೋ ಪೂಜೆ, ಸುವಾಸಿನಿ ಆರಾಧನೆ ಜರುಗಿತು ಮಧ್ಯಾಹ್ನ ಎರಡುವರೆಗಂಟೆಯಿಂದ ನಾಲ್ಕುವರೆ ಗಂಟೆವರೆಗೆ ರಾಷ್ಟ್ರಮಟ್ಟದಲ್ಲಿ ಪ್ರಖ್ಯಾತಿ ಪಡೆದ ರಿಧಂ ಸುರತ್ಕಲ್ ಬಳಗದವರಿಂದ ವೈವಿಧ್ಯಮಯ ನೃತ್ಯ ಕಾರ್ಯಕ್ರಮ ಜರುಗಿತು.ಶ್ರೀಮತಿ ಹೇಮಾ ರಂಗನಾಥನ್ ಮತ್ತು ಮಕ್ಕಳು ಮೈಸೂರು ಈ ಕಾರ್ಯಕ್ರಮವನ್ನು ಪ್ರಾಯೋಜಿಸಿದ್ದರು.4:3೦ ರ ನಂತರ ಸಹಸ್ರ ಸಂಖ್ಯೆ ಯಲ್ಲಿ ಸದ್ಯೋಜಾತಾದಿ ಪಂಚಬ್ರಹ್ಮ ಯಾಗ,ರಕ್ತೇಶ್ವರಿ ಸಾನಿಧ್ಯದಲ್ಲಿ ವಾಸ್ತುಪೂಜೆ ಪ್ರತಿಷ್ಠಾದಿ ಪ್ರಕ್ರಿಯೆಗಳು, ಬಯಗಿನ ಬಲಿ, ರಾತ್ರಿ ಪೂಜೆ, ಜರುಗಿತು. ಸಂಜೆ 6:೦೦ ರಿಂದ ಶ್ರೀ ರಾಮ ಭಜನಾ ಮಂಡಳಿ, ಮಿತ್ರಪಟ್ನ, ಮುಕ್ಕ ಬಳಗದವರಿಂದ ಭಜನಾ ಸಂಕೀರ್ತನೆ ಜರುಗಿತು. ರಾತ್ರಿ 9:೦೦ ಗಂಟೆಯಿಂದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿಯಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಜರುಗಿತು, ಈ ಯಕ್ಷಗಾನ ಬಯಲಾಟವನ್ನು ದಿ.ಸುಂದರ ಭಟ್,ಪಾವಂಜೆ ಇವರ ಸ್ಮರಣಾರ್ಥ ಸರಸ್ವತಿ ಅಮ್ಮ ಮತ್ತು ಮಕ್ಕಳು ಪ್ರಾಯೋಜಿಸಿದ್ದರು.
ವರದಿ:ಚಂದ್ರಶೇಖರ ಹೆಬ್ಬಾರ್ ಕೊಲ್ಯ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ