ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಎಂ.ಆರ್.ಮಂಜುನಾಥ್ ಬೈಕ್ ಮೂಲಕ ಪ್ರಚಾರ

ಹನೂರು: ವಿಧಾನಸಭಾ ಚುನಾವಣೆ ನಿಗಧಿಯಾದ ಹಿನ್ನಲೆಯಲ್ಲಿ ಬಿರುಸಿನ ಮತ ಪ್ರಚಾರ ಕೈಗೊಂಡಿರುವ ಎಂ.ಆರ್.ಮಂಜುನಾಥ್ ಬೈಕ್ ಮೂಲಕ ಪ್ರಚಾರ ನಡೆಸಿ ಸಾರ್ವಜನಿಕರ ಗಮನ ಸೆಳೆದರು.

ಹನೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಪಾಳ್ಯ ಗ್ರಾಮದಲ್ಲಿ ಬಿರುಸಿನ ಮಾತಯಾಚಿಸಿದ ಮಂಜುನಾಥ್ ಕಿರಿದಾದ ಓಣಿಗಳಲ್ಲಿನ ಮನೆಗಳ ಮುಖಂಡರುಗಳ ಮನೆಗಳಿಗೂ ಕೂಡ ಹೋಗಿ ಪಕ್ಷವನ್ನು ಬೆಂಬಲಿಸಿ ಎಂದು ಮತಯಾಚಿಸಿದರು.

ಈ ವೇಳೆ ಮಾತನಾಡಿದ ಅವರು ಕಾರಲ್ಲಿ ಹೋಗಿ ಜನತೆಯನ್ನು ಒಂದಡೆ ಸೇರಿಸಿ ಮಾತನಾಡುವ ರಾಜಕಾರಣಿ ನಾನಲ್ಲ. ಕಳೆದ ಆರು ಏಳು ವರ್ಷಗಳಿಂದ ಗ್ರಾಮಗಳಲ್ಲಿನ ಜನತೆಯ ಊರು ಕೇರಿಗಳಲ್ಲಿ ಸುತ್ತಿ ಅವರ ಕಷ್ಟ ಸುಖಗಳನ್ನು ವಿಚಾರಿಸಿದ್ದೇನೆ. ನನಗೆ ಬೈಕು ಹಾಗೂ ಕಾಲ್ನಡಿಗೆಯಲ್ಲಿ ಹೋಗುವುದು ಹೊಸತೇನಲ್ಲ. ಜನತೆಯ ಮನೆ ಬಾಗಿಲಿಗೆ ಹೋದರೆ ನಿಜವಾದ ಕಷ್ಟ ಸುಖ ತಿಳಿಯಲಿದೆ. ಬಂಡವಾಳ ಶಾಹಿಗಳು, ಕುಟುಂಬ ರಾಜಕಾರಣಿಗಳಿಗೆ ನಾನೇ ಟಾರ್ಗೆಟ್ ಆಗಿದ್ದೇನೆ. ಶಾಸಕರು ಸೇರಿದಂತೆ 6 ಆರು ಮಂದಿ ನನ್ನ ಸೋಲಿಸಲು ಮುಂದಾಗಿದ್ದಾರೆ ಜನತೆ ನನ್ನನ್ನು ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಾಳ್ಯ ಗ್ರಾಮದ ವಿವಿಧ ಸಮುದಾಯದಗಳ ಜೆಡಿಎಸ್ ಮುಖಂಡರುಗಳು, ಕಾರ್ಯಕರ್ತರುಗಳು ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ