ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮಂಗಗಳ ಹಾವಳಿಯಿಂದ ರಕ್ಷಣೆ ಕೋರಿ ಸಾರ್ವಜನಿಕರಿಂದ ಮನವಿ

ಬೆಳಗಾವಿ/ರಾಮದುರ್ಗ: ಮಂಗಗಳ ಹಾವಳಿ ದಿನದಿಂದ ದಿನಕ್ಕೆ ತೀವ್ರ ಹೆಚ್ಚಾಗಿದ್ದು, ಮನೆಯ ಒಳಗೆ ನುಗ್ಗಿ, ಕೈಗೆ ಸಿಕ್ಕ ಸಾಮಾನುಗಳನ್ನು, ಅಡಿಗೆ ಪದಾರ್ಥಗಳನ್ನು ಹಾಳು ಮಾಡುತ್ತಿವೆ. ಚಿಕ್ಕ ಮಕ್ಕಳ ಮೇಲೆ ಹಾರಿ ಕೈಯಲ್ಲಿದ್ದ ತಿಂಡಿ ತಿನಿಸುಗಳನ್ನು ಕಸಿದುಕೊಂಡು ಹೋಗವದಲ್ಲದೇ ಗಾಯಗೋಳಿಸುತ್ತಲಿವೆ. ಅಲ್ಲದೇ ಸಾರ್ವಜನಿಕರು ದಿನಸಿ ಅಂಗಡಿಗಳಲ್ಲಿ ತಂದ ಪದಾರ್ಥಗಳನ್ನು ಕಸಿದುಕೊಂಡು ಹೋಗುತ್ತಲಿವೆ. ಮನೆಗಳಲ್ಲಿನ ಸಿಂಟೆಕ್ಸ ಪೈಪ್ಲೈನ್,ಗಿಡ – ಗಂಟೆಗಳು ಇತ್ಯಾದಿ ನಾಶಮಾಡುತ್ತಿವೆ. ಪ್ರಾಣ ರಕ್ಷಣೆ ಮಾಡಿಕೊಳ್ಳಲು ಹೋದ ಸಾರ್ವಜನಿಕರು ಗಂಭೀರ ಸ್ವರೂಪದ ಗಾಯಗಳಾಗಿವೆ ದವಾಖಾನೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಾರ್ವಜನಿಕರ ಆಸ್ತಿ ಹಾಳಾಗುವದಲ್ಲದೇ, ಜೀವಭಯದಿಂದ ಕಾಲ ಕಳೆಯುವಂತಾದ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ, ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳುವಂತೆ ರಾಮದುರ್ಗ ನೇಕಾರ ಸಮಾಜದ ಸಾರ್ವಜನಿಕರು, ಮಾನ್ಯ ತಹಶೀಲ್ದಾರ್ ರಾಮದುರ್ಗ ಮತ್ತು ವಲಯ ಅರಣ್ಯಾಧಿಕಾರಿಗಳು ರಾಮದುರ್ಗ ಇವರಿಗೆ ಮನವಿಯನ್ನು ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ರಾಜ್ಯ ದೇವಾಂಗ ಸಂಘದ ನಿರ್ದೇಶಕರಾದ ಶ್ರೀ ಶಿವಾನಂದ ಬಳ್ಳಾರಿ, ರಾಮದುರ್ಗ ತಾಲೂಕಾ ನೇಕಾರ ಸಮಾಜದ ಅಧ್ಯಕ್ಷರಾದ ಶ್ರೀ ಅಶೋಕ ಸುಳಿಭಾವಿ, ವಕೀಲರಾದ ಶ್ರೀ ಶ್ರೀನಿವಾಸ ಕುರುಡಗಿ, ಶ್ರೀ ನೀಲಕಂಠ ಘಂಟಿ, ಶ್ರೀ ನಾರಾಯಣ ಗಂಗೂರಿ, ಪುಂಡಲೀಕ ವಡಕನ್ನವರ, ವಿನೋದ ಕರದಿನ, ಪರಶುರಾಮ ಧಡಿ, ಕ್ರಷ್ಣ ಬಟಕುರ್ಕಿ, ಶಂಕರ ಮುರುಡಿ, ತುಕಾರಾಮ ಬಲಕುಂದಿ, ಮಹಾದೇವ ಬರಡೂರ, ಕ್ರಷ್ಣ ಬಲಕುಂದಿ ಮುಂತಾದವರು ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ