ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕಲಬುರಗಿಯಲ್ಲಿ ಅಕ್ರಮ ಗ್ಯಾಸ್ ರಿಫಿಲ್ಲಿಂಗ್ ದಂಧೆ:ಜಾಣ ಮೌನ ತಾಳಿದ ಪೊಲೀಸರು, ಅಧಿಕಾರಿಗಳು

ಕಲಬುರಗಿ: ನಗರದಲ್ಲಿ ಆಟೋ ಸೇರಿದಂತೆ ಇನ್ನಿತರ ವಾಹನಗಳಿಗೆ ಅಡುಗೆ ಸಿಲಿಂಡರ್​ಗಳನ್ನು ರಿಫಿಲ್ಲಿಂಗ್ ಮಾಡುವ ದೊಡ್ಡ ದಂಧೆ ನಡೆಯುತ್ತಿದೆ.ಸರ್ಕಾರ ಗೃಹ ಬಳಕೆಯ ಸಿಲಿಂಡರ್​ಗಳನ್ನು ವಾಣಿಜ್ಯ ಬಳಕೆಗೆ ಬಳಸುವುದಕ್ಕೆ ಅವಕಾಶ ನೀಡಿಲ್ಲ.ಆದರೂ ಜಿಲ್ಲೆಯಲ್ಲಿ ಕಾನೂನು ಬಾಹಿರವಾಗಿ ಬಳಸಲಾಗುತ್ತಿದೆ.ಆಟೋ ಮತ್ತು ಇನ್ನಿತರ ವಾಹನಗಳಿಗೆ ಬಳಸುವ ಗ್ಯಾಸ್​ ಗೆ ​ಕಡಿಮೆ ದಹನ ಶಕ್ತಿ ಇರುತ್ತದೆ ಆದರೆ ಅಡುಗೆ ಸಿಲಿಂಡರ್​ ಹೆಚ್ಚಿನ ದಹನಶಕ್ತಿಯನ್ನು ಹೊಂದಿದ್ದು,ಸ್ವಲ್ಪ ಹೆಚ್ಚು ಕಡಿಮೆಯಾದರು ವಾಹನಗಳು ಸ್ಪೋಟಗೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ.ಅನೇಕ ಬಾರಿ ಅಡುಗೆ ಸಿಲಿಂಡರ್​ಗಳನ್ನು ವಾಹನಗಳಿಗೆ ರಿಫಿಲ್ಲಿಂಗ್ ಮಾಡುವಾಗ ಸ್ಟೋಟಗೊಂಡು ಸಾವನ್ನಪ್ಪಿರುವ ಉದಾಹರಣೆಗಳಿವೆ.
ಈಗಾಗಲೇ ನಗರದಲ್ಲಿ ಐವತ್ತಕ್ಕೂ ಹೆಚ್ಚು ಕಡೆ ಅಕ್ರಮವಾಗಿ ಇಂತಹದೊಂದು ದಂಧೆಯನ್ನು ಮಾಡಲಾಗುತ್ತಿದೆಯಂತೆ ಕಲಬುರಗಿಯಲ್ಲಿ ಹತ್ತು ಸಾವಿರಕ್ಕೂ ಅಧಿಕ ಆಟೋಗಳು ಪ್ರತಿನಿತ್ಯ ರಸ್ತೆಯಲ್ಲಿ ಓಡಾಡುತ್ತವೆ. ಇವುಗಳಲ್ಲಿ ಹೆಚ್ಚಿನ ಆಟೋಗಳು ಗ್ಯಾಸ್​ನ್ನು ಬಳಕೆ ಮಾಡುತ್ತದೆ ಬಹುತೇಕ ಆಟೋ ಚಾಲಕರು,ಗ್ಯಾಸ್ ಸ್ಟೇಷನ್​ಗೆ ಹೋಗಿ ಗ್ಯಾಸ್​ನ್ನು ಭರ್ತಿ ಮಾಡುತ್ತಿಲ್ಲ ಬದಲಾಗಿ ಅಡುಗೆ ಸಿಲಿಂಡರ್​ಗಳನ್ನು ಆಟೋಗಳಿಗೆ ಭರ್ತಿ ಮಾಡುತ್ತಿದ್ದಾರೆ.ಇದರಿಂದ ಆಟೋ ಚಾಲಕರಿಗೆ ಸ್ವಲ್ಪ ಹಣ ಉಳಿತಾಯವಾಗುತ್ತದೆಯಂತೆ ಸದ್ಯ ಎಲ್.ಪಿ.ಜಿ ಸ್ಟೇಷನ್​ಗಳಲ್ಲಿ ಪ್ರತಿ ಲೀಟರ್ ಗ್ಯಾಸ್​ನ ಬೆಲೆ 58 ರೂಪಾಯಿ ಇದೆಯಂತೆ.
ಇನ್ನು ಪ್ರತಿ ಕಿಲೋ ಗ್ಯಾಸ್​ನ್ನು ನೂರರಿಂದ ನೂರಾ ಐದು ರೂಪಾಯಿ ಕೊಟ್ಟು ಆಟೋ ಚಾಲಕರು ಅಕ್ರಮವಾಗಿ ರಿಫಿಲ್ಲಿಂಗ್ ಮಾಡಿಸಿಕೊಳ್ಳುತ್ತಿದ್ದಾರಂತೆ ಇನ್ನು ಒಂದು ಕಿಲೋ ಸಿಲಿಂಡರ್, 1.79 ಲಿಟರ್ ಗ್ಯಾಸ್​ಗೆ ಸಮವಾಗಿರುತ್ತದೆ ಅಂದರೆ ಆಟೋ ಚಾಲಕರಿಗೆ ಗ್ಯಾಸ್ ಸ್ಟೇಷಸ್​ನಲ್ಲಿ ಗ್ಯಾಸ್ ಭರ್ತಿ ಮಾಡಿಸಿಕೊಳ್ಳುವುದಕ್ಕಿಂತ ತುಸು ಕಡಿಮೆ ದರದಲ್ಲಿ ಅಡುಗೆ ಸಿಲಿಂಡರ್ ಗ್ಯಾಸ್ ಸಿಗುತ್ತದೆಯಂತೆ ಹೀಗಾಗಿ ಹೆಚ್ಚಿನ ಆಟೋ ಚಾಲಕರು ಅಡುಗೆ ಸಿಲಿಂಡರ್ ಗ್ಯಾಸ್ ಭರ್ತಿ ಮಾಡಿಸಿಕೊಳ್ಳುತ್ತಿದ್ದಾರೆ.ಅನೇಕ ಅಕ್ರಮ ದಂಧೆಕೋರರು,ಗ್ಯಾಸ್ ಪೂರೈಕೆದಾರರ ಜೊತೆ ಸಂಬಂಧ ಹೊಂದಿದ್ದು,ಜನರಿಗೆ ಪೂರೈಕೆ ಮಾಡುವ ಸಿಲಿಂಡರ್​ಗಳನ್ನು ಅಕ್ರಮವಾಗಿ ಸಂಗ್ರಹಿಸಿ,ಆಟೋ ಚಾಲಕರಿಗೆ ನೀಡುತ್ತಿದ್ದಾರೆ.ಇನ್ನು ಇಂತಹದೊಂದು ದಂಧೆಯ ಬಗ್ಗೆ ಕಲಬುರಗಿ ಪೊಲೀಸರಿಗೆ, ಆಹಾರ ಇಲಾಖೆಯವರಿಗೆ ಮಾಹಿತಿ ಇದೆಯಂತೆ.ಆದರೆ ಪೊಲೀಸರು ಮತ್ತು ಆಹಾರ ಇಲಾಖೆಯವರು ಯಾವುದೇ ಕ್ರಮಗಳನ್ನು ಕೈಗೊಳ್ಳದೇ ಇರುವುದರಿಂದ ಅಕ್ರಮ ದಂಧೆ ನಿರಂತರವಾಗಿ ನಡೆಯುತ್ತಿದೆ.
ಒಟ್ಟಿನಲ್ಲಿ ಪ್ರಯಾಣಿಕರ ಜೊತೆ ಚೆಲ್ಲಾಟವಾಡುತ್ತಿರುವ ಆಟೋ ಚಾಲಕರು ಮತ್ತು ಅಕ್ರಮವಾಗಿ ಗ್ಯಾಸ್ ರಿಫಿಲ್ಲಿಂಗ್ ಮಾಡುತ್ತಿರುವ ದಂಧೆಕೋರರ ವಿರುದ್ದ ಪೊಲೀಸರು ಮತ್ತು ಆಹಾರ ಇಲಾಖೆಯವರು ಕಠಿಣ ಕ್ರಮ ಕೈಗೊಳ್ಳುವ ಮೂಲಕ ಅಕ್ರಮ ದಂಧೆಗೆ ಕಡಿವಾಣ ಹಾಕಿ,ಜನರ ಪ್ರಾಣವನ್ನು ರಕ್ಷಿಸುವ ಕೆಲಸ ಮಾಡಬೇಕಾಗಿದೆ.

ವರದಿ: ಅಪ್ಪಾರಾಯ ಬಡಿಗೇರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ