ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕಾರ್ಮಿಕರ ಇಲಾಖೆಯಲ್ಲಿ ಗೋಲ್ ಮಾಲ್


ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಕಟ್ಟಡ ಕಾರ್ಮಿಕ ಇಲಾಖೆಯ ಕಚೇರಿಯಲ್ಲಿ
ಕಾರ್ಮಿಕರಿಗೆ ಮತ್ತು ಕಾರ್ಮಿಕ ಮಕ್ಕಳಿಗೆ ಬಂದಂತ ಕಿಟ್ಟು ಗಳ ವಿತರಣೆಯಲ್ಲಿ ಭಾರಿ ಗೋಲ್ಮಾಲ್ ಅಧಿಕಾರಿಗಳು ಮಾಡಿದ್ದಾರೆ ಎಂದು ಕಟ್ಟಡ ಕಾರ್ಮಿಕರು ಇಂದು ರಸ್ತೆಗೆದು ಪ್ರತಿಭಟನೆ ಮಾಡಲು ಸಿದ್ದರಾಗಿದ್ದರು
ಈ ಸಮಯದಲ್ಲಿ ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕರಾದ ಶಾಂತನಗೌಡರು ಇವರಿಗೆ ಸಾತ್ ನೀಡಿದರು ಅಧಿಕಾರಿಗಳು ಸೋಮವಾರ ದಿನ ನಿಮಗೆ ಮತ್ತು ನಿಮ್ಮ ಮಕ್ಕಳಿಗೆ ಬಂದಂತ ಕಿಟ್ ಗಳನ್ನು ನೀಡುತ್ತೇವೆ ಎಂದು ನೀವು ಸೋಮವಾರ ದಿನ ಬರ್ರಿ ಎಂದು ಹೇಳಿದರು ಆದರೆ ಭಾನುವಾರ ದಿನವೇ ಕಿಟ್ಟುಗಳನ್ನು ವಿತರಣೆ ಮಾಡಿರುವುದು ಇವರ ಆಕ್ರೋಶಕ್ಕೆ ಗುರಿಯಾಗಿದೆ
ನಿಜವಾದ ಫಲಾನುಭವಿಗಳಿಗೆ ಬರಬೇಕಾಗಿದ್ದ ಉಚಿತ ಕಿಟ್ ಗಳು ಇವರು ಹಣವನ್ನು ತೆಗೆದುಕೊಂಡು ತಮಗೆ ಬೇಕಾದವರಿಗೆ ಕಿಟ್ ನೀಡಿದ್ದಾರೆ ಎಂದು ನಮ್ಮ ವಾಹಿನಿಯ ಜೊತೆ ಮಾತನಾಡಿದರು
ಈ ಕೆಲಸವನ್ನು ಮಾಡಿದಂತ ಅಧಿಕಾರಿಗಳನ್ನು
ಕೆಲಸದಿಂದ ವಜಾಗೊಳಿಸಬೇಕು ಮೇಲಾಧಿಕಾರಿಗಳು ಇವರಿಗೆ ಸರಿಯಾದ ಕಾನೂನು ಕ್ರಮ ಜರುಗಿಸಬೇಕೆಂದು ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ್ರು ಆಕ್ರೋಶ ವ್ಯಕ್ತಪಡಿಸಿದರು
ಈ ಸಮಯದಲ್ಲಿ ದಿಡೀರ್ ರಸ್ತೆ ತಡೆ ಚಳುವಳಿಯನ್ನು ಆರಂಭಿಸಿದ್ದರಿಂದ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮತ್ತು ರಕ್ಷಣಾ ಇಲಾಖೆಯ ವಾಗ್ವಾದ ನಡೆಯಿತು ತದನಂತರ ಶಾಂತನಗೌಡರು ಕಾರ್ಯಕರ್ತರ ಮನಗೊಳಿಸಿ ಪಾದಯಾತ್ರೆ ಮೂಲಕ ತಾಲೂಕ ಕಚೇರಿಗೆ ಆಗಮಿಸಿ ಕಾರ್ಮಿಕ ಇಲಾಖೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಬೇಕೆಂದು ಮಾನ್ಯ ತಾಸಿಲ್ದಾರ್ ತಿರುಪತಿ ಪಾಟೀಲ್ ಅವರಿಗೆ ಹೇಳಿದರು.
-ಪ್ರಭಾಕರ.ಡಿ.ಎಮ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ