ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶ್ರೀಸೂಗೂರೇಶ್ವರ ಸ್ವಾಮಿಯ ಸನ್ನಿಧಾನದಲ್ಲಿ ಮೊಸರುಬಾನ ಬುತ್ತಿಯ ನೈವೇದ್ಯ ಸಮರ್ಪಣೆ. ಪ್ರಸಾದ ವಿತರಣೆ.

ಸರಸ ಕಾಶ್ಮೀರ ದೇಶದರಸ | ಆರುಸಾವಿರ ಜಂಗಮರನು | ಪೂಜಿಸುತ್ತ- ಲಿರಲವರೊಳು | ಈಶ್ವರತನ ಪಡೆದಿಹ ಶರಭ॥

ಬಸವ ಬಂಧುರ |
ಕಲ್ಯಾಣದೊಳೆಸೆವ |
ಅಸಮ ಗಣಂಗಳ |
ವರಿಸಲು ಬಂದಿಹ ಬಸವ ॥

ಮೊಸರುಬಾನ ಪರುಷ ಪ್ರಭಾವದಿ| ಪ್ರಸಾದ ಕಾಯ ಲಿಂಗ ರೂಪಾಗಿ ಪರಿವರ್ತಿಸಿ| ಹಸುಬೆಯೊಳು ಮರೆಮಾಡಿ| ಕಳುಹಿದ ಶರಭ ॥

ರುದ್ರ ವೀರಭದ್ರಾವತಾರ ಕಾಶ್ಮೀರ | ರಾಜನ ಮುದ್ರೆಯು ಮನೆಯೊಳಗಿರುವ ಪ್ರಮಥಗಣ ಆರುಸಾವಿರ | ಕದ್ದವನಾದತಿ ಶುದ್ಧ ಮೂರ್ತಿ ಚನ್ನವೀರ | ಬಸವನು ಕದ್ದು ತರಲು ಬಂದಾಧ್ಯರು
ಕೂಡಿದ ಧೀರ ॥
ಮುದ್ದು ಬಾಚಯ್ಯನು ಉದ್ಧರಿಸುತಲಿ| ವಿರುದ್ಧ ವಾದಿಗಳ ಸಾಧ್ಯದಿ ಜೈಸಿದ| ಬುದ್ಧಿವಂತರಿಗೆ ಸಾಧ್ಯನಾದ |
ಕನಕಾದ್ರಿ ಛಾಪ ಸಚ್ಛಿದ್ರ ಸಂಹರ॥

ಮೇಲಿನ ಜಾನಪದ ಮತ್ತು ಆಶುಕವಿಗಳ ಅನುಭವದ
ನುಡಿಯ ಹಿನ್ನೆಲೆಯಾಗಿ,

ಶ್ರೀ ಚನ್ನವೀರ ಶಿವಾಚಾರ್ಯ ಗುರುವರರು, ಕಾಶ್ಮೀರ ದೇಶದ ಮಹದೇವ ಭೂಪಾಲ ಅರಸರ ಗುರುವರರಾಗಿದ್ದು,ಆಸ್ಥಾನದಲ್ಲಿರುವ 6000 ಜಂಗಮರಿಗೆ ಕ್ರಿಯಾ ಮೂರ್ತಿಯಾಗಿದ್ದರು.

ಕಲ್ಯಾಣದಣ್ಣ ಭಕ್ತಿ ಭಂಡಾರಿ ಬಸವಣ್ಣರವರ ಬಿನ್ನಹದ ಮೇರೆಗೆ,ಅವರು ತಂದ ಮೊಸರುಬಾನ ಬುತ್ತಿಯನ್ನ 6000 ಜಂಗಮರಿಗೆ ಪ್ರಸಾದೀಕರಿಸಿ, ಪ್ರಸಾದಕಾಯ ಲಿಂಗ ರೂಪಾಗಿ ಪರಿವರ್ತಿಸಿ,ಹಸುಬೆಯೊಳು ಮರೆಮಾಡಿ ಕಲ್ಯಾಣಕ್ಕೆ ಕಳುಹಿಸಿ,

ಅವರಿಗೆ ಸಿದ್ಧವಾದ ಮಹಾ ಪ್ರಸಾದವನ್ನ ಶ್ರೀ ಗುರುವರರೊಬ್ಬರೇ ಸ್ವೀಕರಿಸಿ,ಅರಸು ದಂಪತಿಗಳ ಮನ ಪರಿವರ್ತಿಸಿ, ಕಲ್ಯಾಣಕ್ಕೆ ಕರೆತಂದ ಅರುಹಿನ ಕುರುಹಾಗಿ,

ಪರಮ ಪೂಜ್ಯರಾದ
ಶ್ರೀಶ್ರೀಶ್ರೀ ಆನಂದ ರಾಚಯ್ಯ ಮತ್ತು ಕೆಂಚ ವೀರಯ್ಯ ಜಂಗಮ ಸಹೋದರರ ಮಾರ್ಗದರ್ಶನದಂತೆ ಸಾಂಪ್ರದಾಯಕವಾಗಿ
ಪ್ರತಿ ವರುಷದ ಪದ್ಧತಿಯಂತೆ,

ಶ್ರೀ ಸೂಗೂರೇಶ್ವರ ಸ್ವಾಮಿಗೆ ಸಮರ್ಪಿಸುವ ಮೊಸರನ್ನ ಬಾನ ಬುತ್ತಿ ನೈವೇದ್ಯ ಪ್ರಸಾದವು ಧಾರ್ಮಿಕ, ಆಧ್ಯಾತ್ಮಿಕ, ವೈಜ್ಞಾನಿಕ, ನೈಸರ್ಗಿಕ, ಆರೋಗ್ಯದಾಯಕ ಅನುಭವದ ಪ್ರತೀಕವಾಗಿದ್ದು,

ಗ್ರಾಮದ ಹಾಗು ಸುತ್ತಮುತ್ತಲಿನ ಸದ್ಭಕ್ತರ ಸಾಮೂಹಿಕ ಭಕ್ತಿ-ಭಾವದ ಸೇವೆಯೊಂದಿಗೆ ಹಾಗೂ ದೇವಸ್ಥಾನದ ಆಡಳಿತಾಧಿಕಾರಿಗಳ ವತಿಯಿಂದ ಹಮ್ಮಿಕೊಳ್ಳಲಾಗಿದೆ.

ಭಕ್ತ-ಮಹೇಶ್ವರ ರೆಲ್ಲರೂ ಆಗಮಿಸಿ,ತನು-ಮನ-ಧನ-ಧಾನ್ಯ ಸಮರ್ಪಿಸಿ,ಸಹಾಯ ಸಹಕಾರ ದೊಂದಿಗೆ ಪ್ರಸಾದ ಸ್ವೀಕರಿಸಿ,ಸ್ವಾಮಿಯ ಕೃಪೆಗೆ ಪಾತ್ರರಾಗಲು, ಕೋರಲಾಗಿದೆ.

-ಮರಿಕಾಂತಪ್ಪ ಸಜ್ಜನ್
9916467011

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ