ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮಳೆ ಹನಿಯಾಗಿ ಭೂಮಿಗೆ ಬಂದ ಭಗವಂತ

ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಚಿಕ್ಕಹೇಸರೂರು ಗ್ರಾಮದಲ್ಲಿ ಸಾಯಂಕಾಲ ಮೊದಲು ಮುಂಗಾರು ಮಳೆ ಭರ್ಜರಿಯಾಗಿ ಸುರಿಯಿತು.
ವರ್ಷದ ಪ್ರಥಮ ವರ್ಷಧಾರೆ ತರುವ ಖುಷಿನೇ ಬೇರೆ. ಸಕಲ ಜೀವರಾಶಿಗಳಿಗೂ ಮೊದಲ ಮಳೆ ಇನ್ನಿಲ್ಲದ ಪುಳಕ,ಮೊದಲ ಮಳೆಗಾಗಿ ಅದೆಷ್ಟೋ ಜೀವ ಕಾಯ್ತಿದವೋ ಭಗವಂತನೇ ಬಲ್ಲ.ಆಕಾಶದ ಕಡೆ ನೋಡುತ್ತ ನಿಂತಿರುವ ಮರಗಿಡಗಳು,ಬಾಯಿ ತೆರೆದ ಭೂಮಿ,ಹನಿ ನೀರಿಗಾಗಿ ಎದರು ನೋಡ್ತಾ ಇರುವ ಒಣಗಿದ ಹುಲ್ಲು ಕಡ್ಡಿ,ನೆಲ್ಲಿಯ ಹನಿ ನೀರು ಕೂಡ ಬಿಸಿಯಿಂದ ಅಳುತ್ತಾ ಇದ್ದಂತೆ ಕಾಣುತಿತ್ತು.ಆದರೆ ರೈತರು ಮುಗಿಲ ಕಡೆನೇ ನೋಡುತ್ತಾ ದಿನವಿಡೀ ಸಮಯ ಕಳಿಯುತ್ತಿದ್ದರು. ರೈತರು ತಮ್ಮೆಲ್ಲ ಜಮೀನುಗಳನ್ನು ಸ್ವಚ್ಛ ಮಾಡಿ ಮುಂಗಾರು ಬಿತ್ತನೆಗೆ ತೊಗರಿ ಸಜ್ಜಿ,ಸೂರ್ಯಪಾನ ಬೀಜಗಳು,ಗೊಬ್ಬರ ತಯಾರು ಮಾಡಿ ಮಳೆರಾಯನ ಆಗಮನಕ್ಕೆ ಕಾಯುತ್ತ ಇದ್ದರು ಚಿಕ್ಕಹೇಸರೂರು ಗ್ರಾಮ ದೇವತೆ ದುರ್ಗಾದೇವಿಗೆ ಉಡಿ ತುಂಬಿ ಮಳೆರಾಯನ ಆಗಮನದಲ್ಲಿದ್ದರು.
ದೇವರು ಕೊನೆಗೂ ಕಣ್ಣು ತೆಗೆದೇ ಬಿಟ್ಟ ಅಂತ ಕಾಣುತ್ತೆ ಇವತ್ತು ಸಾಯಂಕಾಲ ಸುರಿದ ಮಳೆಗೆ ರೈತರು ತುಂಬ ಖುಷಿಯಾಗಿದ್ದಾರೆ ರೈತರು ಇನ್ನೇನು ಬಿತ್ತುವ ಕಾರ್ಯದಲ್ಲಿ ತೊಡಗುತ್ತಾರೆ,ಕರುನಾಡ ಕಂದ ಪತ್ರಿಕೆ ಜೊತೆ ಮಾತನಾಡಿದ ರೈತರಾದ ಅಮರೇಗೌಡ ಮಾಲಿಪಾಟೀಲ ಹಾಗೂ ವಸಂತಕುಮಾರ ನಾಯಕ ಮಳೆಯಿಂದ ತುಂಬಾ ಸಂತಸ ತಂದಿದೆ ಒಂದು ಒಂದು ಹನಿ ಕೂಡ ‘ದೇವರು ಭೂಮಿಗೆ ಬಂದ ‘ಹಾಗೆ ಕಾಣುತ್ತೆ ಅಂತ ಸಂತಸ ವ್ಯಕ್ತಪಡಿಸಿ, ಮಳೆ ಬಂದು ನಿಂತ ಮೇಲೆ ಮಣ್ಣಿನಿಂದ ಬರುವ ಪರಿಮಳ ಯಾವ ಸುಗಂಧಕ್ಕೂ ಕಡಿಮೆ ಇಲ್ಲಾ ಅಂತ ಹೇಳಿದರು
ವರದಿ:ಪುನೀತ್ ಜೀ ಸಾಗರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ