ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಪತ್ರಕರ್ತನ ಪುತ್ರನ ಸಾಧನೆ

ಬಾಗಲಕೋಟೆ/ಇಲಕಲ್ಲ:ಕಂದಗಲ್ಲ ಗ್ರಾಮದ ಪತ್ರಕರ್ತ ವೀರೇಶ ಶಿಂಪಿಯವರ ಪುತ್ರ ಬಸವರಾಜ್ ಶಿಂಪಿ ಪ್ರಸಕ್ತ ಸಾಲಿನಲ್ಲಿ ನೆಡೆದ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.90 ರಷ್ಟು ಅಂಕಗಳಿಸಿ ಸಾಧನೆಮಾಡಿದ್ದಾನೆ ತನ್ನನ್ನು ಈ ಸಾಧನೆಗೆ ಕಾರಣರಾದ ತನ್ನ ಪಾಲಕರಿಗೂ ಹಾಗೂ ತನ್ನ ಶಾಲೆಯ ಎಲ್ಲ ಶಿಕ್ಷಕರಿಗೂ ಅಭಿನಂದನೆ ಸಲ್ಲಿಸಿ ಮಾತನಾಡಿದ್ದು ಹೀಗೆ “ನಾನೊಬ್ಬ 16 ವಯಸ್ಸಿನ ಯುವಕನಾಗಿ ಹೇಳುವುದೇನೆಂದರೆ ಇನ್ನೊಂದಿಷ್ಟು ದಿನಗಳಲ್ಲಿ ಚುನಾವಣೆ ನಡೆದು ಹೊಸ ಸರಕಾರ ರಚನೆಯಾಗಲಿದೆ ಇಂತಹ ಚುನಾವಣೆಗಳಲ್ಲಿ ಒಂದು ಒಳ್ಳೆಯ ಸರಕಾರವನ್ನೋ ಅಥವಾ ಒಬ್ಬ ಒಳ್ಳೆಯ ನಾಯಕನನ್ನು ಆರಿಸುವಲ್ಲಿ ಯುವಕರ ಪಾತ್ರ ಪ್ರಮುಖವಾಗಿರುತ್ತದೆ ಎಂದು ಬಹಳಷ್ಟು ಜನ ಹೇಳುತ್ತಾರೆ. ಆದರೆ 18 ರಿಂದ 25 ವಯಸ್ಸಿನವರು ಮಾತ್ರ ಯುವಕರಲ್ಲ 16-17 ವಯಸ್ಸಿನವರು ಕೂಡ ಯುವಕರೇ, ಅವರಿಗೂ ಕೂಡ ವಿಚಾರ ಶಕ್ತಿಯಿದೆ, ಸಮಾಜದ ಜವಾಬ್ದಾರಿಯಿದೆ. ಇವರಿಗೂ ಕೂಡ ಮತದಾನಕ್ಕೆ ಅವಕಾಶ ನೀಡಿದರೆ ಚುನಾವಣೆಯಲ್ಲಿ ಯುವಕರ ಸಂಖ್ಯೆ ಹೆಚ್ಚಾಗುತ್ತದೆ,ಇದರಿಂದ ಒಂದು ಒಳ್ಳೆಯ ಜವಾಬ್ದಾರಿಯುತ ಹಾಗೂ ಪ್ರಜಾಪ್ರಭುತ್ವ ಸರಕಾರ ರಚನೆಯಾಗಲಿದೆ. ಆದ್ದರಿಂದ ಮುಂದಿನ ಸರಕಾರ ಹಾಗೂ ಚುನಾವಣಾ ಅಧಿಕಾರಿಗಳು 16-17 ವಯಸ್ಸಿನವರಿಗೂ ಮತದಾನಕ್ಕೆ ಅವಕಾಶ ನೀಡುವ ದಿಸೆಯಲ್ಲಿ ಆಲೋಚನೆ ನೆಡೆಸಬೇಕು”ಎಂದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ